2025ರ ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು? ಯಾಕೆ ಈ ಬೇಸರ?

Published : Dec 15, 2024, 03:04 PM IST
2025ರ ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು? ಯಾಕೆ ಈ ಬೇಸರ?

ಸಾರಾಂಶ

2025ರ ಸರ್ಕಾರಿ ರಜಾ ಪಟ್ಟಿ ಬಿಡುಗಡೆಯಾಗಿದ್ದು, ಹಲವು ರಜೆಗಳು ಭಾನುವಾರ ಬಂದಿರುವುದು ಸರ್ಕಾರಿ ನೌಕರರಲ್ಲಿ ಬೇಸರ ಮೂಡಿಸಿದೆ. 7 ಸರ್ಕಾರಿ ರಜೆಗಳು ಶನಿವಾರ ಮತ್ತು ಭಾನುವಾರ ಬಂದಿವೆ.

ಬೆಂಗಳೂರು: 2024ಕ್ಕೆ  ವಿದಾಯ ಹೇಳುವ  ಸಮಯ ಬಂದಿದ್ದು, 2025ರ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧವಾಗಿದ್ದಾರೆ. ಈಗಾಗಲೇ ಮುಂದಿನ ವರ್ಷ ಹೇಗಿರಬೇಕು ಎಂದು ಬಹುತೇಕರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಹೊಸ ವರ್ಷದ ಆಚರಣೆ  ಮಾಡಲು  ಉತ್ಸುಕರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಷಯವೊಂದು ಭಾರೀ ಚರ್ಚೆಗೆ  ಗ್ರಾಸವಾಗಿದೆ. 2025ರ ರಜಾಪಟ್ಟಿಯನ್ನು ಸಹ ಸರ್ಕಾರ ಬಿಡುಗಡೆಗೊಳಿಸಿದೆ. ಆದರೆ ಬಹುತೇಕ ಸರ್ಕಾರಿ ರಜೆಗಳು  ಭಾನುವಾರ ಬಂದಿವೆ. ಹಾಗಾಗಿ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ  ಎಂಬ ಪೋಸ್ಟ್  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶುಕ್ರವಾರ ನಂತರ ಮತ್ತು  ಭಾನುವಾರ ನಂತರದ ದಿನಗಳಲ್ಲಿ ಸರ್ಕಾರಿ ರಜೆ ಬಂದ್ರೆ ಜನರು ಖುಷಿಯಾಗುತ್ತಾರೆ. ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅದರ ನಂತರ ಅಥವಾ ಹಿಂದಿನ ದಿನಗಳಲ್ಲಿ ವಿಶೇಷ  ರಜಾ ದಿನಗಳು ಸಿಕ್ಕರೆ ಲಾಂಗ್ ಟ್ರಿಪ್ ಹೋಗಲು ಅಥವಾ ಇನ್ನಿತರ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಆದರೆ 2025ರಲ್ಲಿ ಶನಿವಾರ ಮತ್ತು ಭಾನುವಾರವೇ 7 ಸರ್ಕಾರಿ  ರಜೆಗಳು ಬಂದಿವೆ. ಹೀಗಾಗಿ 2025ರ  ರಜಾದಿನದ  ಕ್ಯಾಲೆಂಡರ್  ಬಹಿಷ್ಕರಿಸೋಣ ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಶನಿವಾರ ಮತ್ತು ಭಾನುವಾರ ಬಂದಿರುವ ರಜಾದಿನಗಳ ವಿವರ ಇಲ್ಲಿದೆ.

ದಿನಾಂಕಸಾರ್ವತ್ರಿಕ ರಜೆದಿನ
ಜನವರಿ 26ಗಣರಾಜ್ಯೋತ್ಸವಭಾನುವಾರ
ಮಾರ್ಚ್ 30ಯುಗಾದಿಭಾನುವಾರ
ಜೂನ್ 07ಬಕ್ರೀದ್ಶನಿವಾರ
ಜುಲೈ 06ಮೊಹರಂಭಾನುವಾರ
ಸೆಪ್ಟೆಂಬರ್ 21ಮಹಾಲಯ ಅಮವಾಸ್ಯೆಭಾನುವಾರ
ನವೆಂಬರ್ 1 ಕನ್ನಡ  ರಾಜ್ಯೋತ್ಸವಶನಿವಾರ
ನವೆಂಬರ್ 8ಕನಕದಾಸ ಜಯಂತಿಶನಿವಾರ

2024ರ ವರ್ಷ ಕೊನೆಗೊಳ್ಳಲು ಒಂದೂವರೆ ತಿಂಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ (public holidays 2025) 2025ರ ಸಾರ್ವತ್ರಿಕ ಹಾಗೂ ಪರಿಮಿತ ರಜಾದಿನಗಳ  (restricted holiday 2025) ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ. ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ,. 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಕ್ಯಾಲೆಂಡರ್‌ನಲ್ಲಿ 17 ಗೆಜೆಟೆಡ್ ರಜಾದಿನಗಳನ್ನು ಕಡ್ಡಾಯ ಎಂದು ರಜೆ ತೋರಿಸಲಾಗಿರುತ್ತದೆ. 

ಗಜೆಟೆಡ್ ರಜಾದಿನಗಳ ಪಟ್ಟಿ

ದಿನಾಂಕರಜೆ ಕಾರಣವಾರ
ಜನವರಿ 26ಗಣರಾಜ್ಯೋತ್ಸವಭಾನುವಾರ
ಫೆಬ್ರವರಿ 26ಮಹಾ ಶಿವರಾತ್ರಿ ಬುಧವಾರ
ಮಾರ್ಚ್ 14ಹೋಳಿಶುಕ್ರವಾರ
ಮಾರ್ಚ್ 31ಈದ್-ಉಲ್-ಫಿತರ್ಸೋಮವಾರ
ಏಪ್ರಿಲ್ 10 ಮಹಾವೀರ ಜಯಂತಿಗುರುವಾರ
ಏಪ್ರಿಲ್ 18ಗುಡ್ ಫ್ರೈಡೆಶುಕ್ರವಾರ
ಮೇ 12ಬುದ್ಧ ಪೂರ್ಣಿಮಸೋಮವಾರ
ಜೂನ್ 7ಬಕ್ರೀದ್ಶನಿವಾರ
ಜುಲೈ 6ಮೊಹರಂಭಾನುವಾರ
ಆಗಸ್ಟ್ 15ಸ್ವಾತಂತ್ರ್ಯ ದಿನಾಚರಣೆಶುಕ್ರವಾರ
ಆಗಸ್ಟ್ 16ಕೃಷ್ಣ ಜನ್ಮಾಷ್ಠಮಿಶನಿವಾರ
ಸೆಪ್ಟೆಂಬರ್ 5ಮಿಲಾದ್-ಉನ್-ನಬಿಶುಕ್ರವಾರ
ಅಕ್ಟೋಬರ್ 2ಗಾಂಧಿ ಜಯಂತಿಶುಕ್ರವಾರ
ಅಕ್ಟೋಬರ್ 2ದಸರಾಶುಕ್ರವಾರ
ಅಕ್ಟೋಬರ್ 20ದೀಪಾವಳಿಸೋಮವಾರ
ನವೆಂಬರ್ 5ಗುರು ನಾನಕ್ ಜಯಂತಿಬುಧವಾರ
ಡಿಸೆಂಬರ್ 25ಕ್ರಿಸ್ಮಸ್ಗುರುವಾರ

ಇದನ್ನೂ ಓದಿ: ಬಿಎಸ್‌ಎನ್‌ಎಲ್‌ಗೆ ಗುನ್ನಾ ಕೊಟ್ಟ ಜಿಯೋ; 10 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 2 ಬಿಗ್ ಆಫರ್ ಕೊಟ್ಟ ಅಂಬಾನಿ

ಐಚ್ಛಿಕ ರಜಾದಿನಗಳ ಪಟ್ಟಿ
ನಿಯಮಗಳ ಪ್ರಕಾರ ಪ್ರತಿ ಉದ್ಯೋಗಿಗೆ 12 ಐಚ್ಛಿಕ ರಜಾದಿನಗಳನ್ನು ನೀಡಲಾಗಿರುತ್ತದೆ. ಆದರೆ ಈ 12ರಲ್ಲಿ 3ನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿರುತ್ತದೆ. ಉದ್ಯೋಗಿಗಳುಉ ತಮ್ಮ ವೈಯಕ್ತಿಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕುಟುಂಬಕ್ಕಾಗಿ ಈ ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಸರಾಗೆ ಒಂದು ಹೆಚ್ಚುವರಿ ರಜೆಯನ್ನು ಸೇರಿಸಿಕೊಳ್ಳಬಹುದು. ಇನ್ನುಳಿದಂತೆ ಯಾವ   ಹಬ್ಬಕ್ಕೆ ಐಚ್ಛಿಕ ರಜೆ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ. 

ದಿನಾಂಕರಜೆವಾರ
ಜನವರಿ 1ಹೊಸ ವರ್ಷದ ಆಚರಣೆಬುಧವಾರ
ಜನವರಿ 6ಗುರು ಗೋಬಿಂದ್ ಸಿಂಗ್ ಜಯಂತಿಸೋಮವಾರ
ಜನವರಿ 14ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹುಮಂಗಳವಾರ
ಫೆಬ್ರವರಿ 2ಬಸಂತ್ ಪಂಚಮಿಭಾನುವಾರ
ಫೆಬ್ರವರಿ 12ಗುರುರವಿ ದಾಸ್ ಜಯಂತಿಬುಧವಾರ
ಫೆಬ್ರವರಿ 19ಶಿವಾಜಿ ಜಯಂತಿಬುಧವಾರ
ಫೆಬ್ರವರಿ 23ಸ್ವಾಮಿ ದಯಾನಂದ ಸರಸ್ವತಿ ಜಯಂತಿ ಭಾನುವಾರ
ಮಾರ್ಚ್ 13ಹೋಳಿ ದಹನ ದಿನ ಗುರುವಾರ
ಮಾರ್ಚ್ 14ಡೋಲ್‌ಯಾತ್ರಶುಕ್ರವಾರ
ಏಪ್ರಿಲ್ 16ರಾಮ ನವಮಿಭಾನುವಾರ
ಆಗಸ್ಟ್ 15ಜನ್ಮಾಷ್ಠಮಿಶುಕ್ರವಾರ
ಆಗಸ್ಟ್ 27ಗಣೇಶ ಚತುರ್ಥಿಬುಧವಾರ
ಸೆಪ್ಟೆಂಬರ್ 5ಓಣಂಬುಧವಾರ
ಸೆಪ್ಟೆಂಬರ್ 29ದಸರಾಮಂಗಳವಾರ
ಅಕ್ಟೋಬರ್ 1ದಸರಾ ಮಹಾನವಮಿಬುಧವಾರ
ಅಕ್ಟೋಬರ್ 7ವಾಲ್ಮೀಕಿ ಜಯಂತಿಮಂಗಳವಾರ
ಅಕ್ಟೋಬರ್ 10ಕರ್ವಾ ಚೌಥ್ಶುಕ್ರವಾರ
ಅಕ್ಟೋಬರ್ 20ನರಕ ಚತುರರ್ದಶಿಸೋಮವಾರ
ಅಕ್ಟೋಬರ್ 22ಗೋವರ್ಧನ ಪೂಜೆಬುಧವಾರ
ಅಕ್ಟೋಬರ್ 23ಭಾಯಿ ದುಜಾಗುರುವಾರ
ಅಕ್ಟೋಬರ್ 28 ಛತ್ ಪೂಜಾಮಂಗಳವಾರ
ನವೆಂಬರ್ 24ಗುರು ತೇಜ್ ಬಹದ್ಧೂರ್ ಜಯಂತಿಸೋಮವಾರ
ಡಿಸೆಂಬರ್ 24ಕ್ರಿಸ್ಮಸ್ ಸಂಜೆ ಬುಧವಾರ 

ಇದನ್ನೂ ಓದಿ: 2025-26ರ ಕರ್ನಾಟಕ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!