ಮಂಡ್ಯ ಬಸ್‌ ದುರಂತದಲ್ಲಿ ದೆವ್ವ, ಭೂತ ವದಂತಿ!

Published : Dec 14, 2018, 07:45 AM IST
ಮಂಡ್ಯ ಬಸ್‌ ದುರಂತದಲ್ಲಿ ದೆವ್ವ, ಭೂತ ವದಂತಿ!

ಸಾರಾಂಶ

ಮಂಡ್ಯ ಬಸ್‌ ದುರಂತದಲ್ಲಿ ದೆವ್ವ, ಭೂತ ವದಂತಿ ಹಿನ್ನೆಲೆ 21ರಂದು ಕನಗನಮರಡಿಯಲ್ಲಿ ಶಾಂತಿ ಹೋಮ!

ಮಂಡ್ಯ[ಡಿ.14]: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್‌ ದುರಂತ ನಡೆದ ವಿ.ಸಿ.ನಾಲೆ ಸುತ್ತಮುತ್ತಲು ಪ್ರೇತಾತ್ಮಗಳು ಓಡಾಡುತ್ತಿವೆ ಎಂಬ ವದಂತಿ ಹಬ್ಬಿದೆ. ಇದರಿಂದ ಭಯಭೀತರಾಗಿರುವ ಸುತ್ತಮುತ್ತಲ ಗ್ರಾಮಸ್ಥರು ಘಟನೆ ನಡೆದ ಸ್ಥಳದಲ್ಲಿ ಡಿ.21 ರಂದು ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ.

ನ.24 ರಂದು ವಿ.ಸಿ.ನಾಲೆಗೆ ಬಸ್‌ ಉರುಳಿ 30 ಮಂದಿ ಅಮಾಯಕರು ಜಲಸಮಾಧಿಯಾಗಿದ್ದರು. ದುರಂತ ನಡೆದ ಕೆಲವೇ ದಿನಗಳಲ್ಲಿ ಅದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿತ್ತು. ಮತ್ತೊಂದು ಬೈಕ್‌ ಅಪಘಾತಕ್ಕೀಡಾಗಿತ್ತು. ಈ ಎರಡು ಘಟನೆಗಳಿಂದ ಮಾನಸಿಕವಾಗಿ ಭೀತಿಗೊಳಗಾಗಿರುವ ಗ್ರಾಮಸ್ಥರು ಬಸ್‌ ಅಪಘಾತ ನಡೆದ ನಾಲೆಯ ಸುತ್ತಮುತ್ತ ದೆವ್ವ, ಭೂತಗಳು ಓಡಾಡುತ್ತಿವೆ ಎಂಬ ನಂಬಿಕೆ ಬೆಳೆಸಿಕೊಂಡಿದ್ದಾರೆ. ಈ ಕುರಿತು ಸಾಕಷ್ಟುವದಂತಿಗಳೂ ಹಬ್ಬಿರುವುದರಿಂದ ಈಗ ಆ ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ನಿರ್ಧರಿಸಿದ್ದಾರೆ.

ಪಾಂಡವಪುರದ ಪುರೋಹಿತರೊಬ್ಬರ ಮಾರ್ಗದರ್ಶನದಂತೆ ಕನಗನಮರಡಿ, ವದೆಸಮುದ್ರ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು ಗ್ರಾಮಸ್ಥರು ಸೇರಿ 50 ಸಾವಿರ ರುಪಾಯಿಗೂ ಹೆಚ್ಚು ಮೊತ್ತದಲ್ಲಿ ಶಾಂತಿ ಹೋಮ ನಡೆಸುತ್ತಿದ್ದಾರೆ.

ಏತನ್ಮಧ್ಯೆ, ದುರಂತ ನಡೆದ ಸ್ಥಳದಲ್ಲಿ ದೆವ್ವದ ಕಾಟದ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಜನರಲ್ಲಿ ಧೈರ್ಯ ತುಂಬಲು, ಜಾಗೃತಿ ಮೂಡಿಸಲು ಡಿ.7ರ ಅಮಾವಾಸ್ಯೆ ದಿನ ಪಾಂಡವಪುರ ವಿಜ್ಞಾನದ ಕೇಂದ್ರದ ಸದಸ್ಯರು ಡಾ. ಹುಲಿಕಲ… ನಟರಾಜು ನೇತೃತ್ವದಲ್ಲಿ ಇಡೀ ರಾತ್ರಿ ವಾಸ್ತವ್ಯವಿದ್ದು ಚರ್ಚೆ, ಸಂವಾದ ನಡೆಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!