ಯಾದಗಿರಿ ಜಿಲ್ಲೆಯಲ್ಲಿ ಗಾಂಧೀಜಿ ದೇಗುಲ, ನ್ಯಾಯ ಅರಸಿ ಬಂದವರಿಗೆ ಇಲ್ಲಿನ ಗಾಂಧಿ ಕಟ್ಟೆಯಲ್ಲೇ ಪಂಚಾಯಿತಿ!

Published : Oct 02, 2023, 05:52 AM IST
ಯಾದಗಿರಿ ಜಿಲ್ಲೆಯಲ್ಲಿ ಗಾಂಧೀಜಿ ದೇಗುಲ, ನ್ಯಾಯ ಅರಸಿ ಬಂದವರಿಗೆ ಇಲ್ಲಿನ ಗಾಂಧಿ ಕಟ್ಟೆಯಲ್ಲೇ ಪಂಚಾಯಿತಿ!

ಸಾರಾಂಶ

ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಮೂಲಕ ಬ್ರಿಟಿಷ್‌ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಇಲ್ಲೊಂದು ದೇಗುಲವಿದ್ದು, ನಿತ್ಯವೂ ಪೂಜೆ ನಡೆಯುತ್ತಿರುವುದು ವಿಶೇಷ.

ಬಸವರಾಜ ಎಂ. ಕಟ್ಟಿಮನಿ

ಹುಣಸಗಿ (ಅ.2): ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಮೂಲಕ ಬ್ರಿಟಿಷ್‌ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಇಲ್ಲೊಂದು ದೇಗುಲವಿದ್ದು, ನಿತ್ಯವೂ ಪೂಜೆ ನಡೆಯುತ್ತಿರುವುದು ವಿಶೇಷ.

ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ(balashettihal village gandhiji temple) ಎಂಬ ಪುಟ್ಟ ಗ್ರಾಮದಲ್ಲಿ ಸ್ವಾತಂತ್ರ್ಯಾ ನಂತರ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗಾಂಧೀಜಿ ಸ್ಮರಿಸುವ ದೇಗುಲವೊಂದನ್ನು ನಿರ್ಮಿಸಲಾಗಿದ್ದು, ಗಾಂಧೀ ಜಯಂತಿ(Gandhi jayanti) ಸೇರಿದಂತೆ ರಾಷ್ಟ್ರೀಯ ಹಬ್ಬಗಳಂದು ಈ ಐತಿಹಾಸಿಕ ಗುಡಿಯಲ್ಲಿರುವ ಗಾಂಧಿಜೀಯ ಪುಟ್ಟ ಮೂರ್ತಿಯನ್ನು ದೇವರಂತೆ ಪೂಜಿಸಲಾಗುತ್ತದೆ.

 

ಗಾಂಧೀಜಿಯವರ ಆಹಾರ ಕ್ರಮ ಅನುಸರಿಸಿ, ವೃದ್ಧಾಪ್ಯದಲ್ಲೂ ಆರೋಗ್ಯದಿಂದಿರಿ!

ಹುಣಸಗಿ ತಾಲೂಕಿನಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೋಗುವ ಮಾರ್ಗಮಧ್ಯೆ ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ಬಲಶೆಟ್ಟಿಹಾಳ ಗ್ರಾಮವಿದೆ. ಇಲ್ಲಿನ ಗಾಂಧೀವಾದಿ ಹಂಪಣ್ಣ ಸಾಹುಕಾರ ಅವರು ಸ್ವತಃ ತಾವೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ದೇವಸ್ಥಾನ ನಿರ್ಮಿಸಿದ್ದಾರೆ.

1948ರಲ್ಲಿ ನಾಥೂರಾಮ್‌ ಗೋಡ್ಸೆ ಗಾಂಧೀ ಅವರನ್ನು ಹತ್ಯೆ ಮಾಡಿದಾಗ, ಹಂಪಣ್ಣ ಸಾಹುಕಾರ ಅವರು ಬಲಶೆಟ್ಟಿಹಾಳ ಮಂಡಲದ ಸದಸ್ಯರಾಗಿದ್ದರು. ಅಹಿಂಸಾವಾದಿ, ಗಾಂಧಿವಾದಿಯಾಗಿದ್ದ ಹಂಪಣ್ಣ ಈ ಸುದ್ದಿಯನ್ನು ಕೇಳಿ ತಲ್ಲಣಗೊಂಡು, ಅವರು ತಮಗಿರುವ ಅಭಿಮಾನಕ್ಕಾಗಿ 1949ರಲ್ಲಿ ಗಾಂಧೀಜಿಗಾಗಿ ದೇವಸ್ಥಾನ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದರು ಎನ್ನಲಾಗಿದೆ.

ನ್ಯಾಯದ ಕಟ್ಟೆ: ಇದಾದ ಬಳಿಕ ಕೆಲವು ದಿನಗಳ ನಂತರ ಈ ಗಾಂಧೀಜಿ ದೇವಸ್ಥಾನದ ಕಟ್ಟೆ ನ್ಯಾಯದ ಕಟ್ಟೆಯಾಗಿ ಬದಲಾಯಿತು. ಗ್ರಾಮಸ್ಥರ ಯಾವುದೇ ಸಮಸ್ಯೆಗೂ ಇಲ್ಲಿ ನ್ಯಾಯ ಸಿಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ಅ.2ರಂದು ಮತ್ತು ರಾಷ್ಟ್ರೀಯ ಹಬ್ಬಗಳಂದು ಈ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿದು, ಮೂರ್ತಿಗೆ ಅಲಂಕಾರ ಮಾಡಿ, ಗಾಂಧೀಜಿ ಮೂರ್ತಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ.

ಸಂಸತ್‌ನಲ್ಲಿ ಕನ್ನಡ ಡಿಂಡಿಮ, ಅಖಂಡ ಭಾರತದ ನಕ್ಷೆ: 5000 ಕ್ಕೂ ಹೆಚ್ಚು ವಿವಿಧ ಕಲಾಕೃತಿಗಳ ಸಂಗಮ

ದಿ. ಹಂಪಣ್ಣ ಸಾಹುಕಾರ ಚಿಂಚೋಳಿ ಅವರು 1995ರಲ್ಲಿ ಮರಣ ಹೊಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಅವರ ಪುತ್ರನಾದ ಬಸವರಾಜ ಚಿಂಚೋಳಿ ಅವರ ನೇತೃತ್ವದಲ್ಲಿ ದಿನವೂ ದೇಗುಲದಲ್ಲಿ ಪೂಜೆ ನೆರೆವೇರುತ್ತಿದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಹೆಸರು ಅಮರ. ಅವರ ಆದರ್ಶಗಳು ಶಾಶ್ವತವಾಗಿ ಉಳಿಯಬೇಕಾದರೆ ಯುವ ಜನರು ಗಾಂಧೀ ತತ್ವಾದರ್ಶ ಬೆಳಿಸಿಕೊಳ್ಳಬೇಕು. ರಾಷ್ಟ್ರಪಿತನ ಸ್ಮರಣಾರ್ಥ ಗ್ರಾಮದ ಗಾಂಧೀಜಿ ಗುಡಿ ಇರುವುದು ನಮ್ಮ ಹೆಮ್ಮೆಯಾಗಿದೆ.

- ಬಸಣ್ಣ ಗೋಡ್ರಿ, ಕಸಾಪ ವಲಯ ಗೌರವ ಅಧ್ಯಕ್ಷ, ಬಲಶೆಟ್ಟಿಹಾಳ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ