ಗದಗ ವೀರಭದ್ರೇಶ್ವರ ಸನ್ನಿಧಿಯಲ್ಲಿ ಬುಸುಗುಟ್ಟಿದ 'ಜಟಾಧಾರಿ' ಸರ್ಪ: ನೋಡಿ ಮೂತ್ರ ಮಾಡಿಕೊಂಡ ಭಕ್ತರು!

Published : Jan 30, 2026, 06:08 PM IST
Gadag Massive snake at Veerabhadreshwara Temple leaves devotees terrified

ಸಾರಾಂಶ

ಗದಗಿನ ಐತಿಹಾಸಿಕ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ ದೈತ್ಯಾಕಾರದ ಸರ್ಪವೊಂದು ಪ್ರತ್ಯಕ್ಷವಾಗಿದೆ. ತಲೆಯ ಮೇಲೆ ಕೂದಲು ಇದೆ ಎನ್ನಲಾದ ಈ ಸರ್ಪವು, ದೇವಸ್ಥಾನದ ಆವರಣದಲ್ಲಿ ಅಡಗಿರುವ ನಿಧಿಯನ್ನು ಕಾಯುತ್ತಿದೆ ಎಂಬ ಚರ್ಚೆ ಸ್ಥಳೀಯರಲ್ಲಿ ಆರಂಭವಾಗಿದೆ.

ಗದಗ (ಜ.30): ಗದಗ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ದೈತ್ಯಾಕಾರದ ಸರ್ಪ ಪ್ರತ್ಯಕ್ಷವಾಗಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಸ್ಥಳೀಯರ ಪ್ರಕಾರ, ಈ ಹಾವು ಬರೋಬ್ಬರಿ ಎರಡು ಮಾರಿನಷ್ಟು ಉದ್ದವಿದೆಯಂತೆ! ಇದನ್ನು ಕಂಡವರು ಭಯದಿಂದ ಮೂತ್ರ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸರ್ಪದ ದರ್ಶನ ಕೇವಲ ಭಯವನ್ನಷ್ಟೇ ಅಲ್ಲದೆ, ಭಕ್ತರಲ್ಲಿ ಅಚ್ಚರಿಯನ್ನೂ ಮೂಡಿಸಿದೆ.

ಉತ್ಖನನ ವೇಳೆ ಹೆಡೆ ಎತ್ತಿದ 'ಜಟಾಧಾರಿ' ಸರ್ಪ?

ಇತ್ತೀಚೆಗೆ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ ಈ ಭಯಾನಕ ಸರ್ಪ ಪ್ರತ್ಯಕ್ಷವಾಗಿತ್ತಂತೆ. ಕೆಲಸ ಮಾಡುತ್ತಿದ್ದ ಕಾರ್ಮಿಕರ ಎದುರೇ ಹೆಡೆ ಎತ್ತಿ ಬುಸುಗುಟ್ಟುತ್ತಿದ್ದಂತೆ, ಕಾರ್ಮಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ವಿಶೇಷವೆಂದರೆ, ಈ ಹಾವಿಗೆ ತಲೆಯ ಮೇಲೆ ಕೂದಲು ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಆದರೆ ಇದು ಕಪ್ಪು ಬಣ್ಣದ ನಾಗರಹಾವಾಗಿದ್ದರಿಂದ ನೋಡುಗರಿಗೆ ಹಾಗೆ ಕಂಡಿರಬಹುದು ಎಂದು ಹೇಳಲಾಗುತ್ತಿದೆ.

ನಿಧಿಯ ಕಾವಲುಗಾರನೇ ಈ ನಾಗರಾಜ?

ಇಲ್ಲಿ ಹಳೆಯ ಕಾಲದ ಹಾವು ಇದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ದೇವಸ್ಥಾನದ ಭಕ್ತ ಅಶೋಕ್ ಬೂದಿಹಾಳ. ಹಳ್ಳಿಗರಲ್ಲಿ ಒಂದು ಗಾಢವಾದ ನಂಬಿಕೆಯಿದೆ - ಎಲ್ಲಿ ಪುರಾತನ ಕಾಲದ ಸರ್ಪಗಳಿರುತ್ತವೆಯೋ ಅಲ್ಲಿ ಅಗಾಧವಾದ ನಿಧಿ ಅಡಗಿರುತ್ತದೆ ಎಂಬುದು. ಹೀಗಾಗಿ, ದೇವಸ್ಥಾನದ ಆವರಣದಲ್ಲಿ ಅಡಗಿರುವ ನಿಧಿಯನ್ನು ಕಾಯಲು ಈ ಸರ್ಪ ಪ್ರತ್ಯಕ್ಷವಾಗಿದೆಯೇ ಎಂಬ ಚರ್ಚೆಗಳು ಈಗ ಜೋರಾಗಿವೆ.

ಬಾವಿಯಿಂದ ಬಂದಿತೇ ಮಿಸ್ಟರಿ ಹಾವು?

ಬೆಳ್ಳಂಬೆಳಗ್ಗೆ ದೇವಸ್ಥಾನದ ಬಳಿ ಕಾಣಿಸಿಕೊಂಡ ಈ ಸರ್ಪವು ಪಕ್ಕದಲ್ಲೇ ಇರುವ ಹಳೆಯ ಬಾವಿಯಿಂದ ಬಂದಿರಬಹುದು ಎಂಬ ಅಂದಾಜೂ ಇದೆ. ಆದರೆ, ಭಕ್ತ ಅಶೋಕ್ ಅವರು ಹೇಳುವಂತೆ, 'ನಾನು ಪೂಜೆಗೆ ಬಂದಾಗ ಅಲ್ಲಿ ಯಾವುದೇ ಹಾವು ಇರಲಿಲ್ಲ, ಆದರೆ ಜನರ ನಡುವೆ ಇಂತಹ ಸುದ್ದಿಗಳು ಹರಿದಾಡುತ್ತಿವೆ' ಎಂದರು. ಒಟ್ಟಿನಲ್ಲಿ ಈ ಸರ್ಪದ ಇರುವಿಕೆ ಈಗ ಭಕ್ತಿ ಮತ್ತು ಭಯದ ನಡುವಿನ ರೋಚಕ ಕಥೆಯಾಗಿ ಮಾರ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking News: ಸಾವಿಗೆ ಶರಣಾದ ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್; ಬಿಗ್‌ ಬಾಸ್ ಕನ್ನಡ ಶೋಗೆ ಹಣದ ಹೊಳೆ ಹರಿಸಿದ್ರು!
KSRTC, BMTC ಬಸ್‌ಗಳಲ್ಲಿ ಇನ್ಮುಂದೆ ಗುಟ್ಕಾ ಜಾಹೀರಾತು ಬ್ಯಾನ್: ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ