ಬೆಂಗಳೂರು: ಅಂಗಡಿಗೆ ಬೆಂಕಿ, ಮಾಲೀಕ ಸಜೀವ ದಹನ

Kannadaprabha News   | Asianet News
Published : Jul 25, 2020, 07:34 AM IST
ಬೆಂಗಳೂರು: ಅಂಗಡಿಗೆ ಬೆಂಕಿ, ಮಾಲೀಕ ಸಜೀವ ದಹನ

ಸಾರಾಂಶ

ಕೊರೋನಾ ಸೋಂಕಿತರು ಕಂಡು ಬಂದಿದ್ದರಿಂದ ಅವೆನ್ಯೂ ರಸ್ತೆಯ ಕೆಲ ಭಾಗವನ್ನು ಸೀಲ್‌ಡೌನ್‌| ಈ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ಸ್ವ ಇಚ್ಛೆಯಿಂದ ಸಂಪೂರ್ಣ ಬಂದ್‌ ಮಾಡಿದ್ದ ವ್ಯಾಪಾರಸ್ಥರು| ಗ್ರಂಥಿಗೆ ಅಂಗಡಿ ತೆರೆದಿತ್ತು. ಅಲ್ಲದೆ, ಬೆಂಕಿ ಹೊತ್ತಿ ಉರಿಯುವಾಗ ಯಾವುದೇ ಚೀರಾಟ ಶಬ್ಧ ಕೇಳಿಲ್ಲ. ಆತ್ಮಹತ್ಯೆಯೂ ಅಥವಾ ಆಕಸ್ಮಿಕ ಅವಘಡವೂ ಎಂಬುದು ತನಿಖೆ ವೇಳೆ ತಿಳಿದು ಬರಬೇಕಿದೆ|

ಬೆಂಗಳೂರು(ಜು.25):  ಗ್ರಂಥಿಗೆ ಅಗಂಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಭವಿಸಿದ್ದು, ಅಂಗಡಿ ಮಾಲೀಕ ಸಜೀವವಾಗಿ ದಹನವಾಗಿರುವ ದಾರುಣ ಘಟನೆ ಅವೆನ್ಯೂ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮನುಕುಮಾರ್‌ (44) ಮೃತ ದುರ್ದೈವಿ.

ಕೊರೋನಾ ಸೋಂಕಿತರು ಕಂಡು ಬಂದಿದ್ದರಿಂದ ಅವೆನ್ಯೂ ರಸ್ತೆಯ ಕೆಲ ಭಾಗವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ಸ್ವ ಇಚ್ಛೆಯಿಂದ ವ್ಯಾಪಾರಸ್ಥರು ಸಂಪೂರ್ಣ ಬಂದ್‌ ಮಾಡಿದ್ದರು. ಆದರೆ, ಗ್ರಂಥಿಗೆ ಅಂಗಡಿ ತೆರೆದಿತ್ತು. ಅಲ್ಲದೆ, ಬೆಂಕಿ ಹೊತ್ತಿ ಉರಿಯುವಾಗ ಯಾವುದೇ ಚೀರಾಟ ಶಬ್ಧ ಕೇಳಿಲ್ಲ. ಆತ್ಮಹತ್ಯೆಯೂ ಅಥವಾ ಆಕಸ್ಮಿಕ ಅವಘಡವೂ ಎಂಬುದು ತನಿಖೆ ವೇಳೆ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಶುಕ್ರವಾರ ಮಧ್ಯಾಹ್ನ 1.20ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷದಲ್ಲೇ ಇಡೀ ಅಂಗಡಿ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಒಂದು ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಂಗಡಿಯೊಳಗೆ ಸುಟ್ಟಅವಶೇಷಗಳಲ್ಲೇ ಮಾಲೀಕ ಮನುಕುಮಾರ್‌ ಮೃತದೇಹ ಕೂಡ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ