
ರಾಕೇಶ್.ಎನ್.ಎಸ್.
ಬೆಂಗಳೂರು(ಮೇ.06): ಪ್ರಸ್ತುತ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಭಾಗದಲ್ಲಿ ಕೊರೋನಾದಿಂದ ಮೃತಪಡುವವರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ವಿಶ್ಲೇಷಿಸಿದಾಗ ಸಾವಿಗೀಡಾಗುವವರ ಸಂಖ್ಯೆ ಆತಂಕ ಹುಟ್ಟಿಸುವ ರೀತಿಯಲ್ಲಿ ಜಾಸ್ತಿಯಾಗುತ್ತಿದೆ.
ಬೆಂಗಳೂರಿನಲ್ಲಿ ಮೇ 2ರಿಂದ ಮೇ 4ರವರೆಗಿನ ಮೂರು ದಿನಗಳಲ್ಲಿ ಒಟ್ಟು 3.01 ಲಕ್ಷ ಸಕ್ರಿಯ ಪ್ರಕರಣದಲ್ಲಿ 311 ಮಂದಿ ಅಸುನೀಗಿದ್ದರೆ, ಇದೇ ದಿನ ರಾಜ್ಯದ ಉಳಿದ ಭಾಗದಲ್ಲಿ ಕೇವಲ 1.62 ಲಕ್ಷ ಸಕ್ರಿಯ ಪ್ರಕರಣಗಳಿದ್ದರೂ 441 ಮಂದಿ ಮೃತರಾಗಿದ್ದಾರೆ.
ಮೇ 2 ರಂದು ಬೆಂಗಳೂರು ನಗರದಲ್ಲಿ 64 ಮಂದಿ, ರಾಜ್ಯದ ಬೇರೆ ಭಾಗಗಳಲ್ಲಿ 160 ಮಂದಿ ಅಸುನೀಗಿದ್ದರು. ಮೇ 3 ರಂದು ಬೆಂಗಳೂರಿನಲ್ಲಿ 115 ಮತ್ತು ಅನ್ಯಭಾಗದಲ್ಲಿ 124 ಹಾಗೆಯೇ ಮೇ.4 ರಂದು ಬೆಂಗಳೂರಿನಲ್ಲಿ 132 ಮತ್ತು ಬೇರೆ ಭಾಗಗಳಲ್ಲಿ 157 ಮಂದಿ ಅಸುನೀಗಿದ್ದಾರೆ.
"
ಮೊದಲ ಅಲೆಯ ಸಂದರ್ಭದಲ್ಲಿ ಬೆಂಗಳೂರಲ್ಲೇ ಹೆಚ್ಚು ಸಾವು ನೋವು ವರದಿಯಾಗುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಭಾಗಗಳಿಂದ ದಾಖಲೆಯ ಕೋವಿಡ್ ಸಾವು ದಾಖಲಾಗುತ್ತಲೇ ಇದೆ.
ಕಳೆದ ಏಳು ದಿನಗಳ ರಾಜ್ಯದ ಕೋವಿಡ್ ಮರಣ ದರ 0.6 ಇದ್ದರೆ ಬೆಂಗಳೂರು ನಗರದ ಮರಣ ದರ ಶೇ.0.5ರಷ್ಟಿದೆ. ಉಳಿದಂತೆ ಹಾವೇರಿ (ಶೇ.2), ಚಾಮರಾಜನಗರ ಶೇ.1.8, ರಾಮನಗರ ಶೇ. 1.4, ಚಿತ್ರದುರ್ಗ ಶೇ.1.3, ದಾವಣಗೆರೆ, ಬೀದರ್ ಮತ್ತು ಶಿವಮೊಗ್ಗ ಶೇ. 1.2, ಬಳ್ಳಾರಿ, ಯಾದಗಿರಿ, ಹಾಸನ ಶೇ 1.1, ವಿಜಯಪುರ ಶೇ.0.9, ಚಿಕ್ಕಮಗಳೂರು, ಉತ್ತರ ಕನ್ನಡ, ಧಾರವಾಡ ಶೇ.0.7, ಕಲಬುರಗಿ, ಬಾಗಲಕೋಟೆ ಮತ್ತು ಬೆಂಗಳೂರು ಗ್ರಾಮಾಂತರ ಶೇ.0.6ರ ಮರಣ ದರ ಹೊಂದಿದೆ. ರಾಜ್ಯದ 17 ಜಿಲ್ಲೆಗಳು ಬೆಂಗಳೂರಿಗಿಂತ ಹೆಚ್ಚಿನ ಮರಣ ದರ ಹೊಂದಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ