ಬೆಳೆ ಪರಿಹಾರಕ್ಕಾಗಿ ಡಿಕೆಶಿ ಕಾಲಿಗೆ ಬಿದ್ದ ರೈತ!

Published : Jan 11, 2019, 12:47 PM IST
ಬೆಳೆ ಪರಿಹಾರಕ್ಕಾಗಿ ಡಿಕೆಶಿ ಕಾಲಿಗೆ ಬಿದ್ದ ರೈತ!

ಸಾರಾಂಶ

ಬೆಳೆ ಪರಿಹಾರಕ್ಕಾಗಿ ರೈತನೋರ್ವ ಸಚಿವ ಡಿ.ಕೆ.ಶಿವಕುಮಾರ್‌ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ

ರಾಮನಗರ[ಜ.11]: ಬೆಳೆ ಪರಿಹಾರ ಕೊಡಿಸುವಂತೆ ರೈತನೋರ್ವ ಸಚಿವ ಡಿ.ಕೆ.ಶಿವಕುಮಾರ್‌ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನ ಪಣ್ಣಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಸಚಿವ ಡಿಕೆಶಿ ನೇತೃತ್ವದ ತಂಡ ಗುರುವಾರ ರಾಮನಗರ ಜಿಲ್ಲೆಯ ವಿವಿಧೆಡೆ ಬರ ಪರಿಶೀಲನೆ ನಡೆಸಿತು. ಈ ವೇಳೆ ಪಣ್ಣಯ್ಯನದೊಡ್ಡಿಗೆ ತಂಡ ಪರಿಶೀಲನೆಗೆ ಆಗಮಿಸಿದ ವೇಳೆ ಗ್ರಾಮದ ಕಾಂತರಾಜಪ್ಪ ಎಂಬುವರು ಸಚಿವ ಡಿಕೆಶಿ ಕಾಲಿಗೆ ಬಿದ್ದು, ಬೆಳೆ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡರು. ತಕ್ಷಣ ರೈತ ಕಾಲಿಗೆ ಬಿದ್ದಿದ್ದರಿಂದ ಕ್ಷಣಕಾಲ ತಬ್ಬಿಬ್ಬಾದ ಸಚಿವರು, ಪರಿಹಾರ ಒದಗಿಸುವ ಭರವಸೆ ನೀಡಿ ರೈತನನ್ನು ಸಮಾಧಾನ ಮಾಡುವ ಯತ್ನ ನಡೆಸಿದರು.

ಈ ವೇಳೆ ಸಚಿವರಾದ ಶಿವಶಂಕರ ರೆಡ್ಡಿ, ಡಿ.ಸಿ.ತಮ್ಮಣ್ಣ ಹಾಗೂ ವೆಂಕಟರಮಣಪ್ಪ ಇದ್ದರು. ಮುಂಗಾರು ಕೈಕೊಟ್ಟಹಿನ್ನೆಲೆಯಲ್ಲಿ ಕಾಂತರಾಜಪ್ಪ ಬಿತ್ತನೆ ಮಾಡಿದ ರಾಗಿ ಬೆಳೆ ನೆಲ ಕಚ್ಚಿತ್ತು ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ