
ಬೆಂಗಳೂರು ನಗರದಲ್ಲಿ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರದೇಶಗಳಲ್ಲಿ ಒಟ್ಟು 17 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ದಾಳಿಗಳು ಪ್ರಮುಖ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಮತ್ತು ಕ್ರಿಪ್ಟೋ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಸ್ಥಳಗಳನ್ನು ಒಳಗೊಂಡಿವೆ.
ಇಡಿ ಅಧಿಕಾರಿಗಳು ಕೆಳಗಿನ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ:
ಈ ಎಲ್ಲಾ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಯನಗರದ ಎನ್ಎಂಕೆಆರ್ವಿ ಕಾಲೇಜು ಸಮೀಪದಲ್ಲಿರುವ ಮಾಜಿ ಕೇಂದ್ರ ಸಚಿವ ಕೆ ರಹಮಾನ್ ಖಾನ್ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸದ ಮೇಲೆ ಬೆಳಗ್ಗೆ ಸುಮಾರು 6:30ಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಮೂವರು ಅಧಿಕಾರಿಗಳ ತಂಡ ಮನೆಗೆ ಪ್ರವೇಶಿಸಿ ತಲಾಶಿ ನಡೆಸಿದ್ದು, ಬ್ಯಾಂಕ್ ಖಾತೆಗಳ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಕೀಬ್ ಖಾನ್ ದೆಹಲಿ ಪಬ್ಲಿಕ್ ಸ್ಕೂಲ್ನ ಮಾಲೀಕರಾಗಿರುವುದಾಗಿ ತಿಳಿದುಬಂದಿದೆ. ಶ್ರೀಕಿ ಮತ್ತು ಹಕೀಬ್ ಖಾನ್ ನಡುವೆ ಹಣಕಾಸು ವ್ಯವಹಾರ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಇದೇ ಪ್ರಕರಣದ ಸಂಬಂಧವಾಗಿ ಕೆ. ರೆಹಮಾನ್ ಖಾನ್ ಅವರ ನಿವಾಸದಲ್ಲಿಯೂ ಶೋಧ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಕಂಪನಿಗಳ ಮೇಲೂ ದಾಳಿ ನಡೆದಿದೆ. ಹೋರೋಸ್ ಕ್ರಿಪ್ಟೋ ಕಂಪನಿ, ಇನ್ ಪೀಜಿ ಐಟಿ ಸೆಲ್ಯುಲೋಸ್ ಹಾಗೂ ಚಿಪ್ಸನ್ ಏವಿಯೇಷನ್ ಸಂಸ್ಥೆಗಳ ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ
ಈ ಪ್ರಕರಣದ ಮೂಲ 2020ರಲ್ಲಿ ದಾಖಲಾಗಿದ್ದ ಎಫ್ಐಆರ್ಗೆ ಸೇರಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯಶೋಧಾ ದೇವಿ ಎಂಬುವವರು ದೂರು ನೀಡಿದ್ದರು. ಶ್ರೀ ಶ್ರೀಕೃಷ್ಣ (ಶ್ರೀಕಿ), ರಾಬಿನ್ ಖಂಡೇಲ್ವಾಲ ಮತ್ತು ಅಜೀತ್ ಖಂಡೇಲ್ವಾಲ ಅವರು ₹28 ಲಕ್ಷ ಹೂಡಿಕೆ ಮಾಡಿದರೆ ₹45 ಲಕ್ಷ ಲಾಭ ದೊರೆಯುತ್ತದೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ದೂರುದಾರರು ಆರೋಪಿಗಳ ಮಾತು ನಂಬಿ ₹28 ಲಕ್ಷವನ್ನು ಅಜೀತ್ ಖಾತೆಗೆ ವರ್ಗಾಯಿಸಿದ್ದರೂ, ನಂತರ ಹಣವೂ ಲಾಭವೂ ದೊರೆಯದೆ ವಂಚನೆಗೊಳಗಾದರು.
ಈ ಪ್ರಕರಣದ ತನಿಖೆ ವೇಳೆ ನಲಪಾಡ್ ಕುಟುಂಬದ ಹೆಸರು ಕೂಡ ಹೊರಬಂದಿತ್ತು. ಶ್ರೀಕಿ ಮತ್ತು ನಲಪಾಡ್ ಸಹೋದರ ಓಮರ್ ನಲಪಾಡ್ ನಡುವಿನ ಪರಿಚಯದ ಹಿನ್ನೆಲೆಯಲ್ಲಿ, ಶ್ರೀಕಿ ನಲಪಾಡ್ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಕಿ ಹ್ಯಾಕ್ ಮಾಡಿದ ಬಿಟ್ಕಾಯಿನ್ ಅನ್ನು ಮುಂಬೈ ಮೂಲದ ವ್ಯಕ್ತಿಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆ ವ್ಯಕ್ತಿಯಿಂದ ಸುಮಾರು ₹10 ಲಕ್ಷ ಮೊತ್ತ ನಲಪಾಡ್ ಖಾತೆಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿಯನ್ನು ಎಸ್ಐಟಿ ಪರಿಶೀಲಿಸಿತ್ತು.
ಹಣ ವರ್ಗಾವಣೆ ಕುರಿತು ಎಸ್ಐಟಿ ತನಿಖೆ ನಡೆಸಿದರೂ, ಇನ್ನೂ ಅಂತಿಮ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ. ತನಿಖೆ ವೇಳೆ ಹಣವನ್ನು ಮರುಪಡೆಯಲು ಸಹಕರಿಸುವುದಾಗಿ ನಲಪಾಡ್ ಹೇಳಿದ್ದರೂ, ಇದುವರೆಗೆ ಹಣ ವಸೂಲಿಯಾಗಿಲ್ಲ ಎಂಬ ಮಾಹಿತಿ ಇದೆ.
ನಲಪಾಡ್ ಖಾತೆಗೆ ಹಣ ವರ್ಗಾವಣೆ ನಡೆದಿದ್ದರೂ, ಅವರನ್ನು ಅಧಿಕೃತ ಆರೋಪಿಯಾಗಿ ಘೋಷಿಸಲು ವಿಳಂಬವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳ ಒತ್ತಡದಿಂದ ಎಸ್ಐಟಿ ಮೃದುವಾಗಿ ವರ್ತಿಸಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈ ಬಿಟ್ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಹಣ ಶುದ್ಧೀಕರಣ ನಿರೋಧಕ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅದರ ಭಾಗವಾಗಿಯೇ ಇಂದು ನಡೆದ ದಾಳಿಗಳು ಮಹತ್ವ ಪಡೆದುಕೊಂಡಿವೆ.
ಒಟ್ಟಾರೆ, ಇಡಿ ನಡೆಸಿದ ಈ ವ್ಯಾಪಕ ದಾಳಿಗಳಿಂದ ಬಿಟ್ಕಾಯಿನ್ ಹಗರಣದ ಆರ್ಥಿಕ ವ್ಯವಹಾರಗಳು, ಸಂಪರ್ಕಗಳು ಹಾಗೂ ಹಣದ ಹಾದಿ ಕುರಿತು ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ