ಬರ-ಅತಿವೃಷ್ಟಿ ಅಧ್ಯಯನ: 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?

Kannadaprabha News   | Kannada Prabha
Published : Aug 05, 2026, 07:57 AM IST
Drought and Excessive Rainfall Assessment: CM Orders Appointment of Ministers for 31 Districts

ಸಾರಾಂಶ

ರಾಜ್ಯದಲ್ಲಿನ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿದ್ದಾರೆ. ಈ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿ ಅರಿತು ಡಿಸಿಎಂಗೆ ವರದಿ ಸಲ್ಲಿಸಲಿದ್ದಾರೆ.

ಬೆಂಗಳೂರು (ಆ.5): ರಾಜ್ಯದ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲು ಎಲ್ಲ 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದೇಶಿಸಿದ್ದಾರೆ.

ಎಲ್ಲ ಸಚಿವರು ತಮಗೆ ಸೂಚಿಸಿರುವ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ, ಪ್ರತಿ ತಾಲೂಕುಗಳಲ್ಲಿನ ಬರ ಮತ್ತು ಅತಿವೃಷ್ಟಿ ಪರಿಸ್ಥಿತಿ ಕುರಿತು ಪರಿವೀಕ್ಷಣೆ ನಡೆಸಿ ಅಲ್ಲಿನ ಸ್ಥಿತಿಗತಿಯ ವಾಸ್ತವ ಪರಿಸ್ಥಿತಿಯ ವರದಿ ಸಿದ್ಧಪಡಿಸಬೇಕು. ಆ ವರದಿಯನ್ನು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.

ಯಾರಿಗೆ ಯಾವ ಜಿಲ್ಲೆಯ ಪರಿವೀಕ್ಷಣೆ ಹೊಣೆ?

ಡಾ.ಜಿ.ಪರಮೇಶ್ವರ್‌-ತುಮಕೂರು, ಟಿ.ರಘುಮೂರ್ತಿ-ಚಿತ್ರದುರ್ಗ, ಬೈರತಿ ಸುರೇಶ್‌-ಚಿಕ್ಕಬಳ್ಳಾಪುರ, ಕೆ.ಎಚ್‌.ಮುನಿಯಪ್ಪ-ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ-ಕೋಲಾರ, ಎಚ್‌.ಸಿ.ಬಾಲಕೃಷ್ಣ-ಬೆಂಗಳೂರು ದಕ್ಷಿಣ, ಜಮೀರ್‌ ಅಹಮದ್‌ ಖಾನ್‌-ವಿಜಯನಗರ, ಕೆ.ಜೆ.ಜಾರ್ಜ್‌-ಚಿಕ್ಕಮಗಳೂರು, ಕೆ.ಎಂ. ಶಿವಲಿಂಗೇಗೌಡ-ಹಾಸನ, ಮಧು ಬಂಗಾರಪ್ಪ-ಶಿವಮೊಗ್ಗ, ಎಂ.ಬಿ.ಪಾಟೀಲ್‌-ವಿಜಯಪುರ, ವಿಜಯಾನಂದ ಕಾಶಪ್ಪನವರ್-ಬಾಗಲಕೋಟೆ, ಎಸ್.ಎಸ್‌.ಮಲ್ಲಿಕಾರ್ಜುನ-ದಾವಣಗೆರೆ, ರುದ್ರಪ್ಪ ಲಮಾಣಿ-ಹಾವೇರಿ, ಬಸವರಾಜ ರಾಯರೆಡ್ಡಿ-ಗದಗ, ಸತೀಶ್‌ ಜಾರಕಿಹೊಳಿ-ಬೆಳಗಾವಿ, ಸಂತೋಷ್‌ ಲಾಡ್‌-ಧಾರವಾಡ, ಲಕ್ಷ್ಮಣ ಸವದಿ-ಉತ್ತರ ಕನ್ನಡ, ಪ್ರಿಯಾಂಕ್‌ ಖರ್ಗೆ-ಕಲಬುರಗಿ, ಅಜಯ್‌ ಧರಂಸಿಂಗ್‌-ರಾಯಚೂರು, ಈಶ್ವರ್‌ ಖಂಡ್ರೆ-ಬೀದರ್‌, ಪಿ.ಎಂ.ನರೇಂದ್ರಸ್ವಾಮಿ-ಕೊಡಗು, ಯು.ಟಿ.ಖಾದರ್‌-ದಕ್ಷಿಣ ಕನ್ನಡ ಮತ್ತು ಉಡುಪಿ, ಯತೀಂದ್ರ ಸಿದ್ದರಾಮಯ್ಯ-ಮೈಸೂರು, ಎನ್‌. ಚಲುವರಾಯಸ್ವಾಮಿ-ಮಂಡ್ಯ, ಪುಟ್ಟರಂಗಶೆಟ್ಟಿ-ಚಾಮರಾಜನಗರ, ಬಿ.ನಾಗೇಂದ್ರ-ಬಳ್ಳಾರಿ, ಡಾ.ಶರಣಪ್ರಕಾಶ್‌ ಪಾಟೀಲ್‌-ಯಾದಗಿರಿ, ಶಿವರಾಜ್‌ ತಂಗಡಗಿ-ಕೊಪ್ಪಳ, ಕೃಷ್ಣ ಬೈರೇಗೌಡ-ಬೆಂಗಳೂರು ನಗರ.

ಸಚಿವ ಸಂಪುಟ ಪುನಾರಚನೆಯಾದ ಮರುದಿನವೇ ಸಚಿವರಿಗೆ ಬರ ಮತ್ತು ಅತಿವೃಷ್ಟಿ ಪರಿಶೀಲನೆಗೆ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ. ಅದಕ್ಕಾಗಿ 30 ಸಚಿವರಿಗೆ ತಲಾ ಒಂದು ಜಿಲ್ಲೆಗಳ ಪ್ರವಾಸ ಕೈಗೊಳ್ಳಲು ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬರ-ಅತಿವೃಷ್ಟಿ ಅಧ್ಯಯನ - 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?
'ಬನ್ರಪ್ಪಾ ನಿಮ್ ಜತೆ ನಾನಿದ್ದೀನಿ.. ಅದೇನ್ ಪ್ರಾಬ್ಲಂ ಹೇಳಿ ಎಂದ ಸಿಎಂ; ಕಾರಿಂದ ಇಳಿದು ಮರದ ಕೆಳಗೆ ಜೆನ್‌ಝೀ ದೂರು ಸ್ವೀಕರಿಸಿದ ಡಿಕೆಶಿ