Dream11, ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

Published : Oct 11, 2021, 07:47 AM ISTUpdated : Oct 11, 2021, 11:22 AM IST
Dream11,  ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

ಸಾರಾಂಶ

* ಆನ್‌ಲೈನ್‌ ಜೂಜು ಆ್ಯಪ್‌ ಡ್ರೀಮ್‌-11 ಬಂದ್‌ * ಬೆಂಗಳೂರಲ್ಲಿ ಕೇಸ್‌ ಬೆನ್ನಲ್ಲೇ ಸೇವೆ ಸ್ಥಗಿತ * ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಸಿಗದು

ನವದೆಹಲಿ(ಅ.11): ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್‌ ಗೇಮಿಂಗ್‌ ಆ್ಯಪ್‌(Online Gaming) ‘ಡ್ರೀಮ್‌ 11’(Dream 11) ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ(Karnataka) ತನ್ನ ಸೇವೆ ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದೆ. ಕಂಪನಿಯ ಸಂಸ್ಥಾಪಕರ ಮೇಲೆ 2 ದಿನದ ಹಿಂದೆ ಬೆಂಗಳೂರಿನಲ್ಲಿ(Bengaluru) ಪ್ರಕರಣ ದಾಖಲಾದ ಬೆನ್ನಲ್ಲೇ, ‘ಡ್ರೀಮ್‌ 11’ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಕಂಪನಿ ‘ನಮ್ಮ ಬಳಕೆದಾರರ ಕಳವಳವನ್ನು ದೂರ ಮಾಡುವ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ನಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಇದು, ನಮ್ಮ ಹಕ್ಕುಗಳ ಕುರಿತು ಯಾವುದೇ ಪೂರ್ವಾಗ್ರಹ ಮತ್ತು ಕಾನೂನಿನ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೈಗೊಂಡ ನಿಲುವು. ಈ ವಿಷಯದಲ್ಲಿ ನಾವು ನಮ್ಮ ಮುಂದಿರುವ ಎಲ್ಲಾ ಕಾನೂನು ಅವಕಾಶಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮದು ಜವಾಬ್ದಾರಿಯುತ, ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಯಾವುದೇ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದೆ.

"

‘ಡ್ರೀಮ್‌ 11’ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಫ್ಯಾಂಟಸಿ ಗೇಮಿಂಗ್‌(Fantacy Gaming) ಅವಕಾಶ ಒದಗಿಸುವ ವೇದಿಕೆಯಾಗಿದೆ. ಕಳೆದ ವರ್ಷ ಈ ಸ್ಟಾರ್ಟಪ್‌ನ ಮಾರುಕಟ್ಟೆ ಮೌಲ್ಯ 1 ಶತಕೋಟಿ ಡಾಲರ್‌ ದಾಟುವ ಮೂಲಕ, ಇಂಥ ಸಾಧನೆ ಮಾಡಿದ ಭಾರತದ ಮೊದಲ ಗೇಮಿಂಗ್‌ ಆ್ಯಪ್‌(Gaming App) ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಆದರೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಆನ್‌ಲೈನ್‌ ಗೇಮಿಂಗ್‌ ನಿಷೇಧಿಸಿ ಕಾನೂನು ಜಾರಿಗೊಳಿಸಿತ್ತು. ಅದರ ಹೊರತಾಗಿಯೂ ಕರ್ನಾಟಕದಲ್ಲಿ ಕಂಪನಿಯ ಸೇವೆ ಮುಂದುವರೆದಿದೆ ಎಂದು ಮೂರು ದಿನಗಳ ಹಿಂದೆ ಕ್ಯಾಬ್‌ ಚಾಲಕರೊಬ್ಬರು ಬೆಂಗಳೂರಿನಲ್ಲಿ ಕೇಸು ದಾಖಲಿಸಿದ್ದರು. ಜೊತೆಗೆ ಇದೇ ಕಾಯ್ದೆಯಡಿ ಶನಿವಾರವಷ್ಟೇ ಬೆಂಗಳೂರಿನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಕಂಪನಿ ಕರ್ನಾಟಕದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದೆ.

ಏನಿದು ಡ್ರೀಮ್‌-11?

ಇದೊಂದು ಆನ್‌ಲೈನ್‌ ಗೇಮಿಂಗ್‌ ಆ್ಯಪ್‌. ಇದರಲ್ಲಿ ಕ್ರಿಕೆಟ್‌ ಸೇರಿದಂತೆ ಹಲವು ಕ್ರೀಡೆಗಳ ಫ್ಯಾಂಟಸಿ ಗೇಮಿಂಗ್‌ಗೆ ಅವಕಾಶವಿದೆ. ಜನರು ಇದರಲ್ಲಿ ಹಣ ಬೆಟ್‌ ಕಟ್ಟಬಹುದು. ಕರ್ನಾಟಕದಲ್ಲಿ ಆನ್‌ಲೈನ್‌ ಗೇಮಿಂಗ್‌ ನಿಷೇಧಿಸಿದ ಬೆನ್ನಲ್ಲೇ ಇತ್ತೀಚೆಗೆ ಈ ಆ್ಯಪ್‌ ವಿರುದ್ಧ ಕೇಸು ದಾಖಲಿಸಿ, ಇದರಲ್ಲಿ ಬೆಟ್ಟಿಂಗ್‌ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌