ಸಿಂಗಲ್ ವೈಫ್ ಚಾಲೆಂಜ್‌ಗೆ ಸುಧಾಕರ್‌ಗೆ ಸಖತ್ ಟಾಂಗ್, ಬೇಕಿತ್ತಾ ಇವೆಲ್ಲಾ..!?

Suvarna News   | Asianet News
Published : Mar 24, 2021, 05:01 PM IST
ಸಿಂಗಲ್ ವೈಫ್ ಚಾಲೆಂಜ್‌ಗೆ ಸುಧಾಕರ್‌ಗೆ ಸಖತ್ ಟಾಂಗ್, ಬೇಕಿತ್ತಾ ಇವೆಲ್ಲಾ..!?

ಸಾರಾಂಶ

ಸುಧಾಕರ್ ಈ ರೀತಿ ಹೇಳುವುದು ಸರಿಯಲ್ಲ, ಎಲ್ಲರ ಬಗ್ಗೆ ಹೀಗೆ ಹೇಳಬಾರದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಬೆಂಗಳೂರು (ಮಾ. 24): 6 ಜನ ಶಾಸಕರು ಕೋರ್ಟ್‌ಗೆ ಹೋಗಿ ಸ್ಟೇ ತಂದ ವಿಚಾರಕ್ಕೆ ಕಾಂಗ್ರೆಸ್ ಅವರ ರಾಜಿನಾಮೆಗೆ ಒತ್ತಾಯಿಸಿದೆ. ಸೀಡಿ ಕೇಸ್ ಸಿಜೆ ತನಿಖೆ ಮಾಡಲಿ ಎಂದು ಬಿಗಿ ಪಟ್ಟು ಹಿಡಿದಿದೆ. ಸದನದಲ್ಲಿ ಸೀಡಿ ವಿಚಾರ ಬಹಳ ಸದ್ದು ಮಾಡಿದೆ. ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಹೋಗಿ, ಸುಧಾಕರ್ ಹಾಕಿದ ಸಿಂಗಲ್ ವೈಫ್ ಚಾಲೆಂಜ್ ಹಾಕಿದ್ದಾರೆ. ಇದಕ್ಕೆ ಒಬ್ಬೊಬ್ಬರೇ ಪ್ರತಿಕ್ರಿಯಿಸುತ್ತಿದ್ದಾರೆ. 

ರಾಜ್ಯದಲ್ಲಿ- ಕೇಂದ್ರದಲ್ಲಿ ಅವರದ್ಧೇ ಸರ್ಕಾರವಿದೆ. ತನಿಖೆ ಮಾಡಿಸಲಿ ಎಂದು ರೇವಣ್ಣ ಹೇಳಿದ್ದಾರೆ. 

ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ಕೊಡಬಾರದು. ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಶಾಸಕ ರಾಜುಗೌಡ ಹೇಳಿದ್ದಾರೆ. 

ಸುಧಾಕರ್ ಈ ರೀತಿ ಹೇಳುವುದು ಸರಿಯಲ್ಲ, ಎಲ್ಲರ ಬಗ್ಗೆ ಹೀಗೆ ಹೇಳಬಾರದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಸುಧಾಕರ್ ತಮ್ಮನ್ನೇ ತೇಜೋವಧೆ ಮಾಡ್ಕೋತಿದಾರೆ ಎಂದು ಶಾಸಕಿ ರೂಪಾ ಶಶಿಧರ್ ಟಾಂಗ್ ನೀಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್