ಮುದಿ ಹಸುಗಳಿಗೆ 1 ಲಕ್ಷ ಪರಿಹಾರ ಕೊಡ್ತೀರಾ : ಡಿಕೆಶಿ

Kannadaprabha News   | Asianet News
Published : Dec 09, 2020, 07:55 AM ISTUpdated : Dec 09, 2020, 08:02 AM IST
ಮುದಿ ಹಸುಗಳಿಗೆ 1 ಲಕ್ಷ ಪರಿಹಾರ ಕೊಡ್ತೀರಾ : ಡಿಕೆಶಿ

ಸಾರಾಂಶ

ಮುದಿ ಹಸುಗಳಿಗೆ ರೈತರಿಗೆ 1 ಲಕ್ಷ ಪರಿಹಾರ ಸಿಗಲಿದ್ಯಾ ಹೀಗೊಂದು ಸವಾಲನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ಮುಂದಿಟ್ಟಿದ್ದಾರೆ.

ಬೆಂಗಳೂರು (ಡಿ.09):  ಗೋಹತ್ಯೆ ನಿಷೇಧ ಕಾಯಿದೆ ತರಲು ಹೊರಟಿರುವ ಬಿಜೆಪಿ ಸರ್ಕಾರವು ರೈತರ ವಯಸ್ಸಾಗಿರುವ ಹಾಗೂ ನಿರುಪಯುಕ್ತ ಹಸುಗಳಿಗೆ ನಷ್ಟಪರಿಹಾರ ನೀಡುತ್ತದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ. 

ಗೋಹತ್ಯೆ ನಿಷೇಧ ಕಾಯಿದೆ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ಕಾಯ್ದೆ ಜಾರಿಯಲ್ಲಿದ್ದು, ರಾಜಕೀಯಕ್ಕಾಗಿ ಮತ್ತೊಂದು ಕಾಯಿದೆ ಮಾಡಲು ಹೊರಟಿದೆ. 

ಬೆಳಗಾವಿ ಬೈ ಎಲೆಕ್ಷನ್: ಕೊನೆಗೂ ಪ್ರಬಲವಾಗಿ ಕೇಳಿಬಂತು ಒಬ್ಬರ ಹೆಸರು ..!

ಒಂದು ಕೋಮಿನ ವಿರುದ್ಧ ಹಗೆ ಸಾಧಿಸಲು ಹೊರಟಂತಿದೆ. ಹಳ್ಳಿಗಳಲ್ಲಿ ಬಡ ರೈತರು ತಾವು ಸಾಕಿದ್ದ ಹಸುಗಳು ವಯಸ್ಸಾಗಿ, ನಿರುಪಯುಕ್ತವಾದ ಮೇಲೆ ನಿರ್ವಹಣೆ ಕಷ್ಟವಾಗಿ ಮಾರುವುದು ಸಹಜ.

ಕಾಯ್ದೆ ಮೂಲಕ ಇದಕ್ಕೆ ಅಡ್ಡಿಪಡಿಸಲು ಹೊರಟಿರುವ ಸರ್ಕಾರವು ರೈತರಿಗೆ 50 ಸಾವಿರ ಅಥವಾ 1 ಲಕ್ಷ ರು. ಪರಿಹಾರ ನೀಡಬೇಕು. ಪರಿಹಾರ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ