'ಇದು ಹಿಂದುತ್ವದ ಭದ್ರಕೋಟೆ ಅಂತಾ ಯಾರು ಹೇಳಿದ್ದು?' ಧರ್ಮಸ್ಥಳದಲ್ಲಿ ನಿಂತು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ!

Published : Apr 20, 2025, 01:27 PM ISTUpdated : Apr 20, 2025, 01:46 PM IST
'ಇದು ಹಿಂದುತ್ವದ ಭದ್ರಕೋಟೆ ಅಂತಾ ಯಾರು ಹೇಳಿದ್ದು?' ಧರ್ಮಸ್ಥಳದಲ್ಲಿ ನಿಂತು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ!

ಸಾರಾಂಶ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಧರ್ಮಸ್ಥಳದಲ್ಲಿ ಕಾಂಗ್ರೆಸ್ ಸಮಾವೇಶ, ಸಮುದಾಯ ಭವನ ಉದ್ಘಾಟನೆ ಮತ್ತು ಮಂಜುನಾಥ ಸ್ವಾಮಿ ದರ್ಶನದಲ್ಲಿ ಭಾಗವಹಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಜನರ ಬದುಕು ಮುಖ್ಯ, ಭಾವನೆಗಿಂತ ಬದುಕಿನ ರಾಜಕೀಯ ಮಾಡಬೇಕು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಧರ್ಮಸ್ಥಳ(ಏ.20): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಧರ್ಮಸ್ಥಳದಲ್ಲಿ ಕಾಂಗ್ರೆಸ್ ಸಮಾವೇಶ, ಸಮುದಾಯ ಭವನ ಉದ್ಘಾಟನೆ ಮತ್ತು ಮಂಜುನಾಥ ಸ್ವಾಮಿ ದರ್ಶನದಲ್ಲಿ ಭಾಗವಹಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಜನರ ಬದುಕು ಮುಖ್ಯ, ಭಾವನೆಗಿಂತ ಬದುಕಿನ ರಾಜಕೀಯ ಮಾಡಬೇಕು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
 
ಇಲ್ಲಿನ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಸಹಾಯವಾಗುತ್ತಿದೆ ಹೊರತು ಬಿಜೆಪಿಗೆ ಓಟ್ ಹಾಕಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಶಿವಕುಮಾರ್ ಜನರಿಗೆ ಮನವರಿಕೆ ಮಾಡಿದರು. 'ಇದು ಹಿಂದುತ್ವದ ಭದ್ರಕೋಟೆ ಎಂದು ಯಾರು ಹೇಳಿದ್ದು ಎಂದು ಪ್ರಶ್ನಿಸಿದ ಅವರು, ಇದು ಹಿಂದುತ್ವದ ಭದ್ರಕೋಟೆ ಅಲ್ಲ, ಎಲ್ಲಾ ಧರ್ಮಗಳ ಭದ್ರಕೋಟೆ. ಇಲ್ಲಿ ಜಾತಿ-ಧರ್ಮದ ಮೇಲಲ್ಲ, ನೀತಿಯ ಮೇಲೆ ಎಲ್ಲವೂ ನಡೆಯುತ್ತದೆ. ಇಲ್ಲಿ ಕೃಷಿಕರು, ಜೈನರು, ಒಕ್ಕಲಿಗರು, ಬಿಲ್ಲವರು, ಲಿಂಗಾಯತರು ಎಲ್ಲರೂ ಒಂದೇ ಎಂದು ಒಗ್ಗಟ್ಟಿನ ಸಂದೇಶ ನೀಡಿದರು.

ಇದನ್ನೂ ಓದಿ: 'ರಸ್ತೆಗುಂಡಿ ಮುಚ್ಚಿ ಎಂದ್ರೆ ಎಕ್ಸ್ ಖಾತೆ ಬ್ಲಾಕ್ ಮಾಡ್ತೀರಾ?' BBMP ವಿರುದ್ಧ ಬೆಂಗಳೂರಿಗರು ಕಿಡಿ!

ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಪತ್ರವನ್ನು ತಾವು ನೋಡಿಲ್ಲವೆಂದು ಹೇಳಿದ ಶಿವಕುಮಾರ್, 'ಕಾಂಗ್ರೆಸ್ ಎಲ್ಲರಿಗೂ ನ್ಯಾಯ ಕೊಡುವ ಸಿದ್ಧಾಂತ ಹೊಂದಿದೆ. ತುಳಿತಕ್ಕೊಳಗಾದ ಸಮಾಜಕ್ಕೆ ಶಕ್ತಿ ನೀಡುತ್ತೇವೆ' ಎಂದರು. 90% ಜಾತಿಗಣತಿ ಕೆಲಸ ಮುಗಿದಿದ್ದು, ಉಳಿದ 10% ಪೂರ್ಣಗೊಳಿಸಿ ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ತಾಳ್ಮೆಯಿಂದ ಇರಿ' ಎಂದು ಮನವಿ ಮಾಡಿದರು. ಈ ವೇಳೆ ವಕ್ಫ್ ವಿವಾದ ಸಂಬಂಧ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, 'ನಾನು ಆರ್. ಅಶೋಕ್ ವಕ್ತಾರನಲ್ಲ, ಕಾಂಗ್ರೆಸ್ ವಕ್ತಾರ' ಎಂದು ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌