ಕೇರಳದ ಶರತ್,ಕೃಪೇಶ್ ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಘೋಷಿಸಿದ ಡಿಸಿಎಂ ಡಿಕೆಶಿ

Published : Feb 17, 2025, 08:43 PM ISTUpdated : Feb 17, 2025, 09:02 PM IST
ಕೇರಳದ ಶರತ್,ಕೃಪೇಶ್ ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಘೋಷಿಸಿದ ಡಿಸಿಎಂ ಡಿಕೆಶಿ

ಸಾರಾಂಶ

ಕೇರಳದಲ್ಲಿ ಶರತ್-ಕೃಪೇಶ್ ಸ್ಮಾರಕಕ್ಕೆ ಡಿಕೆ ಶಿವಕುಮಾರ್ ₹25 ಲಕ್ಷ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬರುವುದೆಂದೂ, ಎಲ್‌ಡಿಎಫ್ ಆಡಳಿತದ ಬಗ್ಗೆ ಜನರಿಗೆ ಬೇಸರವಾಗಿದೆ ಎಂದೂ ಹೇಳಿದರು. ಶಶಿ ತರೂರ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಿಪಿಐಎಂ ವಿರುದ್ಧದ 'ನರಭಕ್ಷಕ' ಪದ ತೆಗೆದು, ಹಿಂಸೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಕೊಲೆಯಾದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಮಾರಕ ನಿರ್ಮಾಣವಾಗಲಿದೆ.

ಕಾಸರಗೋಡು: ನೆರೆಯ ಕೇರಳ ರಾಜ್ಯದ ಪ್ರವಾಸದಲ್ಲಿರುವ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಶರತ್-ಕೃಪೇಶ್ ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಕೇರಳದ ಜನರಿಗೆ ಎಲ್‌ಡಿಎಫ್ ಆಡಳಿತದ ಬಗ್ಗೆ ಬೇಸರವಾಗಿದೆ ಎಂದು  ಹೇಳಿದ್ದಾರೆ. ಕೇರಳದಲ್ಲಿ ಯುಡಿಎಫ್ ಪ್ರಬಲವಾಗಿ ಮರಳಿ ಬರುತ್ತದೆ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಗೂಂಡಾಗಳ ಸರ್ಕಾರವಾಗಿರುವುದಿಲ್ಲ ಎಂದರು. ಶರತ್ ಲಾಲ್ - ಕೃಪೇಶ್ ರಕ್ತಸಾಕ್ಷಿಗಳಿಗೆ ಸ್ಮಾರಕ ನಿರ್ಮಿಸಲು ಕರ್ನಾಟಕ ಕಾಂಗ್ರೆಸ್ 25 ಲಕ್ಷ ರೂ.ಗಳನ್ನು ನೀಡಲಿದೆ ಎಂದು ಡಿಕೆ ಹೇಳಿದರು.

ಲವ್ ಜಿಹಾದ್ ಪ್ರಕರಣ: 3 ಮಕ್ಕಳ ಮುಸ್ಲಿಂ ತಂದೆ ಜೊತೆ ಓಡಿಹೋದ 22ರ ಹುಡುಗಿ ದೀಕ್ಷಾ!

ಅದೇ ಸಮಯದಲ್ಲಿ, ಸಿಪಿಐಎಂನ ಹಿಂಸಾತ್ಮಕ ರಾಜಕೀಯವನ್ನು ಟೀಕಿಸುತ್ತಾ ಶಶಿ ತರೂರ್ ಎಂಪಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬದಲಾವಣೆ ಮಾಡಿದ್ದಾರೆ. ಪೆರಿಯಾದಲ್ಲಿ ಕೊಲ್ಲಲ್ಪಟ್ಟ ಶರತ್ ಲಾಲ್ ಮತ್ತು ಕೃಪೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಫೇಸ್‌ಬುಕ್ ಪೋಸ್ಟ್‌ನಲ್ಲಿ 'ನರಭಕ್ಷಕ' ಪದವನ್ನು ತರೂರ್ ತೆಗೆದು ಹಾಕಿದ್ದಾರೆ. ಸಿಪಿಐಎಂ ನರಭಕ್ಷಕರು ಕೊಂದ ಸಹೋದರರು ಎಂಬುದು ಪೋಸ್ಟ್ ಆಗಿತ್ತು. ಕಳೆದ ದಿನಗಳಲ್ಲಿ ಪ್ರಕಟವಾದ ಲೇಖನದಲ್ಲಿನ ಉದ್ಯಮ ಸ್ನೇಹಿ ಕೇರಳದ ಅವಲೋಕನ ಮತ್ತು ಮೋದಿಯವರ ಅಮೇರಿಕನ್ ಭೇಟಿಯನ್ನು ಹೊಗಳಿದ ಹೇಳಿಕೆ ವಿವಾದಾತ್ಮಕವಾಗಿದ್ದ ಸಂದರ್ಭದಲ್ಲಿ ಶಶಿ ತರೂರ್ ಅವರ ಹೊಸ ಪೋಸ್ಟ್ ಹೆಚ್ಚಿನ ಗಮನ ಸೆಳೆದಿತ್ತು. ಇದರಲ್ಲಿ ಸಿಪಿಐಎಂ ನರಭಕ್ಷಕರು ಕೊಂದರು ಎಂಬ ಭಾಗವನ್ನು ಶಶಿ ತರೂರ್ ಬದಲಾಯಿಸಿದ್ದಾರೆ. ಪ್ರಜಾಪ್ರಭುತ್ವ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಪರಿಹಾರವಲ್ಲ ಎಂಬ ಹೇಳಿಕೆಯೊಂದಿಗೆ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.

ಕೈ ಮೀರುವ ಹಂತಕ್ಕೆ ಬಂತಾ ಕಾಂಗ್ರೆಸ್ ಅಂತರ್ಯುದ್ಧ? | Suvarna Party Rounds | DK Shivakumar VS Siddaramaiah

ಯಾರು ಈ ಶರತ್ ಲಾಲ್  ಮತ್ತು ಕೃಪೇಶ್: 
2019ರಲ್ಲಿ ಕಾಸರಗೋಡು ಜಿಲ್ಲೆಯ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ  ಕಳ್ಳಿಯೊಟ್‌ನ ಕೃಪೇಶ್ (19) ಮತ್ತು ಶರತ್ ಲಾಲ್ (21) ರವರ ಜೋಡಿ ಕೊಲೆಯಾಗಿತ್ತು. ಕಳೆದ ಡಿಸೆಂಬರ್‌ 2024ರಲ್ಲಿ ಪ್ರಕರಣದಲ್ಲಿ 14 ಮಂದಿ ದೋಷಿಯೆಂದು ಕೋರ್ಟ್ ತೀರ್ಪು ನೀಡಿತ್ತು. ಜನವರಿಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಿ ಹತ್ತು ಮಂದಿ ಅಪರಾಧಿಗಳಿಗೆ ಜೀವಾವಧಿ ಸಜೆ ಹಾಗೂ ನಾಲ್ಕು ಮಂದಿಗೆ ತಲಾ ಐದು ವರ್ಷ ಶಿಕ್ಷೆ ಘೋಷಿಸಿ ಎರ್ನಾಕುಲಂ ಸಿಬಿಐ ನ್ಯಾಯಾಲಯ ತೀರ್ಪು ನೀಡಿತ್ತು. 

ಪ್ರಕರಣದಲ್ಲಿ ಮಾಜಿ ಶಾಸಕ ಕೆ. ವಿ ಕುಂಞ ರಾಮನ್, ಕಾಞ೦ಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಸೇರಿ 14 ಮಂದಿ ಅಪರಾಧಿಗಳಾಗಿದ್ದಾರೆ. 2019ರ ಫೆಬ್ರವರಿ 17ರ ರಾತ್ರಿ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್, ಕ್ರೈಂ ಬ್ರಾಂಚ್ ಹಾಗೂ ಸಿಬಿಐ ತನಿಖೆ ನಡೆಸಿತ್ತು. ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಹತ್ತು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ