
ದಾವಣಗೆರೆ : ರೈಲ್ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ₹58,000 ಕೋಟಿ ನೀಡಿದ್ದು, ಬೆಂಗಳೂರು- ತುಮಕೂರು- ಚಿತ್ರದುರ್ಗ-ದಾವಣಗೆರೆ, ದಾವಣಗೆರೆ- ರಾಯದುರ್ಗ, ರಾಯದುರ್ಗ- ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ ₹7800 ಕೋಟಿ ನೀಡಿರುವುದಾಗಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ತೋಳಹುಣಸೆ, ಅನಗೋಡು ಗ್ರಾಮಗಳಲ್ಲಿ ಗುರುವಾರ ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗ, ಬೆಂಗಳೂರು- ತುಮಕೂರು ಮಾರ್ಗ, ರಾಯದುರ್ಗ- ತುಮಕೂರು ಮಾರ್ಗ, ತಾಳಗುಪ್ಪ ರೈಲ್ವೆ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೇ ಮಾರ್ಗದಲ್ಲಿ 2 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ 246 ಎಕರೆ ಹೊರತುಪಡಿಸಿದರೆ, ಉಳಿದಿದ್ದು ಸಮಸ್ಯೆ ಇಲ್ಲ ಎಂದರು.
211 ಎಕರೆ ಒಂದೇ ಕಡೆ ಇದ್ದು, 11 ಎಕರೆ ಚಿತ್ರದುರ್ಗದಲ್ಲಿ, ಉಳಿದ ಜಾಗ ಬೇರೆ ಬೇರೆ ಕಡೆ ಇದೆ. ಇನ್ನು 2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಅವರು ಹೇಳಿದರು.
ಕಳೆದ 3 ದಿನದ ರಾಜ್ಯದ ಹಳೆ ರೈಲ್ವೇ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ಒಂದೇ ನಾಣ್ಯದ ಮುಖಗಳಾಗಿದ್ದು, ಎಲ್ಲವೂ ಅಭಿವೃದ್ಧಿಯಾಗಬೇಕು.
ನೇರ ಮಾರ್ಗದಿಂದ ಜನರ ಅಮೂಲ್ಯವಾದ ಎರಡೂ ಗಂಟೆ ಉಳಿತಾಯವಾಗುತ್ತದೆ. ಬೆಂಗಳೂರು-ದಾವಣರೆ ಮಧ್ಯೆ ಅಂತರ ಕಡಿಮೆಯಾಗುತ್ತದೆ. ಉತ್ತರ ಕರ್ನಾಟಕ-ಬೆಂಗಳೂರು ಮಧ್ಯೆ ಇರುವ ಅಂತರ ಸಹ ಕಡಿಮೆಯಾದಂತಾಗುತ್ತದೆ. ದಾವಣಗೆರೆಯಿಂದ ಪರಿಶೀಲನೆ ನಡೆಸಿದ್ದೇವೆ. ಚಿತ್ರದುರ್ಗ, ಶಿರಾದಲ್ಲಿ ಇವತ್ತೇ ಸಭೆ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ