
ಹುಬ್ಬಳ್ಳಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ಜನಪ್ರಿಯತೆ ಹೆಚ್ಚುತ್ತಿದೆ. ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ್ ಶೇಕಡ 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ.
ಉತ್ತಮ ವಾತಾವರಣ, ಸ್ವಚ್ಛತೆ, ಶುಚಿಯಾದ ಊಟ ಮತ್ತು ತ್ವರಿತವಾಗಿ ಗಮ್ಯಸ್ಥಾನ ತಲುಪಿಸಲು ಸಹಕಾರಿಯಾಗಿರುವ ರೈಲು ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಪ್ರಯಾಣ ದರ ಹೆಚ್ಚಿದ್ದರೂ ಸೌಲಭ್ಯ ಮತ್ತು ಮೇಕ್ ಇನ್ ಇಂಡಿಯಾದಡಿ ಆರಂಭವಾಗಿರುವ ರೈಲಿನಲ್ಲಿ ಸಂಚರಿಸುವುದೇ ಹೆಮ್ಮೆ ಎನ್ನುತ್ತಾರೆ ಪ್ರಯಾಣಿಕರು.
ಪ್ರತಿ ತಿಂಗಳು ಅಂದಾಜು 12000ಕ್ಕಿಂತ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಶೇ.101ರಷ್ಟು ಬುಕ್ಕಿಂಗ್ನೊಂದಿಗೆ ₹1.30 ಕೋಟಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದೆ.
ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳ ಪಟ್ಟಿ:
ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು (ನಿಲುಗಡೆ- ಕಟ್ಪಾಡಿ, ಬೆಂಗಳೂರು)
ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್ (ನಿಲುಗಡೆ- ಮಂಡ್ಯ, ಬೆಂಗಳೂರು, ಕೆಆರ್ ಪುರಂ, ಕಟ್ಪಾಡಿ)
ಕಲಬುರಗಿ - ಎಸ್ಎಂವಿಟಿ ಬೆಂಗಳೂರು (ನಿಲುಗಡೆ- ಯಾದಗಿರಿ, ಮಂತ್ರಾಲಯ, ರಾಯಚೂರು,ಗುಂತಕಲ್, ಅನಂತಪುರ, ಯಲಹಂಕ )
ಕೆಎಸ್ಆರ್ ಬೆಂಗಳೂರು - ಧಾರವಾಡ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ)
ಮಂಗಳೂರು ಸೆಂಟ್ರಲ್ - ತಿರುವನಂತಪುರ (ನಿಲುಗಡೆ- ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ತಿರೂರು, ಶೋರನೂರು, ತಿಶೂರ್, ಎರ್ನಾಕುಲಂ, ಆಲಪೇಯ್, ಕೊಲ್ಲಂ)
ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು (ನಿಲುಗಡೆ- ಧರ್ಮಾಪುರಿ, ಸೇಲಂ, ಇರೋಡ್, ತಿರುಪ್ಪೂರ್)
ಮಂಗಳೂರು ಸೆಂಟ್ರಲ್ - ಮಡಗಾಂವ್ (ನಿಲುಗಡೆ- ಉಡುಪಿ, ಕಾರವಾರ)
ಬೆಂಗಳೂರು ಯಶವಂತಪುರ - ಕಾಚೇಗುಡ ಹೈದರಾಬಾದ್ (ನಿಲುಗಡೆ- ಧರ್ಮಾವರಂ, ಅನಂತಪುರ, ಕರ್ನೂಲ್, ಮೆಹಬೂಬ್ನಗರ)
ಬೆಂಗಳೂರು ಕಂಟೋನ್ಮೆಂಟ್ - ಮಧುರೈ (ನಿಲುಗಡೆ- ದಿಂಡಗಲ್, ತಿರುಚಿ, ಕರೂರು, ನಾಮಕಲ್, ಸೇಲಂ, ಕೆಆರ್ ಪುರಂ)
ಹುಬ್ಬಳ್ಳಿ - ಪುಣೆ (ನಿಲುಗಡೆ- ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ)
ಬೆಂಗಳೂರು - ಬೆಳಗಾವಿ ಇಂದು ಮೋದಿ ಚಾಲನೆ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ