‘ಡಿಕೆಶಿ ಯೇಸು ಪ್ರತಿಮೆ ಸ್ಥಾಪನೆ ಹಿಂದಿನ ಉದ್ದೇಶವೇ ಇದು’

Kannadaprabha News   | Asianet News
Published : Dec 29, 2019, 08:29 AM IST
‘ಡಿಕೆಶಿ ಯೇಸು ಪ್ರತಿಮೆ ಸ್ಥಾಪನೆ ಹಿಂದಿನ ಉದ್ದೇಶವೇ ಇದು’

ಸಾರಾಂಶ

ಹೈ ಕಮಾಂಡ್ ಕೃಪಾಕಟಾಕ್ಷಕ್ಕಾಗಿ ಡಿಕೆ ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದಾಋಎ. ಇದು ವಿವಾದವಾದಷ್ಟು ಅವರಿಗೆ ಹೆಚ್ಚು ಅನುಕೂಲ ಎಂದು ಹರಿಹಾಯ್ದಿದ್ದಾರೆ

ಬೆಂಗಳೂರು (ಡಿ.29):  ಹೈಕಮಾಂಡ್‌ ಕೃಪಾಕಟಾಕ್ಷಕ್ಕಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಯೇಸು ಕ್ರಿಸ್ತನ ಪ್ರತಿಮೆ ಪ್ರತಿಷ್ಠಾಪನೆ ವಿಚಾರಕ್ಕೆ ಕೈಹಾಕಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶಿವಕುಮಾರ್‌ ರಾಜಕೀಯವಾಗಿ ಬಹಳ ಬುದ್ಧಿವಂತರು. ಪ್ರತಿಮೆ ನಿರ್ಮಾಣ ಎನ್ನುವುದಕ್ಕಿಂತ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ವಿವಾದ ಆಗಬೇಕು ಎನ್ನುವುದು ಶಿವಕುಮಾರ್‌ ತಂತ್ರವಾಗಿದೆ. ಈ ಮೂಲಕ ತಮ್ಮ ಮೇಲೆ ಹೈಕಮಾಂಡ್‌ನ ವಕ್ರದೃಷ್ಟಿದೂರವಾಗಿ ಕೃಪಾಕಟಾಕ್ಷ ಬೀಳಬೇಕು ಎಂಬುದಾಗಿದೆ. ಪ್ರತಿಮೆ ನಿರ್ಮಾಣದ ಬಗ್ಗೆ ಎಷ್ಟುವಿರೋಧ ವ್ಯಕ್ತವಾಗಲಿದೆಯೋ ಅಷ್ಟುಶಿವಕುಮಾರ್‌ ಅವರ ರೊಟ್ಟಿಜಾರಿ ತುಪ್ಪಕ್ಕೆ ಬೀಳಲಿದೆ. ಅದನ್ನು ಯೋಚನೆ ಮಾಡಿಯೇ ವಿವಾದ ಹುಟ್ಟಿಹಾಕಿದ್ದಾರೆ ಎಂದು ಲೇವಡಿ ಮಾಡಿದರು.

ಜೈಲಿಗೆ ಹೋಗುವ ಸಂದರ್ಭದಲ್ಲಿ ಯಾವ ದೇವಸ್ಥಾನಕ್ಕೆ ಹೋಗಬೇಕು. ಜೈಲಿನಿಂದ ಬಿಡುಗಡೆಗೆ ಯಾವ ದೇವರ ಪ್ರಾರ್ಥನೆ ಮಾಡಬೇಕು. ರಾಜಕೀಯ ಅಧಿಕಾರಕ್ಕೆ ಯಾವ ದೇವರ ಪ್ರತಿಷ್ಠಾಪನೆ ಮಾಡಬೇಕು ಎಂಬುದು ಶಿವಕುಮಾರ್‌ ಅವರಿಗೆ ಚೆನ್ನಾಗಿ ತಿಳಿದಿದೆ. ನಾವು ಸಹ ಅವರ ಖೆಡ್ಡಾಕ್ಕೆ ಬೀಳುತ್ತಿದ್ದೇವೆ. ಯೇಸು ಪ್ರತಿಮೆ ಸ್ಥಾಪನೆ ವಿಚಾರವನ್ನು ಸ್ಥಳೀಯರಿಗೆ ಬಿಡಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ನೋಡಿಕೊಳ್ಳಲಿದೆ. ಪ್ರತಿಮೆ ಸ್ಥಾಪನೆ ವಿಚಾರ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆ ಇಸ್ಕಾನ್‌ ಕೃಷ್ಣ ಥೀಮ್‌ ಪಾರ್ಕ್ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆಗ ಡಿ.ಕೆ.ಶಿವಕುಮಾರ್‌ ಅವರು ಜಂಟಿ ಸದನ ಸಮಿತಿ ರಚನೆ ಮಾಡಿಸಿ ಯೋಜನೆಯ ವಿರುದ್ಧವಾಗಿ ವರದಿ ಸಲ್ಲಿಕೆಯಾಗುವಂತೆ ನೋಡಿಕೊಂಡಿದ್ದರು. ಈಗ ಕ್ರಿಸ್ತನ ಪರವಾಗಿರುವ ನೀವು ಆಗ ಕೃಷ್ಣನಿಗೆ ಏಕೆ ವಿರೋಧ ಮಾಡಿದಿರಿ ಎಂದು ಸಚಿವರು ಇದೇ ವೇಳೆ ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!