ಪುಸ್ತಕ ಕಳಿಸ್ತೀನಿ, ಓದಿ ಚರ್ಚಿಸಲಿ: ಸಿದ್ದುಗೆ ಸಿಟಿ ರವಿ ಸವಾಲು

Published : Oct 24, 2019, 10:24 AM IST
ಪುಸ್ತಕ ಕಳಿಸ್ತೀನಿ, ಓದಿ ಚರ್ಚಿಸಲಿ: ಸಿದ್ದುಗೆ ಸಿಟಿ ರವಿ ಸವಾಲು

ಸಾರಾಂಶ

ಸಾವ​ರ್ಕರ್‌ ಬಗ್ಗೆ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯಗೆ ಸತ್ಯ ಗೊತ್ತಾ​ಗ​ಬೇ​ಕಿದ್ದು ಕೂಡಲೇ ಅವರು ಸಾವರ್ಕರ್‌ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬೆಂಗ​ಳೂ​ರಿಗೆ ಹೋಗಿ ಸಿದ್ದ​ರಾ​ಮ​ಯ್ಯ​ನ​ವ​ರಿಗೆ ‘ಆತ್ಮಾ​ಹುತಿ’ ಪುಸ್ತಕ ಕಳು​ಹಿಸಿ ಕೊಡು​ತ್ತೇನೆ. ಸಾವ​ರ್ಕರ್‌ ಬಗ್ಗೆ ಚರ್ಚೆ ನಡೆ​ಸಲಿ ಎಂದು ಸವಾಲು ಹಾಕಿದ್ದಾರೆ.

ಧಾರ​ವಾ​ಡ(ಅ.24): ಸಾವ​ರ್ಕರ್‌ ಬಗ್ಗೆ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯಗೆ ಸತ್ಯ ಗೊತ್ತಾ​ಗ​ಬೇ​ಕಿದ್ದು ಕೂಡಲೇ ಅವರು ಸಾವರ್ಕರ್‌ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು. ಆತ್ಮಕಥನ ಓದಿ, ಸಾವರ್ಕರ್‌ ಯಾವ ಕಾರಣಕ್ಕಾಗಿ ಅಭಿ​ನವ ಭಾರತ ಸಂಘ​ಟ​ನೆ ಕಟ್ಟಿ​ದರು ಎಂಬು​ದನ್ನು ತಿಳಿ​ದು​ಕೊ​ಳ್ಳಬೇಕು ಎಂದು ಪ್ರವಾ​ಸೋ​ದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವ​ರು, ಬೆಂಗ​ಳೂ​ರಿಗೆ ಹೋಗಿ ಸಿದ್ದ​ರಾ​ಮ​ಯ್ಯ​ನ​ವ​ರಿಗೆ ‘ಆತ್ಮಾ​ಹುತಿ’ ಪುಸ್ತಕ ಕಳು​ಹಿಸಿ ಕೊಡು​ತ್ತೇನೆ. ಸಾವ​ರ್ಕರ್‌ ಬಗ್ಗೆ ಚರ್ಚೆ ನಡೆ​ಸಲಿ ಎಂದು ಸವಾಲು ಹಾಕಿದ್ದಾರೆ.

ಧಾರ​ವಾಡ: ಪ್ರವಾ​ಸೋ​ದ್ಯಮ ನೀತಿ ರೂಪಿ​ಸಲು ಚಿಂತನೆ

ಸಾವರ್ಕರ್‌ಗೆ ಉಗಿದರೆ ಅದು ಅವರ ಮುಖಕ್ಕೆ ತಾವೇ ಉಗಿದುಕೊಂಡಂತಾಗು​ತ್ತದೆ. ಇವರು ಸಾವರ್ಕರ್‌ ಬಗ್ಗೆ ಮಾತನಾಡಿ ತಮಗೆ ತಾವೇ ಅಪಮಾನ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿ ಮೇಲೆ ಗೋಡ್ಸೆ ಗುಂಡು ಹಾರಿಸಿರುವುದು ಸತ್ಯ. ಆದರೆ, ಗಾಂಧೀಜಿಯನ್ನು ಜನಮಾನಸದಿಂದ ದೂರ ಮಾಡಿದವರು ಯಾರು? ಈ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದಿದ್ದಾರೆ.

ಯಾವ ಕಾಂಗ್ರೆಸ್ಸಿಗರು ಗಾಂಧೀಜಿಯವರ ಹೆಸರು ಇಟ್ಟುಕೊಂಡಿ​ದ್ದಾರೋ ಅವರೇ ಗಾಂಧೀಜಿ ತತ್ವ​ಗಳ ಅಡಿ ಬದು​ಕು​ತ್ತಿ​ದ್ದಾರಾ? ಎಂಬುದು ಸಹ ಚರ್ಚೆ​ಯಾ​ಗಬೇಕು. ಗಾಂಧೀಜಿಯವರ ಪಕ್ಷ ನಮ್ಮದು ಎಂದು ಗಾಂಧೀಜಿಯ ರಾಜಕೀಯ ವಾರಸುದಾರರು ಎಂದು ಹೇಳಿ​ಕೊ​ಳ್ಳುವ ಕಾಂಗ್ರೆ​ಸ್ಸಿ​ಗರು ನಿಜಕ್ಕೂ ಅವರ ತತ್ವದ ವಾರ​ಸು​ದಾ​ರರೇ ಎಂದು ಪ್ರಶ್ನಿ​ಸಿ​ದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್