ಗುಡ್ ನ್ಯೂಸ್ : ಮಾರ್ಚ್ ಬಳಿಕ ಅತೀ ಕಡಿಮೆ ಕೊರೋನಾ ಕೇಸ್

Kannadaprabha News   | Asianet News
Published : Sep 12, 2021, 08:45 AM ISTUpdated : Sep 12, 2021, 08:52 AM IST
ಗುಡ್ ನ್ಯೂಸ್ : ಮಾರ್ಚ್ ಬಳಿಕ ಅತೀ ಕಡಿಮೆ ಕೊರೋನಾ ಕೇಸ್

ಸಾರಾಂಶ

ರಾಜ್ಯದಲ್ಲಿ ಶನಿವಾರ ಕೊರೋನಾ ಪರೀಕ್ಷೆ ಪ್ರಮಾಣ ಮತ್ತೆ ಇಳಿಕೆ 2ನೆ ಅಲೆಯಲ್ಲೆ ಅತಿ ಕಡಿಮೆ ಸೋಂಕು ಪ್ರಕರಣ ವರದಿ

ಬೆಂಗಳೂರು (ಸೆ.12): ರಾಜ್ಯದಲ್ಲಿ ಶನಿವಾರ ಕೊರೋನಾ ಪರೀಕ್ಷೆ ಪ್ರಮಾಣ ಮತ್ತೆ ಇಳಿಕೆಯಾಗಿದೆ. ಪರಿಣಾಮ 2ನೆ ಅಲೆಯಲ್ಲೆ ಅತಿ ಕಡಿಮೆ ಸೋಂಕು ಪ್ರಕರಣ ವರದಿಯಾಗಿದೆ.

ಶನಿವಾರ ಹಬ್ಬದ ಹಿನ್ನೆಲೆಯಲ್ಲಿ ಕೇವಲ 1.1 ಲಕ್ಷ  ಪರೀಕ್ಷೆಯನ್ನಷ್ಟೆ ನಡೆಸಲಾಗಿದೆ. ಪರಿಣಾಮ ಮಾರ್ಚ್ ಬಳಿಕ ಅತಿ ಕಡಿಮೆ ಪ್ರಕರಣ ವರದಿಯಾಗಿದ್ದು 801 ಜನಕ್ಕೆ ಮಾತ್ರ ಸೋಂಕು ವರದಿಯಾಗಿದೆ.

ಸೆ.7 ರಂದು 851 ಪ್ರಕರಣ ವರದಿಯಾಗಿದ್ದು  ಹೊರತುಪಡಿಸಿದರೆ ಮಾರ್ಚ್ 2ನೇ ವಾರದ ಬಳಿಕ ಅತಿ ಕಡಿಮೆ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳದಿಂದ ಬರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್‌ : ಉಡುಪಿಯಲ್ಲಿ ಕಠಿಣ ಕ್ರಮ

ಶನಿವಾರ 1.19 ಲಕ್ಷ ಪರೀಕ್ಷೆ ನಡೆಸಿದ್ದು ಶೆ.0.67 ರಷ್ಟು ಪಾಸಿಟಿವಿಟಿ  ದರದಂತೆ  801 ಪ್ರಕರಣ ವರದಿಯಾಗಿದೆ. ಇದರಿಂದಾಗಿ ಸೊಂಕಿತರ ಸಂಖ್ಯೆ 29.06 ಲಕ್ಷ ಮಂದಿ ಗುಣಮುಖರಾದಂತಾಗಿದೆ. 

ಸಕ್ರಿಯ ಪ್ರಕರಣಗಳು 16,672ಕ್ಕೆ ಕುಸಿದಿದೆ.  ಕಳೆದ 24 ಗಂಟೆಗಳಲ್ಲಿ 15 ಮಂದಿ ಸೋಂಕಿಗೆ ಬಲಿಯಾಗಿದ್ದು ಮೃತರ ಸಂಖ್ಯೆ 37,487 ತಲುಪಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌