
ರಾಮನಗರ(ನ.7): ತಮ್ಮ ಮಗ ಪಕ್ಷದ ಟಿಕೆಟ್ ಪಡೆದು ಕಡೆ ಗಳಿಗೆಯಲ್ಲಿ ಪಲಾಯನ ಮಾಡಿದ್ದಕ್ಕಾಗಿ ತಾವು ಬಿಜೆಪಿ ಕ್ಷಮೆ ಕೋರುವುದಾಗಿ ಎಂಎಲ್ ಸಿ ಸಿಎಂ ಲಿಂಗಪ್ಪ ಹೇಳಿದ್ದಾರೆ.
ರಾಮನಗರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಲಿಂಗಪ್ಪ, ಈ ಬಾರಿಯ ಉಪ ಚುನಾವಣೆಯಲ್ಲಿ ತಮ್ಮ ಮಗ ಎಲ್. ಚಂದ್ರಶೇಖರ್ ದುರಂತ ನಾಯಕನ ಪಾತ್ರ ಮಾಡಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತೀವ್ರ ಭಾವುಕರಾದಂತೆ ಕಂಡು ಬಂದ ಲಿಂಗಪ್ಪ, ಮಗ ಮಾಡಿದ ತಪ್ಪಿಗೆ ನಾನು ಜನತೆಯಲ್ಲಿ ಕ್ಷಮೆ ಕೋರುತ್ತೇನೆ ಎಂದು ಎದ್ದು ನಿಂತು ಕೈ ಮುಗಿದರು.
ಮಗ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ್ದು ಡಿಕೆ ಬದ್ರರ್ಸ್ ಕುತಂತ್ರ ಎಂದ ಲಿಂಗಪ್ಪ, ತಾವು ಬದುಕಿರುವವರೆಗೂ ತಮ್ಮ ಮಗನೊಂದಿಗೆ ಮಾತನಾಡುವುದಿಲ್ಲ ಎಂದು ವಾಗ್ದಾನ ಮಾಡಿದರು.
ಇನ್ನು ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ದಾಖಲೆ ಮತಗಳ ಅಂತರದಿಂದ ಗೆದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಲಿಂಗಪ್ಪ, ರೇಸ್ ನಲ್ಲಿ ಅವರೊಬ್ಬರೇ ಇದ್ದಿದ್ದರಿಂದ ಈ ಗೆಲುವು ದೊರೆತಿದೆ ಎಂದು ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ