
ಬೆಂಗಳೂರು (ನ.12) ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ಚುನಾವಣೆ ವೇಳೆ ಕಾಂಗ್ರೆಸ್ ಗ್ಯಾರೆಂಟಿ ಕುರಿತು ನಾಯಕರು ಮಾಡಿದ ಪ್ರಚಾರ ಭಾಷಣಗಳು ಭಾರಿ ಜನಪ್ರಿಯತೆ ಪಡೆದಿದೆ. ಈ ಪೈಕಿ ಸಿದ್ದರಾಮಯ್ಯನವರ ನನಗೂ ಫ್ರೀ, ಕಾಕಾ ಪಾಟೀಲನಿಗೂ ಫ್ರೀ ಎಂದಿರುವ ಭಾಷಣ ವೈರಲ್ ಆಗಿದೆ. ಇದೀಗ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಉಚಿತ ಬಸ್ ಕುರಿತು ಮಾತನಾಡಿದ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಹೆಚ್ ಎಂ ರೇವಣ್ಣನತ್ತ ನೋಡಿ ಭಾಷಣ ಮಾಡಿದ್ದಾರೆ. ಈ ವೇಳೆ ಉಚಿತ ಬಸ್ ನನ್ನ ಹೆಂಡತಿಗೂ ಫ್ರೀ , ರೇವಣ್ಣ ಹೆಂಡತಿಗೂ ಫ್ರೀ ಎಂದು ಭಾಷಣ ಮಾಡಿದ್ದಾರೆ. ಈ ವೇಳೆ ಮುಖಂಡರು ರೇವಣ್ಣ ಹೆಂಡತಿ ತೀರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯಗೆ ತಿಳಿಸಿದ್ದಾರೆ.
ನನ್ನ ಹೆಂಡತಿಗೂ ಫ್ರೀ, ರೇವಣ್ಣ ನಿನ್ನ ಹೆಂಡತಿಗೂ ಫ್ರೀ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಆದರೆ ಮುಖಂಡರು ತಕ್ಷಣವೇ ಸಿದ್ದರಾಮಯ್ಯಗೆ ಅಲರ್ಟ್ ಮಾಡಿದ ಬಳಿಕ ಸಿದ್ದರಾಮಯ್ಯ ಮಜುಗರಕ್ಕೀಡಾಗದ್ದಾರೆ. ಆದರೆ ತೋರ್ಪಡಿಸದ ಸಿದ್ದರಾಮಯ್ಯ, ತಕ್ಷಣ ಮಾತು ಬದಲಿಸಿದ್ದಾರೆ. ಹೇಳಿಕೆ ಸರಿಪಡಿಸಿಕೊಂಡ ಸಿದ್ದರಾಮಯ್ಯ, ಇದ್ದಾಗ ಅವರೂ ಫ್ರೀಯಾ ಓಡಾಡಬಹುದಿತ್ತು ಎಂದು ಹೇಳಿದ್ದು ಎಂದಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಕುರಿತು ಪ್ರಸ್ತಾಪಿಸಿ ಸಿದ್ದರಾಮಯ್ಯ ಮಾಡಿದ ಬಹುತೇಕ ಎಲ್ಲಾ ಭಾಷಣ ವೈರಲ್ ಆಗಿದೆ. ಇದೀಗ ಈ ಭಾಷಣವೂ ಸೇರಿಕೊಂಡಿದೆ. ಚುನಾವಣೆ ವೇಳೆ ಡಿಕೆ ಶಿವಕುಮಾರ್ ಮಾಡಿರುವ ಉಚಿತ, ಖಚಿತ, ನಿಶ್ಚಿತ ಭಾಷಣ ಕೂಡ ಅಷ್ಟೇ ವೈರಲ್ ಆಗಿತ್ತು.
ಭಾಷಣ ಮುಂದುವರಿಸಿದ ಸಿದ್ದರಾಮಯ್ಯ, ನಾನು ಯಾವತ್ತೂ ಜಾತಿಗಳ ನಡುವೆ ಬೇಧ ಮಾಡಿಲ್ಲ ಎಂದಿದ್ದಾರೆ. ಜಾತಿ ಗಣತಿ ಮಾಡುತ್ತಿದ್ದೇವೆ. ಜಾತಿಗಣತಿಯನ್ನು ನಾವು ಜಾರಿ ಮಾಡುತ್ತೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಗಿದೆ. ಎಲ್ಲಾ ವರ್ಗದ ಜನ ಎಲ್ಲಾ ಧರ್ಮದ ಜನ ನನ್ನನ್ನು ಪ್ರೀತಿಸುತ್ತಾರೆ. ನಾನು ಇಡೀ ಸಮಾಜಕ್ಕೆ ಋಣಿ ಆಗಿದ್ದೇನೆ ಎಂದು ಸಿದ್ದಾರಮ್ಯ ಹೇಳಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ನನಗೆ ಯಾವಾಗಲೂ ಹೀಗೇ ಇರಬೇಕು. ಇಷ್ಟು ವರ್ಷ ಬೆಂಬಲ ಕೊಟ್ಡಿದ್ದೀರಿ. ಮುಂದೆ ಕೂಡಾ ಆಶೀರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ