
ಬೆಂಗಳೂರು, (ಜುಲೈ.12): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಮತ್ತೆ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಕುರಿತಂತೆ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಜೊತೆಗೆ ಕೊರೋನಾ ಹೆಚ್ಚಾಗಿರುವ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಹೇಳಿದರು.
ಒಂದು ವಾರ ಬೆಂಗಳೂರು ಕಂಪ್ಲೀಟ್ ಲಾಕ್ಡೌನ್; ಸರ್ಕಾರದ ಅಧಿಕೃತ ಆದೇಶ
ಇನ್ನು ನಾಳೆ (ಜುಲೈ.3) ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿನ ಕೋವಿಡ್ 19 ಸ್ಥಿತಿಗತಿಯ ಅವಲೋಕನಕ್ಕಾಗಿ ಎಲ್ಲಾ ಜಿಲ್ಲಾಡಳಿತದೊಂದಿಗೆ ಮಹತ್ವದ ವಿಡಿಯೋ ಸಂವಾದ ನಡೆಸಲಿದ್ದು, ಸೋಮವಾರ ಏನ್ಮಾಡ್ಬೇಕು ಎನ್ನುವುದು ಫೈನಲ್ ಆಗಲಿದೆ ಎಂದು ತಿಳಿಸಿದರು.
ಅಂತರ್ ಜಿಲ್ಲಾ ಸಂಚಾರ ಬಂದ್?
ಹೌದು..ರಾಜ್ಯದಲ್ಲಿ ಲಾಕ್ಡೌನ್ ಬದಲಾಗಿ ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸುವ ಚಿಂತನೆಗಳ ಸಹ ನಡೆದಿವೆ. ಡಿಸಿಗಳ ಜೊತೆ ಸಭೆಯ ನಂತರ ತಜ್ಞರು ಹಾಗೂ ಹಿರಿಯ ಸಚಿವ ಜೊತೆ ಸಿಎಂ ಒಂದು ತೀರ್ಮಾನ ಕೈಗೊಳ್ಳವು ಸಾಧ್ಯತೆಗಳಿವೆ. ಇನ್ನು ಸಾವಿರಾರಕ್ಕಿಂತ ಹೆಚ್ಚು ಕೇಸ್ ದಾಖಲಾಗಿರುವ ಜಿಲ್ಲೆಗಳನ್ನ ಮಾತ್ರ ಲಾಕ್ ಡೌನ್ ಮಾಡುವ ಪ್ಲಾನ್ ಸಹ ಸಿಎಂ ಮುಂದಿವೆ.
ಒಟ್ಟಿನಲ್ಲಿ ಸೋಮವಾರ ನಡೆಯುವ ಜಿಲ್ಲಾಧಿಕಾರಿಗಳ ಸಭೆ ಮಹತ್ವದ ಪಡೆದುಕೊಂಡಿದ್ದು, ಲಾಕ್ಡೌನ್ ಆಗುತ್ತಾ..? ಅಂತರ್ ಜಿಲ್ಲಾ ಸಂಚಾರ ಬಂದ್ ಆಗುತ್ತಾ? ಅಥವಾ ಕೇವಲ ಸಾವಿರಕ್ಕಿಂತ ಹೆಚ್ಚು ಕೊರೋನಾ ಕೇಸ್ ಇರುವ ಜಿಲ್ಲೆಗಳನ್ನ ಮಾತ್ರ ಲಾಕ್ಡೌನ್ ಮಾಡಲಾಗುತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ಸೋಮವಾರ ಉತ್ತರ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ