
ಉಡುಪಿ, (ನ.15): ಇಲ್ಲಿನ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ರಕ್ಷಿಸಿದ್ದಾರೆ.
ಪದವೀಧರನಾಗಿರುವ ಚಿತ್ರದುರ್ಗದ ಈ ಯುವಕ ಉದ್ಯೋಗ ದೊರೆಯದೇ ಮನನೊಂದಿದ್ದ. ಈ ಸಂದರ್ಭದಲ್ಲಿ ಸಿನೆಮಾ ನೋಡಿ ತನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ, ಉದ್ಯೋಗ ಸಿಗುತ್ತದೆ ಎಂದು ಭಾವಿಸಿ, ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಾ ಭಿಕ್ಷೆ ಭೇಡಿ ತಿನ್ನುತಿದ್ದ
ಯುವಕ ಪರಿಸ್ಥಿತಿ ಕಂಡು ವಿಶು ಶೆಟ್ಟಿ ಅವರು ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಗೆ ದಾಖಲಿಸಿ ನಂತರ ಹೆತ್ತವರಿಗೆ ಮಡಿಲು ಸೇರಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಪ್ಲಾಸ್ಟಿಕ್ ಮನೆ ನಿರ್ಮಾಣ: ಚಿಂದಿ ಆಯುವ ಮಹಿಳೆಗೆ ಹಸ್ತಾಂತರ
ವಿಶು ಶೆಟ್ಟಿ ಆತನಿಗೆ ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿ, ಆತನ ಹೆತ್ತವರ ವಿಳಾಸ ಪಡೆದು, ಅವರಿಗೆ ಮಾಹಿತಿ ನೀಡಿದರು. ಅವರು ಬಂದು ಹೇಳದೇ ಕೇಳದೇ ಮಗ ಮನೆ ಬಿಟ್ಟಿದ್ದರಿಂದ ನೊಂದ ಮನೆಯವರು ಈ ಬಾರಿ ದೀಪಾವಳಿ ಹಬ್ಬವನ್ನೂ ಆಚರಿಸುವ ಮನಸ್ಥಿತಿಯಲ್ಲಿರಲಿಲ್ಲ.
ಇದೀಗ ದೀಪಾವಳಿಯೆಂದೇ ಮಗ ಸಿಕ್ಕಿದ್ದು ತಮ್ಮ ಪಾಲಿಗೆ ನಿಜವಾದ ದೀಪಾವಳಿಯಾಗಿದೆ, ಮಗನನ್ನು ರಕ್ಷಿಸಿ ಆರೈಕೆ ಮಾಡಿದ ಇಬ್ಬರು ಸಮಾಜ ಸೇವಕರು ನಮ್ಮ ಪಾಲಿನ ಆಪತ್ಬಾಂಧವರು ಎಂದು ಹಾರೈಸಿ ಚಿತ್ರದುರ್ಗಕ್ಕೆ ಮಗನೊಂದಿಗೆ ಊರಿಗೆ ಹಿಂತಿರುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ