
ಮಂಡ್ಯ (ಅ.26): ನಮಗೆ ಆರೆಸ್ಸೆಸ್ ಶತ್ರ ಮಾತ್ರವಲ್ಲ, ಅಸಮಾನತೆಯ ವ್ಯವಸ್ಥೆಯೇ ನಮ್ಮ ಶತ್ರು ಎಂದು ನಟ, ಸಮಾಜಿಕ ಹೋರಾಟಗಾರ ಚೇತನ್ ತಿಳಿಸಿದರು. ಆರೆಸ್ಸೆಸ್ ನಿಷೇಧ ವಿವಾದ ಕುರಿತಂತೆ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಜಾತಿ ರಾಜಕೀಯ ಮಾಡುವುದು ಮಾತ್ರ ರಾಜಕಾರಣಿಗಳ ಕೆಲಸ, ಒಂದು ಪಕ್ಷದವರಿಗೆ ಮತ್ತೊಂದು ಪಕ್ಷದವರು ಮಾತ್ರ ಶತ್ರುಗಳು. ಆದರೆ ದಲಿತ ಸಂಘಟನೆಗಳಿಗೆ ಪಕ್ಷ, ಆರೆಸ್ಸೆಸ್ ಮಾತ್ರವಲ್ಲ, ಇಡೀ ಅಸಮಾನತೆಯ ಅನ್ಯಾಯದ ವ್ಯವಸ್ಥೆಯೇ ಶತ್ರು. ಹೀಗಾಗಿ ನಮಗೆ ಆರೆಸ್ಸೆಸ್ ಮಾತ್ರವಲ್ಲ, ಅಸಮಾನತೆಯೇ ನಮ್ಮ ಶತ್ರು ಎಂದರು. ಮುಂದುವರಿದು, ನಾವು ಕುವೆಂಪು ಅನುಯಾಯಿಗಳು. ಯಾರೂ ಸಹ ಸಂವಿಧಾನ ರಕ್ಷಣೆ ಮಾಡುತ್ತಿಲ್ಲ. ಸಂವಿಧಾನ ಕಾಪಾಡುತ್ತಿರುವುದು ನಾವು, ಸಮಸಮಾಜ ನಿರ್ಮಾಣ ಮಾಡೋದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಲಾಭಕ್ಕಾಗಿ ಯಾವ ಸಂಸ್ಥೆಯನ್ನೂ ನಿಷೇಧಿಸಲು ಒಪ್ಪುವುದಿಲ್ಲ. ನಿಷೇಧ ಸಂಸ್ಕೃತಿ ಒಪ್ಪುವುದಿಲ್ಲ, ಆರ್ಟಿಕಲ್ 19ರ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಸಹಿಸುವುದಿಲ್ಲ. ಸೈದ್ಧಾಂತಿಕವಾಗಿ ಸೋಲಿಸಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ