ವಿದ್ಯುತ್‌ ಖರೀದಿಸದಂತೆ ಕರ್ನಾಟಕಕ್ಕೆ ಕೇಂದ್ರ ನಿಷೇಧ: ರಾಜ್ಯಕ್ಕೆ ವಿದ್ಯುತ್‌ ಕ್ಷಾಮ?

Published : Aug 19, 2022, 06:29 AM IST
ವಿದ್ಯುತ್‌ ಖರೀದಿಸದಂತೆ ಕರ್ನಾಟಕಕ್ಕೆ ಕೇಂದ್ರ ನಿಷೇಧ: ರಾಜ್ಯಕ್ಕೆ ವಿದ್ಯುತ್‌ ಕ್ಷಾಮ?

ಸಾರಾಂಶ

ವಿವಿಧ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ 5000 ಕೋಟಿ ರು.ಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡ ಕರ್ನಾಟಕ ಸೇರಿದಂತೆ 13 ರಾಜ್ಯಗಳು

ನವದೆಹಲಿ(ಆ.19):  ಸುದೀರ್ಘ ಅವಧಿಯಿಂದ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 13 ರಾಜ್ಯಗಳ 27 ವಿದ್ಯುತ್‌ ವಿತರಣಾ ಕಂಪನಿಗಳಿಗೆ ಪವರ್‌ ಎಕ್ಸ್‌ಚೇಂಜ್‌ಗಳಿಂದ ವಿದ್ಯುತ್‌ ಖರೀದಿ ಮಾಡದಂತೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಈ ರಾಜ್ಯಗಳಲ್ಲಿ ವಿದ್ಯುತ್‌ ಕ್ಷಾಮ ಎದುರಾಗುವ ಭೀತಿ ಎದುರಾಗಿದೆ. ಕರ್ನಾಟಕದಲ್ಲಿ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳು ವಿದ್ಯುತ್‌ ಖರೀದಿ ಬಿಲ್‌ ಬಾಕಿ ಉಳಿಸಿಕೊಂಡಿವೆ.

ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡಿದ ವಿದ್ಯುತ್‌ಗೆ ಹಣ ಪಾವತಿ ಮಾಡಲು 7 ತಿಂಗಳ ಅವಕಾಶ ನೀಡಲಾಗಿರುತ್ತದೆ. ಆ ಅವಧಿಯಲ್ಲೂ ಹಣ ಪಾವತಿ ಮಾಡದೇ ಇದ್ದರೆ ವಿದ್ಯುತ್‌ ವಿತರಣಾ ಕಂಪನಿಗಳಿಗೆ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಂದ ಅಗತ್ಯ ಪ್ರಮಾಣದ ವಿದ್ಯುತ್‌ ಖರೀದಿಗೆ ನಿಷೇಧ ಹೇರಲಾಗುತ್ತದೆ.

ಗ್ರಾಹಕನಿಗೆ ಕೇಂದ್ರದ ಶಾಕ್‌, ಪೆಟ್ರೋಲ್‌-ಡೀಸೆಲ್‌ ರೀತಿ ಇನ್ಮುಂದೆ ಚೇಂಜ್‌ ಆಗ್ತಾನೆ ಇರುತ್ತೆ ಕರೆಂಟ್‌ ರೇಟ್‌!

ಇದೀಗ ಕರ್ನಾಟಕ ಸೇರಿದಂತೆ 13 ರಾಜ್ಯಗಳು ವಿವಿಧ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ 5000 ಕೋಟಿ ರು.ಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆ.19ರಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ 13 ರಾಜ್ಯಗಳಿಗೆ ವಿದ್ಯುತ್‌ ಖರೀದಿಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರದ ಅಧೀನದ ‘ಪವರ್‌ ಸಿಸ್ಟಮ್‌ ಆಪರೇಷನ್‌ ಕಾರ್ಪೊರೇಷನ್‌ ಲಿ.’ 3 ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ ಸೂಚಿಸಿದೆ.

ಸಾಮಾನ್ಯವಾಗಿ ವಿದ್ಯುತ್‌ ಬೇಡಿಕೆ ಕಡಿಮೆ ಇದ್ದಾಗ, ರಾಜ್ಯಗಳು ಅದನ್ನು ವಿದ್ಯುತ್‌ ಎಕ್ಸ್‌ಚೇಂಜ್‌ ಮೂಲಕ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತವೆ. ಬೇಡಿಕೆ ಹೆಚ್ಚಾಗಿ, ಉತ್ಪಾದನೆ ಕಡಿಮೆ ಇದ್ದಾಗ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುತ್ತವೆ. ಇದೀಗ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪೀಕ್‌ ಅವರ್‌ಗಳಲ್ಲಿ ಅಗತ್ಯ ಪ್ರಮಾಣದ ವಿದ್ಯುತ್‌ ಸ್ಥಳೀಯವಾಗಿ ಲಭ್ಯವಾಗದೇ ಹೋದಲ್ಲಿ ಪವರ್‌ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುವುದು ಸಾಧ್ಯವಾಗುವುದಿಲ್ಲ. ಆಗ ಪವರ್‌ ಕಟ್‌ ಅನಿವಾರ್ಯವಾಗುತ್ತದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್