
ಬೆಂಗಳೂರು(ಮೇ.27): ಕೊರೋನಾ ಆತಂಕದ ಮದ್ಯೆಯೇ ರಾಜ್ಯ ಸರ್ಕಾರ ಸಾರಿಗೆ ಬಸ್ ಸಂಚಾರವನ್ನ ಆರಂಭಿಸಿದೆ. ಆದರೆ, ವೈರಸ್ ಭಯದಿಂದ ಬಿಎಂಟಿಸಿ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಬಸ್ ಓಡಿಸಲು ಸಿಬ್ಬಂದಿ ಸಮಸ್ಯೆ ಎದುರಾಗಿದೆ.
"
ಲಾಕ್ಡೌನ್ ಸಡಿಲಿಕೆಯಾದ್ರೂ ಸಾರಿಗೆ ಸಿಬ್ಬಂದಿ ಮಾತ್ರ ತಮ್ಮ ತಮ್ಮ ಊರು ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಮೂಲಕ ಬಿಎಂಟಿಸಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಧದಷ್ಟು ಸಿಬ್ಬಂದಿ ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ.
ಸಾಮಾಜಿಕ ಅಂತರವಿಲ್ಲ: BMTC ಬಸ್ ಹತ್ತಲು ಜನರ ನೂಕು ನುಗ್ಗಲು..!
ಕರ್ತವ್ಯಕ್ಕ ಎಲ್ಲ ಸಿಬ್ಬಂದಿ ಹಾಜರಾಗಿ ಅಂತ ಸೂಚನೆ ನೀಡಿದ್ರೂ ಕೂಡ ಕೆಲವು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಸಂಬಳ ಹಾಕುವುದಿಲ್ಲ ಅಂತ ಬಿಎಂಟಿಸಿ ಎಚ್ಚರಿಕೆ ನೀಡಿದೆ.ಆದರೂ ಕೂಡ ಸಿಬ್ಬಂದಿ ಬೆಂಗಳೂರಿನ ಕಡೆಗೆ ಮುಖಮಾಡುತ್ತಿಲ್ಲ.
ಬೆಂಗಳೂರಿನಲ್ಲಿ ಅರ್ಧದಷ್ಟು ಬಸ್ ಓಡಿಸೋಕೆ ಬಿಎಂಟಿಸಿ ಬಳಿ ಸಿಬ್ಬಂದಿಯೇ ಇಲ್ಲದಂತಾಗಿದೆ. ಬಿಎಂಟಿಸಿ ಡಿಪೋಗಳಿಂದ ಕೆಲಸಕ್ಕೆ ಹಾಜಾಗುವಂತೆ ಸಿಬ್ಬಂದಿಗೆ ಒತ್ತಡ ಹಾಕಲಾಗುತ್ತಿದೆ. ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರ್ ಆಗದಿದ್ದರೆ ಬೆಂಗಳೂರಿನ್ಲಲಿ ಬಸ್ ಓಡೋದೆ ಅನುಮಾನ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ