
ಬೆಂಗಳೂರು(ಸೆ.30): ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿಯು ಇದೀಗ ಖರ್ಚು-ವೆಚ್ಚಗಳಿಗೆ ಕತ್ತರಿ ಹಾಕಿ ಮಿತವ್ಯಯಕ್ಕೆ ಮುಂದಾಗಿದೆ.
ನಿಗಮದಿಂದ ಭದ್ರತಾ ವಿಭಾಗ, ವಿಭಾಗ ನಿಯಂತ್ರಣಾಧಿಕಾರಿ, ಉಗ್ರಾಣ ವಿಭಾಗ, ತಾಂತ್ರಿಕ ವಿಭಾಗ, ಸಂಚಾರ, ಆಡಳಿತ, ಸಾರ್ವಜನಿಕ ಸಂಪರ್ಕ ವಿಭಾಗ, ಕೇಂದ್ರೀಯ ಕಾರ್ಯಾಗಾರ, ಲೆಕ್ಕಪತ್ರ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗಿದ್ದ 31 ಮೊಬೈಲ್ ಸಿಮ್ ಕಾರ್ಡ್ಗಳನ್ನು ಶಾಶ್ವತವಾಗಿ ರದ್ದುಗೊಳಿಸಿ ಆದೇಶಿಸಲಾಗಿದೆ.
ಇಂದಿನಿಂದ ಬಿಎಂಟಿಸಿ ಬಸ್ ಪಾಸ್ ವಿತರಣೆ
ಈ ಹಿಂದೆಯೂ ಕೂಡ ನೌಕರರ ಹಲವು ಭತ್ಯೆಗಳು, ಪ್ರೋತ್ಸಾಹಧನ ಸೇರಿದಂತೆ ಕೆಲವೊಂದು ಸೌಲಭ್ಯಗಳಿಗೂ ಬ್ರೇಕ್ ಹಾಕಲಾಗಿತ್ತು. ಅವಶ್ಯಕತೆಗೆ ತಕ್ಕಷ್ಟುಬಿಡಿಭಾಗ ಖರೀದಿ, ಕಚೇರಿ ಸಲಕರಣೆಗಳು, ಪೀಠೋಪಕರಣ, ವಾಹನ ಬಳಕೆ, ಪ್ರವಾಸ ಸೇರಿದಂತೆ ಕೆಲವೊಂದು ಖರ್ಚು-ವೆಚ್ಚಗಳಿಗೆ ಕತ್ತರಿ ಹಾಕಲಾಗಿತ್ತು. ಇದೀಗ ಮೊಬೈಲ್ ಸಿಮ್ ಕಾರ್ಡ್ಗಳನ್ನು ರದ್ದುಗೊಳಿಸುವ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ