
ಬೆಂಗಳೂರು: ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಕಸ್ಟಡಿಗೆ ನೀಡಿ 42 ನೇ ಎಸಿಜೆಎಂ ನ್ಯಾಯಾಧೀಶರು ಆದೇಶಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಜಯದೇವ ಆಸ್ಪತ್ರೆಯ ವೈದ್ಯರು ನೀಡಿದ ವರದಿ ಆಧಾರದ ಮೇಲೆ ಏಳು ದಿನಗಳ ಕಾಲ (ಫೆಬ್ರವರಿ 21ರವರೆಗೆ) ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ಇಂದು ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಿಐಡಿ ಪರವಾಗಿ ಎಸ್ಪಿಪಿ ಅಶೋಕ್ ನಾಯ್ಕ್, ಸಿಐಡಿ ತನಿಖಾಧಿಕಾರಿ ಡಿವೈಎಸ್ ಪಿ ಗೌತಮ್ ಹಾಜರಿದ್ದರು.
ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ದಸ್ತಗಿರಿ ಮಾಡಲಾಗಿತ್ತು. A5 ಆರೋಪಿ ಶಾಸಕರನ್ನ ದಸ್ತಗಿರಿ ಮಾಡಲಾಗಿತ್ತು. ನ್ಯಾಯಾಧೀಶರಾದ ಕೆ ಎನ್ ಶಿವಕುಮಾರ್ ಮುಂದೆ ಭೈರತಿ ಬಸವರಾಜ್ ರನ್ನ ಹಾಜರುಪಡಿಸಲಾಗಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ v4 ಮತ್ತು V6 ನಲ್ಲಿ ವ್ಯತ್ಯಾಸವಿದೆ ಅಂದಿದ್ರು. ಜಯದೇವ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗುವಂತೆ ಸೂಚಿಸಿದ್ರು. ಹೀಗಾಗಿ ನ್ಯಾಯಾಧೀಶರು ಜಯದೇವ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಎಲ್ಲಾ ರಿಪೋರ್ಟ್ ಗಳು ನಾರ್ಮಲ್ ಇವೆ. ಹೃದಯ ಸಂಬಂಧಿ ಹಾಗು ಇತರ ರಿಪೋರ್ಟ್ ಗಳು ನಾರ್ಮಲ್ ಇವೆ. 21-02-2026 ರ ಮಧ್ಯಾಹ್ನ 1 ಗಂಟೆ ವರೆಗೆ ಕಸ್ಟಡಿಗೆ ನೀಡಿದ್ದಾರೆ. ಊಟದ ವಿಷಯದಲ್ಲಿ ಅವರ ಕೋರಿಕೆಯಂತೆ ಊಟ ನೀಡಬೇಕೆಂದು ಸೂಚಿಸಲಾಗಿದೆ ಎಂದು ಎಸ್ಪಿಪಿ ಅಶೋಕ್ ನಾಯ್ಕ್ ಪ್ರಕರಣದ ಮಾಹಿತಿ ನೀಡಿದ್ದಾರೆ.
ಬೈರತಿ ಬಸವರಾಜ್ ನಿವಾಸದಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜಕೀಯ ಷಡ್ಯಂತರ ಹೇಗೆಲ್ಲಾ ನಡೆಯಿತ್ತದೆ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ನನ್ನ ಮೇಲೆ ತಂದೆ ಯಡಿಯೂರಪ್ಪ ಮೇಲೆ 30-40 ಕೇಸ್ ಎದುರಿಸಿದ್ದೇನೆ. ನಾವು ಬಸವರಾಜ್ ಕುಟುಂಬದ ಜೊತೆ ಇದ್ದೇವೆ. ಪಕ್ಷ ಸಹ ಅವರ ಜೊತೆಯಲ್ಲಿರುತ್ತದೆ. ಲೀಗಲ್ ಟೀಮ್ ಸಂಪರ್ಕ ಕೂಡ ಮಾಡುತ್ತೇವೆ. ಬೈರತಿ ಬಸವರಾಜ್ ಯಡಿಯೂರಪ್ಪ ಸರ್ಕಾರ ಬರುವಾಗ ಧೈರ್ಯ ಮಾಡಿ ರಾಜೀನಾಮೆ ನೀಡಿದ್ದವರು. ವಿಧಾನಸೌಧಕ್ಕೆ ಓಡೋಡಿ ಬಂದವರು. ಅದನ್ನು ರಾಜ್ಯದ ಜನರು ಸಹ ಮರೆಯೋದಿಲ್ಲ. ಕಾರ್ಯಕರ್ತರು ಆತಂಕಗೊಳ್ಳೋದು ಬೇಡ. ನಾವು ನಿಮ್ಮ ಜೊತೆಗೆ ಇದ್ದೇವೆ. ಕಾನೂನು ಪ್ರೊಸೇಸ್ ಸ್ವಲ್ಪ ಸಮಯ ಆಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ