
ಬೆಂಗಳೂರು (ಫೆ.15): ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಶಿವ ದೇವಾಲಯಗಳು ಭಾನುವಾರ ವಿಶೇಷ ಪೂಜೆಗೆ ಸಜ್ಜಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಡು ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇಗುಲ, ಮುರುಗೇಶ್ ಪಾಳ್ಯದ ಶಿವೋಹಂ ಶಿವ ದೇವಾಲಯ, ಗವಿಪುರಂ ಗವಿ ಗಂಗಾಧರೇಶ್ವರ, ಹಲಸೂರು ಸೋಮೇಶ್ವರ, ಓಂಕಾರ ಹಿಲ್ಸ್ನ ದ್ವಾದಶ ಜ್ಯೋತಿರ್ಲಿಂಗ ದೇವಾಲಯ ಸೇರಿದಂತೆ ಶಿವ ದೇವಾಲಗಳಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ಜತೆಗೆ ಹಲವೆಡೆ ರಾತ್ರಿ ಜಾಗರಣೆಗೆ ಸಾಂಸ್ಕೃತಿಕ, ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಸಕಲ ಸಿದ್ಧತೆಯಾಗಿದೆ. ಹೂವು ಹಣ್ಣುಗಳಿಂದ ದೇವಸ್ಥಾನಕ್ಕೆ ಅಲಂಕಾರ ಮಾಡಲಾಗಿದ್ದು, ದೇವಾಲಯದ ಒಳಾಂಗಣವನ್ನು ಪೂರ್ತಿ ಕಬ್ಬುಗಳಿಂದ ಸಿಂಗರಿಸಲಾಗಿದೆ. ನಸುಕಿನಿಂದಲೇ ವಿಶೇಷ ಪೂಜೆ ನಡೆಯಲಿದ್ದು, ಬ್ರಹ್ಮರಥೋತ್ಸವ ಜರುಗಲಿದೆ. ಭಕ್ತರಲ್ಲಿ ನೂಕುನುಗ್ಗಲು ಆಗದಂತೆ ದೇವಸ್ಥಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕ್ರಮ ವಹಿಸಲಾಗಿದೆ.
ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ದರ ಏರಿಕೆ ಮಾಡಿದ್ದಾರೆ. ಶಿವರಾತ್ರಿ ಪೂಜೆಗೆ ಅತ್ಯಗತ್ಯವಾದ ಬಿಲ್ವಪತ್ರೆಗೆ ಭಾರೀ ಬೇಡಿಕೆ ಉಂಟಾಗಿದೆ. ಪೂಜೆಗೆ ಬೇಕಾದ ಏಲಕ್ಕಿ ಬಾಳೆಹಣ್ಣು, ದ್ರಾಕ್ಷಿ, ಸೇಬು, ದಾಳಿಂಬೆ ಹಾಗೂ ಕಿತ್ತಳೆ ಹಣ್ಣುಗಳ ದರವೂ ಕಳೆದ ವಾರಕ್ಕಿಂತ ಶೇ. 20 - 30 ರಷ್ಟು ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಜಲ್ಲೆಗಳನ್ನು ಜನತೆ ಹೆಚ್ಚಾಗಿ ಖರೀದಿಸಿದ್ದಾರೆ.
ಹೂವು (ಕೇಜಿ-₹)
ಸೇವಂತಿ 250
ಗುಲಾಬಿ 200
ಮಲ್ಲಿಗೆ 1400
ಕನಕಾಂಬರ 800
ಚೆಂಡು ಹೂವು 60
ಸುಗಂಧ ರಾಜ 120
ತಾವರೆ (ಒಂದಕ್ಕೆ) 40
ಕಾಕಡ 400
ಸೇಬು 180
ಆರೆಂಜ್ 100
ದಾಳಿಂಬೆ 300
ಪಪ್ಪಾಯ 60
ಕಾಬುಲ್ ದ್ರಾಕ್ಷಿ 140
ಕಲ್ಲಂಗಡಿ 30
ಏಲಕ್ಕಿ ಬಾಳೆ ಹಣ್ಣು 120
ಕಿವಿ ಹಣ್ಣು 300
ಸಪೋಟ 80
ಡ್ರ್ಯಾಗನ್ 200
ಕರಬೂಜ 50
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ