ಶಾಶ್ವತ ಪರಿಹಾರ ಮಾಡಿಕೊಡಿ ಸ್ವಾಮಿ ಅಂತ ಸವದಿ ಕಾಲಿಗೆರಗಿದ ಮಹಿಳೆಯರು!

Published : May 08, 2022, 04:39 PM IST
ಶಾಶ್ವತ ಪರಿಹಾರ ಮಾಡಿಕೊಡಿ ಸ್ವಾಮಿ ಅಂತ ಸವದಿ ಕಾಲಿಗೆರಗಿದ ಮಹಿಳೆಯರು!

ಸಾರಾಂಶ

ಶಾಶ್ವತ ಪರಿಹಾರ  ನೀಡುವಂತೆ ನೆರೆ ಸಂತ್ರಸ್ಥರು ಮಾಜಿ ಡಿಸಿಎಂ ಸವದಿ ಕಾಲಿಗೆರಗಿ ಬೇಡಿಕೊಂಡಿದ್ದಾರೆ. 2019ರಲ್ಲಿ ರಲ್ಲಿ ಬಂದ ಭಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಸದ್ಯ ಶೆಡ್ ನಲ್ಲಿ ವಾಸವಿರೋ ಜನರು ಮಾಜಿ ಡಿಸಿಎಂ‌ ಅವರ ಕಾಲಿಗೆರಗಿ ಶಾಶ್ವತ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಮೇ. 8): ತಗಡಿನ ಶೆಡ್ ನಿರ್ಮಾಣ ಮಾಡಿಕೊಂಡು ಅದರಲ್ಲೆ ವಾಸವಿರೋ ಜನ. ಇನ್ನೊಂದು ಕಡೆ ನೆರೆ ಸಂತ್ರಸ್ಥರಿಗಾಗಿಯೇ ಗುರುತಿಸಿರುವ ಜಾಗದಲ್ಲಿ ಬೆಳೆದು ನಿಂತಿರುವ ಗಿಡಗಂಟಿ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಸತ್ತಿ (Satti) ಗ್ರಾಮದಲ್ಲಿ. 

ಗ್ರಾಮದ ಪಕ್ಕದಲ್ಲಿಯೇ ಹರಿದಿರುವ ಬೃಹತ್ ಕೃಷ್ಣಾ ನದಿಯಿಂದ (Krishna river) ಪ್ರತಿವರ್ಷ ಮಳೆಗಾಲದಲ್ಲಿ ಗ್ರಾಮಕ್ಕೆ ಅಪಾಯ ತಪ್ಪಿದ್ದಲ್ಲ.. 2019, 20, 2021 ರಲ್ಲಿ ಸತತ ಮೂರು ವರ್ಷಗಳ ಕಾಲ ಈ ಗ್ರಾಮಕ್ಕೆ ನೆರೆ ಸಮಸ್ಯೆ ಕಾಡಿದ್ದು ಜನ ಮನೆ ಕಳೆದುಕೊಂಡು ಸಧ್ಯ ತಗಡಿನ ಶೆಡ್ ನಲ್ಲಿಯೇ ವಾಸಗಾಗಿದ್ದಾರೆ. 

ಮೊನ್ನೆಯಷ್ಟೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು( lakshman savadi) ಖಾಸಗಿ ಕಾರ್ಯಕ್ರಮದ ನಿಮಿತ್ತ ಇದೆ ಸತ್ತಿ ಗ್ರಾಮಕ್ಕೆ ಭೇಟಿ ‌ನೀಡಿದ್ರು ಈ ಸಮಯದಲ್ಲಿ ಮಹಿಳೆಯರು ಸವದಿಯವರ  ಕಾಲಿಗೆರಗಿ ನಮಗೆ ಶಾಶ್ವತ ಪರಿಹಾರ ಮಾಡಿಕೊಡಿ ಸ್ವಾಮಿ ಅಂತ ಗೋಗರೆದಿದ್ದಾರೆ.  ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ ಹಾಗೂ ರಾಯಭಾಗ ತಾಲೂಕಿನ ಕೆಲವು ನದಿ ತೀರದ ಗ್ರಾಮಗಳಿಗೆ ಸತತ ನೆರೆ ಬರುತ್ತಿದ್ದು ಮನೆ ಕಳೆದುಕೊಂಡ ಜನರಿಗೆ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಶಾಶ್ವತ ಪರಿಹಾರ ನೀಡುತ್ತಿಲ್ಲ‌. ಮನೆ ಕಳೆದುಕೊಂಡ  ಸಂತ್ರಸ್ಥರಿಗಾಗಿಯೇ ಪ್ರತ್ಯೇಕ ಆರ್ ಸಿ ಸೆಂಟರ್ ಗುರುತಿಸಿ ಅಲ್ಲಿ ವಿದ್ಯುತ್ ಕಂಬ ಹಾಕಿಸಿ ಎಲ್ಲವನ್ನೂ ಸಜ್ಜುಗೊಳಿಸಲಾಗಿದೆ ಆದರೆ ಜಿಲ್ಲಾಡಳಿತದಿಂದ ಇನ್ನೂ ಸಂತ್ರಸ್ಥರಿಗೆ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಇದೆ ತಗಡಿನ ಶೆಡ್ ನಲ್ಲಿಯೇ ಸಂತ್ರಸ್ಥರು ವಾಸವಿರಬೇಕಾದ ಅನಿವಾರ್ಯತೆ ಎದುರಾಗಿದೆ..

CHHATRAPATI SHIVAJI JAYANTI ಬೆಳಗಾವಿಯಲ್ಲಿ ಸತತ 12 ಗಂಟೆಗಳ ಕಾಲ ಅದ್ಧೂರಿ ಮೆರವಣಿಗೆ!

ಪದೇ ಪದೇ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದು ಶಾಶ್ವತ ಪರಿಹಾರ ಮತ್ತು ಶಿಫ್ಟಿಂಗ್ ಗಾಗಿ ಜನಪ್ರತಿನಿಧಿಗಳ ಕಾಲಿಗೆರಗಿ ಬೇಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಜನಪ್ರತಿನಿಧಿಗಳು ಜನರಿಗೆ ಶಾಶ್ವತ ಪರಿಹಾರ ಒದಗಿಸುವತ್ತ ಗಮನಹರಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್