ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ!

Published : Nov 05, 2019, 07:37 AM IST
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ!

ಸಾರಾಂಶ

ಕೋಟ್ಯಂತರ ಸಾಲ ಪಡೆದು, ಮರುಪಾವತಿಸದೆ ಕಂಪನಿಯೊಂದು ವಂಚನೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಸಿಂಗಪೂರ್ ಮೂಲದ ಬ್ಯಾಂಕ್‌ನಿಂದ ಸಾಲ ಪಡೆದು, ಸಾಲ ಮರುಪಾವತಿಸಿದಂತೆ ನಕಲಿ ದಾಖಲೆಯನ್ನೂ ಕಂಪನಿ ಸೃಷ್ಟಿಸಿದೆ.

ಬೆಂಗಳೂರು(ನ.05): ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕಿನಿಂದ ಕೋಟ್ಯಂತರ ರುಪಾಯಿ ಸಾಲ ಪಡೆದಿದ್ದರೂ ಸಾಲ ಮರುಪಾವತಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಕಂಪನಿಯ ಲೆಕ್ಕ ಪತ್ರದಲ್ಲಿ ತೋರಿಸಿದ ಆರೋಪದ ಮೇಲೆ ‘ಒಪ್ಟೊಸಕ್ರ್ಯೂಟ್‌’ ಕಂಪನಿ ವಿರುದ್ಧ ಹಲಸೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂಬೈನ ನಾರಿಮನ್‌ ಪಾಯಿಂಟ್‌ ಡಿಬಿಎಸ್‌ ಶಾಖೆಯ ಹಿರಿಯ ಅಧಿಕಾರಿ ನಿತಿನ್‌ ಪರ್ಮಾರ್‌ ಎಂಬುವರು ಕೊಟ್ಟದೂರಿನ ಮೇರೆಗೆ ಒಪ್ಟೊಕಂಪನಿಯ ವರ್ತೂರಿನ ವಿನೋದ್‌ ರಾಮ್‌ ನಾನಿ, ಕ್ಯಾಲಿಫೋರ್ನಿಯಾದ ಜಯೇಶ್‌ ಪಟೇಲ್‌, ಮುಂಬೈನ ಸುಲೈಮನ್‌ ಆಡಮ್‌, ಜೆಪಿ ನಗರದ ಗೊಟ್ಟಿಗೆರೆ ಚಂದ್ರಶೇಖರ್‌ ಸೋಮದಾಸ್‌, ಮಹಾರಾಷ್ಟ್ರದ ಥಾಣೆಯ ರಾಜ್‌ಕುಮಾರ್‌ ತುಳಸಿದಾಸ್‌ ರೈ ಸಿಂಘಾನಿ, ಅಮೆರಿಕಾದ ಥಾಮಸ್‌ ಡೈಟಿಕರ್‌, ಬೆಂಗಳೂರಿನ ನಂಜಪ್ಪಯ್ಯ ಮಡಗೊಂಡಪಲ್ಲಿ ರಾಮು, ರಂಗಲಕ್ಷ್ಮೇ ಶ್ರೀನಿವಾಸ್‌ ಹಾಗೂ ಲೆಕ್ಕ ಪರಿಶೋಧಕ ಬಿ.ವಿ.ಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ

ಸಿಂಗಾಪುರ ಮೂಲದ ಬಹುರಾಷ್ಟ್ರೀಯ ಬ್ಯಾಂಕ್‌ ಡಿಬಿಎಸ್‌ ತನ್ನ ಶಾಖಾ ಕಚೇರಿ ಹಲಸೂರು ರಸ್ತೆಯಲ್ಲಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಒಪ್ಟೊಸಕ್ರ್ಯೂಟ್‌ ಕಂಪನಿಯು ವೈದ್ಯಕೀಯ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ. 2008ರಲ್ಲಿ ತನ್ನ ವ್ಯವಹಾರಕ್ಕಾಗಿ ಡಿಬಿಎಸ್‌ನಿಂದ ಕೋಟ್ಯಂತರ ರುಪಾಯಿ ಸಾಲ ಪಡೆದಿತ್ತು. 2016ರ ಜು.1ಕ್ಕೆ ಅಸಲು ಮತ್ತು ಬಡ್ಡಿ ಸೇರಿ ಸಾಲದ ಮೊತ್ತ .178 ಕೋಟಿ ಆಗಿತ್ತು. ಸಾಲ ಮರು ಪಾವತಿಸದೆ ಕಂಪನಿ ಉಳಿಸಿಕೊಂಡಿದೆ.

ಕುಷ್ಟಗಿ: 10 ರು. ನಾಣ್ಯ ತಿರಸ್ಕರಿಸುವ ಬ್ಯಾಂಕ್‌ಗಳಿಗೆ ದಂಡ.

ಸಿಂಗಾಪುರದಲ್ಲಿರುವ ಕಂಪನಿ ಒಡೆತನದ ಆಸ್ತಿ ಮಾರಾಟ ಮಾಡಿ ಸಾಲ ತೀರಿಸಿರುವುದಾಗಿ ಕಂಪನಿಯ ಲೆಕ್ಕ ಪತ್ರದಲ್ಲಿ ತೋರಿಸಿದೆ. ಇದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Sharath R Ashok scuba diving: ಸಮುದ್ರದಾಳದಲ್ಲಿ ಆರ್ ಅಶೋಕ್ ಪುತ್ರನ ಗಿನ್ನೆಸ್ ಸಾಹಸ
Karnataka By-Election Results 2026 LIVE: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭದಲ್ಲೇ ಸ್ಟ್ರಾಂಗ್ ರೂಮ್ ಬೀಗ ನಾಪತ್ತೆ!