ಬಣಜಿಗನೆಂಬ ಕಾರಣಕ್ಕೆ ನಾನಿನ್ನೂ ಮಂತ್ರಿ ಆಗಿಲ್ಲ: ಸಮಾವೇಶದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ್ ಬೇಸರ

By Ravi JanekalFirst Published Dec 30, 2023, 6:20 PM IST
Highlights

'ನಾನು ಯಾವತ್ತೋ ಮಂತ್ರಿ ಆಗಬೇಕಿತ್ತ. ಆದರೆ ಆಗಲಿಲ್ಲ. ಯಾಕಂದ್ರೆ ನಾನು ಬಣಜಿಗ. ಅತ್ತ ಶರಣಪ್ರಕಾಶ್ ಪಾಟೀಲಗೆ ಖರ್ಗೆ ಸಪೋರ್ಟ್ ಮಾಡ್ತಾರೆ, ಇತ್ತ ಈಶ್ವರ ಖಂಡ್ರೆ ಅವರಿಗೆ ವೀರಶೈವ ಮಹಾಸಭಾದವರು ಸಪೋರ್ಟ್ ಮಾಡ್ತಾರೆ. ನಮಗೆ ಯಾರು ಸಫೋರ್ಟ್ ಮಾಡ್ತಾರೆ?' ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.

ವಿಜಯಪುರ (ಡಿ.30): 'ನಾನು ಯಾವತ್ತೋ ಮಂತ್ರಿ ಆಗಬೇಕಿತ್ತ. ಆದರೆ ಆಗಲಿಲ್ಲ. ಯಾಕಂದ್ರೆ ನಾನು ಬಣಜಿಗ. ಅತ್ತ ಶರಣಪ್ರಕಾಶ್ ಪಾಟೀಲಗೆ ಖರ್ಗೆ ಸಪೋರ್ಟ್ ಮಾಡ್ತಾರೆ, ಇತ್ತ ಈಶ್ವರ ಖಂಡ್ರೆ ಅವರಿಗೆ ವೀರಶೈವ ಮಹಾಸಭಾದವರು ಸಪೋರ್ಟ್ ಮಾಡ್ತಾರೆ. ನಮಗೆ ಯಾರು ಸಫೋರ್ಟ್ ಮಾಡ್ತಾರೆ?' ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕ ಗಲಗಲಿಯಲ್ಲಿ ನಡೆಯುತ್ತಿರುವ ಬಣಜಿಗ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ಲಿಂಗಾಯತ ಅಂತಾ ಮಾತ್ರ ಇತ್ತು, ಆಗಲೇ ಐದಾರು ಜನ ಮುಖ್ಯಮಂತ್ರಿಗಳಾದ್ರು. ಅವರೆಲ್ಲಾ ಬಣಜಿಗ ಅಂತಲ್ಲ, ಲಿಂಗಾಯತರು ಅಂತ ಹೇಳಿಯೇ ಸಿಎಂ ಆದ್ರು. ಆದರೀಗ ಬರೀ ಬಣಜಿಗ ಅಂತಾರೆ. ಬಣಜಿಗರು ಸಿಎಂ ಆಗಿದ್ರೆ ಅದು ಅವರ ಕೆಪ್ಯಾಸಿಟಿ ಮೇಲೆ ಆಗಿದ್ದಾರೆ. ನಾನು ಒಂದು ಸಲ ಮಂತ್ರಿ ಆಗಬೇಕು ಅಂತಾ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಅವರು ಎರಡು ವರ್ಷ ಆದ್ಮೇಲೆ ಮಾಡ್ತೀನಿ ಅಂದಿದ್ದಾರೆ. ಮಂತ್ರಿ ಆಗ್ತಿನಿ ಅನ್ನೋ ಭರವಸೆ ಇದೆ ಎಂದರು.

ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಬಂದು ಕರಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲಿ: ಮಾಜಿ ಸಚಿವ ಸುನೀಲ್ ಕುಮಾರ್

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಹಿಳೆಯರೆಲ್ಲ ಮನೆಯಲ್ಲಿ ಹೇಳದೆ ಕೇಳದೇ ಹೋಗ್ತಿದ್ದಾರೆ. ಇದರಿಂದ ಗಂಡಸರಿಗೆ ತೊಂದರೆಯಾಗ್ತಿದೆ. ಹಾಗಾಗಿ ನಿಮಗೆಲ್ಲ ಕೈ ಮುಗಿದು ಹೇಳ್ತೀನಿ ಎಲ್ಲಿಗೆ ಹೋದ್ರು ಹೇಳ್ಬಿಟ್ಟು ಹೋಗ್ರಮ್ಮ ತಾಯಿ ಎಂದ ಪಟ್ಟಣಶೆಟ್ಟಿ. ಗೃಹ ಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ಜಗಳಾಡ್ತಿದಾರೆ ಎಂದು ಗಂಡಸರು ಕಂಪ್ಲೆಂಟ್ ಮಾಡ್ತಿದಾರೆ ಎಂದಾಗ ಇವರ ಮಾತು ಕೇಳಿ ಸಮಾವೇಶ ಕ್ಷಣ ನಗೆಗಡಲಲ್ಲಿ ತೇಲಿತು.

3 ರಾಮಲಲ್ಲಾ ಮೂರ್ತಿಗಳು, ಗರ್ಭಗುಡಿ ರಾಮಲಲ್ಲಾ ಯಾರು..? ವಿವಾದಿತ ಸ್ಥಳ ಅಭಿವೃದ್ಧಿ ಸ್ಥಳವಾಗಿ ಬದಲಾಗಿದ್ದು ಹೇಗೆ..?

click me!