ಯಮನ ಜೊತೆ ಸೆಣೆಸಾಡಿದ ಸಾವಿತ್ರಿಯಂತೆ ಪತ್ನಿ ಅಪೂರ್ವಳನ್ನು ಉಳಿಸಿಕೊಳ್ಳಲು ಹೋರಾಡಿದ್ದ ಕನ್ನಡದ ಭಗೀರಥ!

Published : Oct 08, 2025, 12:15 PM IST
apoorva k bhat

ಸಾರಾಂಶ

Apoorva K Bhat Death: ಮೇ ತಿಂಗಳಲ್ಲಿ ನಡೆದ ಅಪಘಾತದಲ್ಲಿ ಅಪೂರ್ವ ಕೆ ಭಟ್‌ ಅವರಿಗೆ ಗಾಯವಾಗಿತ್ತು. ಅಂದಿನಿಂದ ನಿನ್ನೆಯವರೆಗೆ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ಮಾಡಿದ್ದರು. ಈಗ ಅವರ ಪತಿ ಆಸ್ಪತ್ರೆಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ. 

ಕಳೆದ ಮೇ ತಿಂಗಳಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ಗಾಯಗೊಂಡಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿದ್ದರು. ನಿನ್ನೆ ( ಅಕ್ಟೋಬರ್‌ 7 ರಂದು ) ಅಪೂರ್ವ ಇಹಲೋಕ ತ್ಯಜಿಸಿದ್ದಾರೆ. ಅವರ ಪತಿ ಆಶೀಶ್‌ ಸರಡ್ಕ ಅವರು ನಾಲ್ಕು ತಿಂಗಳಿನಿಂದ ಆಸ್ಪತ್ರೆಯಲ್ಲಿ ಏನಾಯ್ತು ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಶೀಶ್‌ ಸರಡ್ಕ ಪೋಸ್ಟ್‌ ಹೀಗಿದೆ

ಅಪೂರ್ವ ಸಾವು ಅಪಘಾತದಿಂದ ಆದ ಕಾರಣ ಎಲ್ಲದಕ್ಕೂ ಪೊಲೀಸರು ಬಂದೇ ಆಗಬೇಕು... ಅವರಿಗೆ ಕಾಯ್ತಾ ಇದ್ದೇವೆ.. ಫೇಸ್ಬುಕ್ ತುಂಬಾ ಅಪೂರ್ವ ಇದ್ದಾಳೆ.. ನಿನ್ನೆ ತುಂಬಾ ಜನ ಬರೆದಿರುವ ಲೇಖನಗಳಲ್ಲಿ ಅಪೂರ್ವ 4 ತಿಂಗಳಿನಿಂದ ಕೋಮಾದಲ್ಲಿ ಇದ್ದಳು ಅಂತಾ ಬರೆದಿರುವುದನ್ನು ನಾನು ಓದಿದ್ದೇನೆ. ಆದರೆ ತೀರಾ ಆಪ್ತರಿಗೆ ಮಾತ್ರ ಗೊತ್ತಿದ್ದ, ನಮ್ಮ ಮನಸ್ಸಿಗೆ ತುಂಬಾ ಆಘಾತವನ್ನು, ಈ ನೋವನ್ನು amplify ಮಾಡಿದ ಕಾರಣಗಳನ್ನು ಈಗ ಹೇಳಬೇಕು ಅಂತಾ ಅನ್ನಿಸ್ತಾ ಇದೆ.

ಅಪೂರ್ವ ಅಪಘಾತ ಆದಾಗ ಅನುಭವಿಸಿದ ತಲೆಯ ಪೆಟ್ಟು ತೀವ್ರ ಸ್ವರೂಪದ್ದಾಗಿತ್ತು. diffused axonal injury ಆದ ಕಾರಣ ಮೊದಲ ಕೆಲವು ದಿನಗಳು ಏನಾಗಿದೆ ಅನ್ನುವ ಅರಿವು ಇರಲಿಲ್ಲ.. ಸ್ವಲ್ಪ ಸೆಟಲ್ ಡೌನ್ ಆದ ಮೇಲೆ 10 ದಿನಗಳ ನಂತರ ಮಾಡಿದ MRI ಆಕೆಯ MIDBRAIN ಪೆಟ್ಟು ತಿಂದಿದೆ ಅನ್ನೋದನ್ನು ಹೇಳಿತ್ತು.. Age is the only positive she has, ಅಂದಿದ್ದ ವೈದ್ಯರು, ಯಾವ ಗ್ಯಾರೆಂಟಿ ಕೊಡೋಕೂ ಸಾಧ್ಯ ಇಲ್ಲ ನಮಗೆ ಅಂತಾ ಹೇಳಿದ್ರು..

ಆದರೆ ನಾವು ಅಲ್ಲಿಂದ ನಾವು ಮಾಡಿದ ಹೋರಾಟ ತುಂಬಾ ಕ್ಲಿಷ್ಟಕರವಾದದ್ದು.. 24 ದಿನಗಳ ನಂತರ ಅವಳನ್ನು ವಾರ್ಡಿಗೆ ಶಿಫ್ಟ್ ಮೂಡಿಸಿದ್ದು ಕೂಡಾ ಆಕೆಗೆ ಮ್ಯೂಸಿಕ್ ಥೆರಪಿ, ನಮ್ಮ ಮಾತು, ಸೌಂಡ್ ಥೆರಪಿ ಫಿಸಿಕಲ್ stimulation, ರೇಕಿ ಹೀಲಿಂಗ್, ಪ್ರಾಣಿಕ್ ಹೀಲಿಂಗ್ ಮಾಡಬಹುದು ಅನ್ನುವ ಕಾರಣಕ್ಕೆ.. ಸಾಧಾರಣ ಜುಲೈ ಮಧ್ಯದ ವರೆಗೆ ಅಪೂರ್ವ ಯಾವ ರೆಸ್ಪಾನ್ಸ್ ಕೂಡಾ ಮಾಡ್ತಾ ಇರಲಿಲ್ಲ.. ಆದರೆ ಮತ್ತೆ ನಿಧಾನಕ್ಕೆ ನಾವು ಹೇಳುವ ವಿಚಾರಗಳು ಅವಳಿಗೆ ಅರ್ಥ ಆಗೋಕೆ ಶುರುವಾಯಿತು.. ಕರೆದಾಗ ಕಣ್ಣು ಬಿಡೋಕೆ ಪ್ರಯತ್ನ ಮಾಡ್ತಾ ಇದ್ಲು... ಒಮ್ಮೆ thumbs up ಮಾಡು ಅಂದಾಗ ಮಾಡಿದ್ಲು... wow! ಈ ರಿಕವರಿ ಬಂದರೆ ತುಂಬಾ ಜನ ಮೇಲೆ ಬೀಳ್ತಾರೆ ಅಂದರು ವೈದ್ಯರು.. ಅದು ಆಗಸ್ಟ್ ಒಂದು..

ಅದಾಗಿ ಬರೋಬ್ಬರಿ 15 ದಿನ ಅಪೂರ್ವಗೆ urinary infection ಮತ್ತು ಅದಕ್ಕೆ ಕೊಟ್ಟ ಆಂಟಿಬಯೋಟಿಕ್ ಕಾರಣದಿಂದ ಸುಸ್ತಾಗಿ ಹೋದಳು.. ಆಗ ಹೋದ ರೆಸ್ಪಾನ್ಸಿವ್ನೆಸ್ ಮತ್ತೆ ವಾಪಸ್ ಆಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ.. ಫಿಸಿಯೋಥೆರಪಿ ಆಗುವಾಗ ಹೇಳಿದ್ದು ಎಲ್ಲಾ ಅರ್ಥ ಆಗೋಕೆ ಶುರುವಾಯಿತು.. ಬಲಗೈಗೆ ಸ್ವಲ್ಪ ಬಲ ಕಮ್ಮಿಯಿತ್ತು.. ಆದರೆ ಎಡಕೈಗೆ ಬಾಲ್ ಕೊಟ್ಟರೆ ಹಿಡಿಯೋದು ಬಿಡೋದು ಮಾಡಿದ್ಲು.. ಎರಡೆರಡು ಗಂಟೆ ಅವಳ ಮುಂದೆ ಕೂತು ಮಾತಾಡಿಸುತ್ತಾ ಇದ್ದೇ .. ನಾನಿಲ್ಲದೆ ಇದ್ದಾಗ ಅಪ್ಪ ಮತ್ತೆ ಚಿಕ್ಕಮ್ಮನ ಮಗ Gaurav Surya ಈ ಕೆಲಸ ಮಾಡ್ತಾ ಇದ್ದಾ.. ಇನ್ನೂ ಹೇಗೆ ಇಂಪ್ರೂವ್ ಮಾಡೋದು ಅಂತಾ ಇರೋ ಬರೋ ವೀಡಿಯೋಗಳನ್ನು ರೀಸರ್ಚ್ ಪೇಪರ್ ಗಳನ್ನು ತಿರುವಿಹಾಕಿ ಆಗಿತ್ತು.. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅಪೂರ್ವ ಬೆರಳುಗಳ ಮೂಲಕ ಕೌಂಟ್ ಮಾಡೋಕೆ , ಕಣ್ಣು ಮೂವ್ ಮಾಡಿ ಆಚೆ ಈಚೆ ನೋಡೋಕೆ ಶುರು ಮಾಡಿದ್ಲು.

 ಸೆಪ್ಟೆಂಬರ್ ಕೊನೆಯ 10 ದಿನದಲ್ಲಿ yes/ no ಅನ್ನೋದನ್ನು ತಲೆ ಅಲ್ಲಾಡಿಸುವ ಮೂಲಕ ಮಾಡಿದ್ಲು.. ಮಗಳ ನೆನಪು, ನನ್ನ ನೆನಪು, ಮನೆಯವರ ನೆನಪು ಎಲ್ಲಾ ಅವಳಿಗೆ ಇತ್ತು.. she should fully recover with this ಅಂತಾ ವೈದ್ಯರು ಹೇಳಿದ್ರು.. ಅವಳ ಬಳಿ, ಅಪೂರ್ವ ನೀನು ನಡೆದುಕೊಂಡು ಇಲ್ಲಿಂದ ಹೋಗಬೇಕು ಅಂದಿದ್ರು.. ಮಗಳನ್ನು ಒಂದೆರಡು ಸರ್ತಿ ಕರೆದುಕೊಂಡು ಬಂದು ಮಾತಾಡಿಸಿದೆ.. ಅವಳ ಪ್ರೆಸೆನ್ಸ್ ಫೀಲ್ ಮಾಡಿ ಕಣ್ಣೀರು ಬಂದಿತ್ತು ಅವಳಿಗೆ ಒಮ್ಮೆ.. ಫಿಸಿಯೋಥೆರಪಿ ಮಾಡುವವರು ಮಾತಾಡಿಸಿ, ಅವಳನ್ನು ಪ್ರಚೋದಿಸಿ, ಕೂರಿಸುವುದು ಮಾಡ್ತಾ ಇದ್ರು.. ಅಪೂರ್ವ ಗೆ ಪಿಸಿಯೋ ಮಾಡ್ತಾ ಇದ್ದ ಮೇಡಂ ಅವಳ ಹತ್ರ ತುಂಬಾ ಆತ್ಮೀಯವಾಗಿ ಮಾತಾಡಿ, ನೀನು ಇನ್ನು ಬೇಗ ಹುಷಾರಾಗಿ ಇಲ್ಲಿಂದ ಹೋಗಬೇಕು ಅಂದಿದ್ರು.. ಕುತ್ತಿಗೆಯಲ್ಲಿ tracheostomy ಇತ್ತು.. ಫುಡ್ ಪೈಪ್ ಹೊಟ್ಟೆಗೆ ಹಾಕಿದ್ರು, ಕ್ಯಾತಿಟರ್ ಇತ್ತು.. ಹಾಗಾಗಿ ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇರಲಿಲ್ಲ ನಮಗೆ..

ಇಷ್ಟು ವೇಗದಲ್ಲಿ ಇಂಪ್ರೂವ್ ಆಗ್ತಾ ಇದ್ದ ಅಪೂರ್ವ ಇದ್ದಕಿದ್ದ ಹಾಗೆ ಮೊನ್ನೆ ಸೋಮವಾರ ಒಮ್ಮೆ ಉಸಿರಾಟದ ಸಮಸ್ಯೆ ಎದುರಿಸಿದಳು.. ಮತ್ತೆ ಅದೂ ಸರಿಯಾಯಿತು.. ಪುನಃ ಮಂಗಳವಾರ ಅದು ರಿಪೀಟ್ ಆಯಿತು.. ಬುಧವಾರಕ್ಕೆ ಬಿಪಿ ಕಮ್ಮಿಯಾಗೋದು ಶುರುವಾಯಿತು... urinary infection ಮತ್ತೆ ಅಟ್ಯಾಕ್ ಮಾಡಿ ಅದೂ ಆಂಟಿಬಯೋಟಿಕ್ ರೆಸಿಸ್ಟೆಂಟ್ ಆಗಿದ್ದ ಕಾರಣ ಆಕೆಯ ಪರಿಸ್ಥಿತಿ ಗಂಭೀರ ಆಗಿದ್ದು.. ಅಲ್ಲಿಂದ icu, 3-4 ಗಂಟೆಯಲ್ಲಿ ವೆಂಟಿಲೇಟರ್ ... ವಿಚಿತ್ರ ನೋಡಿ ... ಇಂತಹ infection ಆದಾಗ ಏಟು ತಿನ್ನೋದು ಕಿಡ್ನಿ, ಲಿವರ್ ಇಲ್ಲದೆ ಇದ್ರೆ lungs. ಅಪೂರ್ವ ಕೇಸ್ ಅಲ್ಲಿ ಅದೆಲ್ಲಾ ಸರಿ ಇತ್ತು... ಗುರುವಾರ ಬೆಳಗ್ಗೆ ಒಮ್ಮೆ ಬಿಪಿ ಕೆಳಗೆ ಬಿತ್ತು.. ನೋಡಿದ್ರೆ ಅದು miocardidial infraction ತರಾ ಇದೆ ಅಂದ್ರು ವೈದ್ಯರು.. It is unheard of in a young patient like her with no co morbidities ಅಂದ್ರು ನಮ್ಮ ನ್ಯೂರೋ ಸರ್ಜನ್.. ಆದರೆ ಮತ್ತೆ ತಿಳಿದದ್ದು ಅದು sepsis induced miocarditis ಅಂತಾ..

ಅಲ್ಲಿಂದ ಏನೇನೋ ಪ್ರಯತ್ನಗಳನ್ನು ನಾವೂ ಮಾಡಿದ್ವಿ.. ಅವರು ಎಲ್ಲರೂ ಮಾಡಿದ್ರು.. ಸಾರ್ ದುಡ್ಡು ಎಷ್ಟು ಖರ್ಚಾಗುತ್ತೆ ಅಂತಾ ಯೋಚನೆ ಮಾಡಬೇಡಿ, ಏನು ಮಾಡಬೇಕು ಅನ್ನುವ ಆಲೋಚನೆ ಮಾತ್ರ ನೀವು ಮಾಡಿ, ನೀವು ಏನು ಹೇಳಿದ್ರೂ ನಾವು ಅದನ್ನು ಮಾಡ್ತೇವೆ ಅಂತಾ ನಾವೂ ಹೇಳಿದ್ವಿ.. ಇರುವ ಎಲ್ಲ ಮದ್ದು try ಮಾಡಿದ್ರು, ಬೇರೆ ಬೇರೆ ವೈದ್ಯರ opinion ತೆಗೊಂಡು ಆಯಿತು.. ಪ್ರಾಜ್ಞರ, ಜ್ಯೋತಿಷಿಗಳ ಬಳಿ ಕೇಳಿಸಿಯಾಯಿತು. ಗುರುಗಳು, ಹಿರಿಯರು ಅಂತಾ ಎಲ್ಲರ ಬಳಿ ನಾನು ಬೇಡಿಕೊಂಡೆ.. 134 ದಿನದಲ್ಲಿ ನಾನು ಮಾಡದೇ ಇದ್ದ ಪೂಜೆಗಳು, ಪ್ರಾರ್ಥನೆಗಳು ಇಲ್ಲ.. ಆದರೂ ಅಪೂರ್ವ ಕೊನೆಗೆ ಯಾಕೋ ಮನಸ್ಸು ಬದಲಾಯಿಸಿದಳು..

ಪ್ರಾಯಶಃ ಆಕೆಗೆ ಈ ದೇಹದಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುವುದು ಕಷ್ಟ, ಡಿಪೆಂಡೆಂಟ್ ಆಗ್ತೇನೆ ಅಂತಾ ಅನ್ನಿಸಿತೋ ಏನೋ... ನಿನ್ನೆ ಸಾಯಂಕಾಲ 5 ಗಂಟೆಯವರೆಗೆ ಆಕೆಯ ಮನಸ್ಸು ಬದಲಾಯಿಸುವ ಪ್ರಯತ್ನ ತುಂಬಾ ಮಾಡಿದೆ.... But ನಿನ್ನೆ she didn't want to fight.. ಇದಕ್ಕಿಂತ ಕಷ್ಟದ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ಹೊರಬಂದಿದ್ದ ಅಪೂರ್ವ ನಿನ್ನೆ ಸಾಕಿನ್ನು ಇದು ಅಂತಾ ನಿರ್ಧಾರ ಮಾಡಿ ಹೋದದ್ದು.. She was not someone who didn't fight. She fought till the very end.. ನಮಗೆ ಯಾರಿಗೂ ಭಾರ ಆಗೋದು ಬೇಡ ಅಂತ ಹೋಗಿದ್ದು ಅವಳು... ಅದೆಷ್ಟೋ ಪ್ರೀತಿ/ ನೋವು ಮನಸ್ಸಲ್ಲಿ ಇಟ್ಟುಕೊಂಡು ಕೂತಿದ್ಲು ಗೊತ್ತಿಲ್ಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!