ಬೆಸ್ಕಾಂ ನೌಕರನಿಂದ ಸರ್‌ಎಂವಿ ಪ್ರತಿಮೆಗೆ ಹಾರ ಹಾಕಿಸಿದ ಸಿಎಂ!

Kannadaprabha News   | Asianet News
Published : Sep 16, 2021, 08:53 AM IST
ಬೆಸ್ಕಾಂ ನೌಕರನಿಂದ ಸರ್‌ಎಂವಿ ಪ್ರತಿಮೆಗೆ ಹಾರ ಹಾಕಿಸಿದ ಸಿಎಂ!

ಸಾರಾಂಶ

ವಿಶಿಷ್ಟ ನಡೆನುಡಿಗಳಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದ ಸಿಎಮ ಬೊಮ್ಮಾಯಿ ಕೆ.ಆರ್‌. ವೃತ್ತದಲ್ಲಿನ ಸರ್‌ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಐಟಿಐ ಓದಿ ಪ್ರಸ್ತುತ ಬೆಸ್ಕಾಂ ಸಿಬ್ಬಂದಿಯಾಗಿರುವ ಚಂದನ್‌ ಎಂಬವರಿಂದ ಮಾಲಾರ್ಪಣೆ ಮಾಡಿಸಿದರು

ಬೆಂಗಳೂರು(ಸೆ.16) : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ಬಳಿಕ ತಮ್ಮ ವಿಶಿಷ್ಟ ನಡೆನುಡಿಗಳಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು ಕೆ.ಆರ್‌. ವೃತ್ತದಲ್ಲಿನ ಸರ್‌ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಐಟಿಐ ಓದಿ ಪ್ರಸ್ತುತ ಬೆಸ್ಕಾಂ ಸಿಬ್ಬಂದಿಯಾಗಿರುವ ಚಂದನ್‌ ಎಂಬವರಿಂದ ಮಾಲಾರ್ಪಣೆ ಮಾಡಿಸಿದರು.

ಬಳಿಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಬೊಮ್ಮಾಯಿ, ವಿಶ್ವೇಶ್ವರಯ್ಯ ಅವರ ಜೀವನದ ಧ್ಯೇಯ ಶ್ರಮ ಮತ್ತು ಬುದ್ಧಿಯನ್ನು ಉಪಯೋಗಿಸಿ ನಾಡು ಕಟ್ಟುವುದಾಗಿತ್ತು. ನಿಜವಾಗಿ ನಾಡು ಕಟ್ಟುವವರು ಕೈಯಲ್ಲಿ ಕೆಲಸ ಮಾಡುವ ಶ್ರಮಿಕ ವರ್ಗ. ಹೊಲದಲ್ಲಿ ರೈತರು ಮತ್ತು ಕಾರ್ಮಿಕರಿದ್ದು ಪಿರಮಿಡ್‌ನ ತಳಮಟ್ಟದಲ್ಲಿರುವ ಈ ಜನರು ದೇಶದ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರಾಗಿದ್ದಾರೆ. ಸರ್‌ ಎಂ. ವಿಶ್ವೇಶ್ವರಯ್ಯ ಇವರೆಲ್ಲರನ್ನು ಪ್ರತಿನಿಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರ್‌ ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಚಂದನ್‌ ಅತ್ಯಂತ ಅರ್ಹ ವ್ಯಕ್ತಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ

ಸರ್‌ಎಂವಿ ಸಾಧನೆ ಅಪಾರವಾದದ್ದು. ಕೆಆರ್‌ಎಸ್‌ ಅಣೆಕಟ್ಟಿನಿಂದ ಹಿಡಿದು ಅನೇಕ ಶಿಕ್ಷಣ ಸಂಸ್ಥೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಹಲವಾರು ಕಾರ್ಖಾನೆ, ಮಹಿಳೆಯರಿಗೆ ಮೀಸಲಾತಿ ಮುಂತಾದ ಪ್ರಗತಿ ಪರ ಚಿಂತನೆಯಿಂದ ನಾಡು ಕಟ್ಟಿದ್ದಾರೆ. ನಾವು ಸಹ ಅವರ ಹಾದಿಯಲ್ಲಿ ನಡೆದು ಅವರಂತೆ ನಾಡು ಕಟ್ಟಲು ಸಂಕಲ್ಪ ಮಾಡುವ ದಿನವಿದು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!