ಬರ ಪರಿಸ್ಥಿತಿ ನಡುವೆ ರೈತರಿಂದ ಖರೀದಿಸುವ ಹಾಲಿಗೆ ಬಮೂಲ್ ₹2 ಕಡಿತ!

Published : Nov 07, 2023, 05:04 AM IST
ಬರ ಪರಿಸ್ಥಿತಿ ನಡುವೆ ರೈತರಿಂದ ಖರೀದಿಸುವ ಹಾಲಿಗೆ ಬಮೂಲ್ ₹2 ಕಡಿತ!

ಸಾರಾಂಶ

ಬರ ಪರಿಸ್ಥಿತಿಯ ನಡುವೆಯೇ ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಕಡಿತಗೊಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ನ.1ರಿಂದಲೇ ಜಾರಿಯಾಗುವಂತೆ ಆದೇಶಿಸಿದೆ.

ಬೆಂಗಳೂರು (ನ.7): ಬರ ಪರಿಸ್ಥಿತಿಯ ನಡುವೆಯೇ ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಕಡಿತಗೊಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ನ.1ರಿಂದಲೇ ಜಾರಿಯಾಗುವಂತೆ ಆದೇಶಿಸಿದೆ.

ಬಮೂಲ್‌ ಅಕ್ಟೋಬರ್‌ 31ರವರೆಗೆ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್‌ ಹಾಲಿಗೆ ₹34.15 ನೀಡುತ್ತಿತ್ತು. ಆದರೆ, ನ.1ರಿಂದ ಒಕ್ಕೂಟವು ₹32.15 ಬೆಲೆ ನಿಗದಿ ಮಾಡಿದ್ದು, ₹2 ಕಡಿತಗೊಳಿಸಿದೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 1.10 ಲಕ್ಷ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ರಾಜ್ಯದ ಜನತೆಗೆ ಹಾಲಿನ ದರ ಏರಿಕೆ ಶಾಕ್? ಪ್ರತಿ ಲೀ.ಗೆ 5 ರೂ. ಹೆಚ್ಚಳ?

 

ಬಮೂಲ್‌ ಪ್ರತಿದಿನ ಅಂದಾಜು 15 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಈ ಪೈಕಿ 10 ಲಕ್ಷ ಲೀಟರ್‌ ಹಾಲು ಮಾತ್ರ ನೇರವಾಗಿ ಮಾರಾಟವಾಗುತ್ತಿದ್ದು, ಉಳಿದ ಹಾಲನ್ನು ಹಾಲಿನ ಪುಡಿ ಮತ್ತು ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ಆದರೆ, ಗ್ರಾಹಕರಿಂದ ಹೆಚ್ಚುವರಿಯಾಗಿ ಸಂಗ್ರಹಿಸುತ್ತಿರುವ ₹3 ಮಾರಾಟವಾದ 10 ಲಕ್ಷ ಲೀಟರ್‌ ಜೊತೆಗೆ ಹಾಲಿನ ಉತ್ಪನ್ನವಾಗುತ್ತಿರುವ ಉಳಿದ 5 ಲಕ್ಷ ಲೀಟರ್‌ಗೂ ಕೊಡಬೇಕಿದೆ. ಇದರಿಂದಾಗಿ ಬಮೂಲ್‌ ಪ್ರತಿ ಲೀಟರ್‌ಗೆ ₹1.85 ಸರಾಸರಿ ನಷ್ಟ ಅನುಭವಿಸುತ್ತಿದೆ.

ಹೀಗಾಗಿ ಒಕ್ಕೂಟಕ್ಕೆ ತೀವ್ರ ನಷ್ಟವಾಗಿದ್ದು, ಏಪ್ರಿಲ್‌ 1ರಿಂದ ಈವರೆಗೆ ಇದುವರೆಗೆ ₹60 ಕೋಟಿ ನಷ್ಟ ಅನುಭವಿಸಿದೆ. ಹಾಲು ಖರೀದಿ, ಮಾರಾಟ ಪ್ರಕ್ರಿಯೆಯಲ್ಲಿ ಬಮೂಲ್‌ ಅನುಭವಿಸುತ್ತಿರುವ ನಷ್ಟ ಸರಿದೂಗಿಸುವ ಉದ್ದೇಶದಿಂದ ರೈತರಿಂದ ಖರೀದಿಸುತ್ತಿದ್ದ ಪ್ರತಿ ಲೀಟರ್‌ ಹಾಲಿನಲ್ಲಿ ತಲಾ ₹2 ಕಡಿತಗೊಳಿಸಲಾಗಿದೆ ಎಂದು ಬಮೂಲ್‌ ಮೂಲಗಳು ತಿಳಿಸಿವೆ.

ಕ್ಷೇತ್ರ ಬದಲಾಯಿಸೋಕೆ ಇದು ಟೂರಿಂಗ್‌ ಟಾಕೀಸ್‌ ಅಲ್ಲ: ಚನ್ನಪಟ್ಟಣ ಬಿಟ್ಟು ಹೋಗೊಲ್ಲ: ಕುಮಾರಸ್ವಾಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ