
ಬೆಂಗಳೂರು[ನ.21]: ಆ್ಯಂಬಿಡೆಂಟ್ ಕಂಪನಿ ಮಾಲಿಕ ಫರೀದ್ನಿಂದ ಪಡೆದಿರುವ 20 ಕೋಟಿ ರು.ಗಳನ್ನು 10 ದಿನದೊಳಗೆ ನೀಡುವುದಾಗಿ ಇ.ಡಿ. ಡೀಲ್ ಪ್ರಕರಣದ ಪ್ರಮುಖ ಆರೋಪಿ ಅಲಿಖಾನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮುಚ್ಚಳಿಕೆಯ ಅವಧಿ ಶುಕ್ರವಾರ ಅಂತ್ಯವಾಗಲಿದೆ.
ಸಿಸಿಬಿ ವಶಕ್ಕೆ ಪಡೆಯುವ ಮುನ್ನ ನ್ಯಾಯಾಲಯಕ್ಕೆ ಅಲಿಖಾನ್ ಹಣ ಪಾವತಿಸಿದರೆ ತೊಂದರೆ ತಪ್ಪಬಹುದು. ಇದಾಗದೆ ಹೋದರೆ ಆತನಿಗೆ ತನಿಖೆಯ ಉರುಳು ಬಿಗಿಯಾಗಲಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಗುರುವಾರ ಅಲಿಖಾನ್ನನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಲಿರುವ ಸಿಸಿಬಿ, ಆತನನ್ನು ವಶಕ್ಕೆ ಪಡೆದು ಚಿನ್ನ ಮತ್ತು ನಗದು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ