ಹಮ್ಮುರಾಬಿ ಶಾಸನ: ಆತ್ಮಾಹುತಿ ದಾಳಿಗೆ ಸಿದ್ದವಾದ ಮಂಡ್ಯದ ‘ಚೇತನ’!

By Web DeskFirst Published Feb 17, 2019, 5:08 PM IST
Highlights

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆಯ CRPFನ 40 ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಗೆ ದೇಶದದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು, ದಾಳಿಗೆ ಪ್ರತೀಕಾರ ಪಡೆಯಬೇಂಬ ಕೂಗು ಕೆಳಿ ಬಂದಿದೆ. ಹೀಗಿರುವಾಗ ಮಂಡ್ಯದ ಯುವಕನೊಬ್ಬ ಸೆಲ್ಫೀ ವಿಡಿಯೋ ಮಾಡಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಆ ಮನವಿ ಏನು? ಇಲ್ಲಿದೆ ವಿವರ

ಮಂಡ್ಯ[ಫೆ.17]: ನಗರದ ಗುತ್ತಲು ರಸ್ತೆ ಬಸವನಗುಡಿ ಕಾಲನಿ ನಿವಾಸಿ ಜಿ.ಚೇತನ್(29)ಎಂಬ ಯುವಕ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ತಾನು ದೇಶದ ಪರವಾಗಿ ಆತ್ಮಾಹುತಿ ಬಾಂಬ್ ದಾಳಿ ಮಾಡಲು ಸಿದ್ದನಿದ್ದೇನೆ ಈ ನಿಟ್ಟಿನಲ್ಲಿ ನನ್ನನ್ನು ಉಪಯೋಗಿಸಿಕೊಳ್ಳುವವರು ಸಂಪರ್ಕಿಸಬಹುದು ಎಂದು ವೀಡಿಯೋ ಮಾಡಿದ್ದಾನೆ. 

"

ದಿನಸಿ ಅಂಗಡಿ ವ್ಯಾಪಾರಿಯಾಗಿರುವ ಚೇತನ್ ನ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಯೋಧರ ಬಲಿದಾನ ವ್ಯರ್ಥವಾಗಬಾರದೆಂದು ಪ್ರತೀಕಾರಕ್ಕಾಗಿ ಹಾತೊರೆಯುತ್ತಿರುವ ನೆಟ್ಟಿಗರು ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ.

click me!