ಆಕಾಶದಿಂದ ಇಳಿದುಬಂದ ವಿಚಿತ್ರ ವಸ್ತು ಕಂಡು ಬೆಚ್ಚಿಬಿದ್ದ ಭೀಮಾತೀರದ ಮಂದಿ! ಭೂಮಿಗೆ ಬಂತ ಏಲಿಯನ್‌?

Published : Aug 02, 2024, 10:30 AM ISTUpdated : Aug 02, 2024, 12:12 PM IST
ಆಕಾಶದಿಂದ ಇಳಿದುಬಂದ ವಿಚಿತ್ರ ವಸ್ತು ಕಂಡು ಬೆಚ್ಚಿಬಿದ್ದ ಭೀಮಾತೀರದ ಮಂದಿ! ಭೂಮಿಗೆ ಬಂತ ಏಲಿಯನ್‌?

ಸಾರಾಂಶ

ವಿಜಯಪುರ ಜಿಲ್ಲೆ ವಿಚಿತ್ರ ಘಟನೆಗಳಿಗೆ ಸುದ್ದಿಯಾಗುತ್ತಲೇ ಇದೆ. ಹಲವು ವರ್ಷಗಳಿಂದ ಪದೇಪದೆ ಭೂಕಂಪನ, ನಿಗೂಢ ಸದ್ದು ಇಲ್ಲೇನಾಗುತ್ತಿದೆ ಎಂದೇ ಗಾಬರಿಯಾಗಿ ಜನ ಊರು ಬಿಡುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ಸ್ಥಳೀಯರಲ್ಲಿ ಕೆಲಕಾಲ ಗಾಬರಿಯಾಗಿಸುವಂತೆ ಮಾಡಿದೆ.

ವಿಜಯಪುರ (ಆ.2): ವಿಜಯಪುರ ಜಿಲ್ಲೆ ವಿಚಿತ್ರ ಘಟನೆಗಳಿಗೆ ಸುದ್ದಿಯಾಗುತ್ತಲೇ ಇದೆ. ಹಲವು ವರ್ಷಗಳಿಂದ ಪದೇಪದೆ ಭೂಕಂಪನ, ನಿಗೂಢ ಸದ್ದು ಇಲ್ಲೇನಾಗುತ್ತಿದೆ ಎಂದೇ ಗಾಬರಿಯಾಗಿ ಜನ ಊರು ಬಿಡುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ಸ್ಥಳೀಯರಲ್ಲಿ ಕೆಲಕಾಲ ಗಾಬರಿಯಾಗಿಸುವಂತೆ ಮಾಡಿದೆ.

ಹೌದು ಆಕಾಶದಿಂದ ವಿಚಿತ್ರ ವಸ್ತು ಭೂಮಿಗೆ ಇಳಿಯುವುದನ್ನು ಕಂಡು ಭೀಮಾತೀರದ ಜನ ಬೆಚ್ಚಿಬಿದ್ದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿರುವ ಘಟನೆ. ಆಕಾಶದಿಂದ ಹಾರುತ್ತ ಭೂಮಿಗೆ ಬಿದ್ದಿದ್ದು ಏನು? ಅದ್ಯಾಕೆ ಬಂತು? ಏಲಿಯನ್ ಏನಾದರೂ ಭೂಮಿಗೆ ಬಂತಾ? ಹೀಗೆ ಹಲವು ಅನುಮಾನ ಭೀಮಾತೀರದ ಜನರ ಆತಂಕಕ್ಕೆ ಕಾರಣವಾಯಿತು.

ಚಿಕಿತ್ಸೆ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಷಕರಿಂದ ವೈದ್ಯನಿಗೆ ಬಿತ್ತು ಗೂಸಾ!

ನೋಡನೋಡುತ್ತಲೇ ಆಕಾಶದಿಂದ ಇಳಿದು ಬಂದ ವಿಚಿತ್ರ ವಸ್ತು!

ಎತ್ತರದಲ್ಲಿ ಬಲೂನಿನಂತೆ ಕಂಡ ವಸ್ತು. ನಿಧಾನಕ್ಕೆ ಪ್ಯಾರಾಚೂಟ್ ಮೂಲಕ ನೆಲಕ್ಕೆ ಬಿದ್ದ ವಸ್ತು ಕಂಡು ಗಾಬರಿಯಾದ ಸ್ಥಳೀಯರು. ಹತ್ತಿರಕ್ಕೆ ಹೋಗಿ ನೋಡಿದಾಗ ಬಾಕ್ಸ್, ಮಶೀನ್, ವೈರಿಂಗ್ ಇರುವ ಡಿವೈಸ್ ಕಾಣಿಸಿದೆ. ಬಾಕ್ಸ್ ರೀತಿ ಇರೋ ಡಿವೈಸ್ ಕಂಡು ಗಾಬರಿಯಾದ ಸ್ಥಳೀಯರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಚಡಚಣ ಪೊಲೀಸರು, ತಹಸೀಲ್ದಾರ್ ಡಿವೈಸ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಕೇಂದ್ರ ಹವಾಮಾನ ಇಲಾಖೆಗೆ ಸೇರಿದ ಸೈಂಟಿಫಿಕ್ ಡಿವೈಸ್ ಎಂಬುದು ಬೆಳಕಿಗೆ ಬಂದಿದೆ.

ಭೂಮಿಗೆ ಬಿದ್ದ ವಸ್ತುವಿನ ಬಗ್ಗೆ ಗಾಬರಿಗೊಂಡಿದ್ದ ಸ್ಥಳೀಯರಿಗೆ ಮಾಹಿತಿ ನೀಡಿದ ಅಧಿಕಾರಿಗಳು. ಇದು ಯಾವುದೋ ಅನ್ಯಗ್ರಹ ವಸ್ತು ಅಲ್ಲ. ಭಾರತ ಸರ್ಕಾರದ ರಾಷ್ಟ್ರೀಯ ಪರಮಾಣು ವಿಜ್ಞಾನ ಗಣಿತ ಕೇಂದ್ರಕ್ಕೆ ಸೇರಿದ ವಸ್ತು ಇದಾಗಿದೆ. ಹವಾಮಾನ ಬದಲಾವಣೆ, ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುವ ಪಿಐಎಫ್‌ಆರ್ ವಸ್ತು ಇದು, ಹೈದರಾಬಾದ್ ಸೆಂಟರ್‌ನಿಂದ ಹಾರಿಬಿಡಲಾಗಿದೆ. ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿರಬಹುದು ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ ತಹಸೀಲ್ದಾರರು. ನಿಟ್ಟುಸಿರುವ ಬಿಟ್ಟ ಸ್ಥಳೀಯರು. 

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ: ಬಿಎಸ್‌ವೈ ಬಂಧನ ತಡೆ ಆದೇಶ ಒಂದು ವಾರ ವಿಸ್ತರಣೆ

ವಿಜಯಪುರ ಜಿಲ್ಲೆಯ ಸುತ್ತಮುತ್ತ ವಿಚಿತ್ರ ಸದ್ದು, ಭೂಕಂಪ ಪದೇಪದೆ ಕೇಳಿ ಕೇಳಿ ಆತಂಕದಲ್ಲಿರುವ ಜನರಿಗೆ ಆಕಾಶದಿಂದ ಬಿದ್ದ ನಿಗೂಢ ವಸ್ತು ಮತ್ತಷ್ಟು ಆತಂಕ ತಂದೊಡ್ಡಿತ್ತು. ಇದೀಗ ಆಕಾಶದಿಂದ ಬಿದ್ದ ವಸ್ತು ಹವಾಮಾನ ಇಲಾಖೆಗೆ ಸಂಬಂಧಿಸಿದ ವೈಜ್ಞಾನಿಕ ಡಿವೈಸ್ ಎಂಬುದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ನೆಲದೊಳಗಿಂದ ಬರುತ್ತಿರುವ ನಿಗೂಢ ಶಬ್ದ ಯಾವುದು? ಪದೇಪದೆ ಭೂಕಂಪನ ಅನುಭವ ಯಾಕಾಗುತ್ತಿದೆ? ಈ ಬಗ್ಗೆ ಇನ್ನೂ ಆತಂಕದಲ್ಲಿರುವ ಗ್ರಾಮಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ