
ಬೆಂಗಳೂರು(ಮೇ.26): ಕಳೆದ ಒಂದು ವಾರದಿಂದ ಮಹಾರಾಷ್ಟ್ರದಿಂದ ಆಗಮಿಸುವವರಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆರು ಹೊಸ ಜಿಲ್ಲೆಗಳಲ್ಲಿ ಸೋಂಕು ಪ್ರಕರಣ ಶತಕ ದಾಟಿದ್ದು, ಒಟ್ಟು 8 ಜಿಲ್ಲೆಗಳು ಸೋಂಕಿನಲ್ಲಿ ಶತಕ ಬಾರಿಸಿದಂತಾಗಿದೆ.
ಮೇ 17ಕ್ಕೆ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ 100ಕ್ಕೂ ಹೆಚ್ಚು ಸೋಂಕು ವರದಿಯಾಗಿತ್ತು. ಕಳೆದ 8 ದಿನದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲೇ ಬರೋಬ್ಬರಿ 700ಕ್ಕೂ ಹೆಚ್ಚು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆರು ಜಿಲ್ಲೆಗಳು 100ಕ್ಕೂ ಹೆಚ್ಚು ಸೋಂಕು ದಾಖಲಿಸಿವೆ.
ಅದರಲ್ಲೂ ಮೇ 17ಕ್ಕೆ ಕೇವಲ 50 ಸೋಂಕು ಹೊಂದಿದ್ದ ಮಂಡ್ಯದಲ್ಲಿ ಕಳೆದ 1 ವಾರದಲ್ಲೇ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುವ ಮೂಲಕ ಸೋಂಕಿನ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಬೆಂಗಳೂರಿಗೆ (114) ದುಪ್ಪಟ್ಟು ಸಕ್ರಿಯ ಸೋಂಕು ಹೊಂದಿರುವ ಮಂಡ್ಯ (227) ಸಕ್ರಿಯ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!
8 ಜಿಲ್ಲೆಯಲ್ಲಿ ಶತಕ ದಾಟಿದ ಸೋಂಕು:
ಮೊದಲಿಗೆ ದಾವಣಗೆರೆ, ಮಂಡ್ಯ, ಕಲಬುರಗಿ ಸೋಂಕಿನಲ್ಲಿ ಶತಕ ದಾಖಲಿಸಿತ್ತು. ಭಾನುವಾರ ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಸೋಂಕಿನ ಪ್ರಕರಣದಲ್ಲಿ ಶತಕದ ಗಡಿ ದಾಟಿದ್ದವು. ಸೋಮವಾರ ಉಡುಪಿ ಗಡಿ ದಾಟಿದೆ. ಉಡುಪಿಯಲ್ಲಿ 108 ಪ್ರಕರಣ ದಾಖಲಾಗುತ್ತಿದ್ದಂತೆ 100ಕ್ಕೂ ಹೆಚ್ಚು ಸೋಂಕು ದೃಢಪಟ್ಟಜಿಲ್ಲೆಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ (274), ಮಂಡ್ಯ (254), ಕಲಬುರಗಿ (157), ಬೆಳಗಾವಿ (128), ಚಿಕ್ಕಬಳ್ಳಾಪುರ (126), ಯಾದಗಿರಿ (126), ದಾವಣಗೆರೆ (125), ಉಡುಪಿಯಲ್ಲಿ (108) ಸೋಂಕು ಶತಕದ ಗಡಿ ದಾಟಿದೆ.
ಬೆಂಗಳೂರು ನಗರ 274
ಮಂಡ್ಯ 254
ಕಲಬುರಗಿ 157
ಬೆಳಗಾವಿ 128
ಚಿಕ್ಕಬಳ್ಳಾಪುರ 126
ಯಾದಗಿರಿ 126
ದಾವಣಗೆರೆ 125
ಉಡುಪಿ 108
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ