ಬೆಂಗಳೂರಿನ 40 ಶಾಲೆಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ: ಆತಂಕದಲ್ಲಿ ಪೋಷಕರು

Published : Jul 18, 2025, 11:30 AM ISTUpdated : Jul 18, 2025, 11:54 AM IST
Bengaluru Schools Receive Bomb Threats

ಸಾರಾಂಶ

ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯಲ್ಲಿ ಆತಂಕ ಮನೆ ಮಾಡಿದೆ. Roadkill333atomic@mail.com ಎಂಬ ಐಡಿಯಿಂದ ಬಂದ ಇಮೇಲ್‌ನಲ್ಲಿ ಸ್ಪೋಟಕಗಳನ್ನು ಇರಿಸಲಾಗಿದೆ ಎಂದು ಬರೆಯಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಸದ್ದು ಮಾಡಿದೆ. ಈ ಬಾರಿ ಬರೋಬ್ಬರಿ 40 ಖಾಸಗಿ ಶಾಲೆಗಳಿಗೆ ಒಂದೇ ರೀತಿಯ ಬೆದರಿಕೆ ಇಮೇಲ್ ಆಗಮಿಸಿದ್ದು, ಪೋಷಕರು ಹಾಗೂ ಶಾಲಾ ನಿರ್ವಹಣಾ ಮಂಡಳಿಯಲ್ಲಿ ಭೀತಿ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. Roadkill333atomic@mail.com ಎಂಬ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ರವಾನೆಯಾಗಿದ್ದು, ಆರ್‌ಆರ್ ನಗರ ಮತ್ತು ಕೆಂಗೇರಿ ಭಾಗದ ಶಾಲೆಗಳು ಇದರ ಗುರಿಯಾಗಿವೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಬೆದರಿಕೆ ಇಮೇಲ್‌ನಲ್ಲಿ ಏನಿತ್ತು?

ಅಪರಿಚಿತ ವ್ಯಕ್ತಿಯು ಇಮೇಲ್‌ನಲ್ಲಿ ಬಹುಮಟ್ಟಿಗೆ ಹೃದಯವಿದ್ರಾವಕ ಹಾಗೂ ಹಿಂಸೆ ಪ್ರಚೋದಿಸುವ ಪದಗಳನ್ನು ಬಳಸಿದ್ದಾನೆ. ಶಾಲಾ ತರಗತಿಗಳಲ್ಲಿ ಬ್ಲಾಕ್ ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ನಾನು ಪ್ರಪಂಚದ ಪ್ರತಿಯೊಬ್ಬರನ್ನು ಅಳಿಸಿ ಹಾಕುತ್ತೇನೆ. ಈ ಸುದ್ದಿ ನೋಡಿದಾಗ ನಾನು ನಗುತ್ತೇನೆ, ಸಂತೋಷಪಡುವೆ. ಪೋಷಕರು ತಮ್ಮ ಮಕ್ಕಳ ವಿಕಲಾಂಗ ಸ್ಥಿತಿಯನ್ನು ನೋಡಬೇಕು. ನೀವು ಎಲ್ಲರೂ ಕಷ್ಟ ಅನುಭವಿಸಲು ಅರ್ಹರು. ಈ ಸುದ್ದಿ ಹರಡಿದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆಯಲಾಗಿದೆ.

ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿ ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ನಾನು ಈ ಕುರಿತು ಯಾವುದೇ ಹೇಳಿಕೆ ನೀಡಲ್ಲ. ಇದು ಕಾನೂನು ಮತ್ತು ತನಿಖಾ ಸಂಸ್ಥೆಗಳ ಕಾರ್ಯಕ್ಷೇತ್ರ. ಅವರು ತಕ್ಕ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬೆದರಿಕೆ ಇಮೇಲ್‌ ಪಡೆದ ಪ್ರಮುಖ ಶಾಲೆಗಳ ಪಟ್ಟಿ ಹೀಗಿದೆ:

  • ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್
  • ಸೈಂಟ್ ಜರ್ಮನ್ ಅಕಾಡೆಮಿ
  • ಬಿಎಸ್ ಇಂಟರ್‌ನ್ಯಾಷನಲ್ ಸ್ಕೂಲ್
  • ಮಾರ್ಟಿನ್ ಲೂಥರ್ ಸ್ಕೂಲ್
  • ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್, ಕಬ್ಬನ್ ಪಾರ್ಕ್
  • ಬೆಂಗಳೂರು ಭವನ ಪ್ರೆಸ್ ಸ್ಕೂಲ್, ಚಾಮರಾಜಪೇಟೆ
  • ವಿಸ್ಡಮ್ ಸ್ಕೂಲ್, ಚಾಮರಾಜಪೇಟೆ
  • ಇನ್ನೂ ಹಲವು ಖಾಸಗಿ ಶಾಲೆಗಳು

ಮುಖ್ಯಾಂಶಗಳು:

  • ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್
  • Roadkill333atomic@mail.com ಎಂಬ ಐಡಿಯಿಂದ ಸಂದೇಶ
  • ತರಗತಿಗಳಲ್ಲಿ ಸ್ಪೋಟಕ ಇಡಲಾಗಿದೆ ಎಂದು ತೀವ್ರ ಧಮ್ಕಿ
  • ಮಕ್ಕಳ ಭದ್ರತೆ ಕುರಿತು ಪೋಷಕರಲ್ಲಿ ಆತಂಕ
  • ತನಿಖೆಗೆ ಪೊಲೀಸರು ಕೈಹಾಕುವ ಸಾಧ್ಯತೆ

ಈ ಘಟನೆ ಬೆಳಕಿಗೆ ಬಂದ ತಕ್ಷಣ ಶಾಲೆಗಳ ಭದ್ರತಾ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಇಂತಹ ಬಾಂಬ್ ಬೆದರಿಕೆ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಗಂಭೀರ ವಿಷಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿ.ಕೆ.ಶಿವಕುಮಾರ್‌