ಸಮಾಧಾನಕರ ಸಂಗತಿ: ಬೆಂಗಳೂರಲ್ಲಿ ಸೋಂಕಿತರಿಗಿಂತ ಗುಣ ಆದವರ ಸಂಖ್ಯೆಯೇ ಹೆಚ್ಚು..!

Kannadaprabha News   | Asianet News
Published : Aug 06, 2020, 08:09 AM ISTUpdated : Aug 06, 2020, 08:16 AM IST
ಸಮಾಧಾನಕರ ಸಂಗತಿ: ಬೆಂಗಳೂರಲ್ಲಿ ಸೋಂಕಿತರಿಗಿಂತ ಗುಣ ಆದವರ ಸಂಖ್ಯೆಯೇ ಹೆಚ್ಚು..!

ಸಾರಾಂಶ

ಬುಧವಾರ 1848 ಮಂದಿಗೆ ಸೋಂಕು| 3083 ಮಂದಿ ಗುಣಮುಖರಾಗಿ ಬಿಡುಗಡೆ| ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚು| 24,826 ಕಂಟೈನ್ಮೆಂಟ್‌ ವಲಯ ಈವರೆಗೆ ಸೃಷ್ಟಿ|

ಬೆಂಗಳೂರು(ಆ.06): ರಾಜಧಾನಿ ಬೆಂಗಳೂರಿನಲ್ಲಿ ಸತತ ನಾಲ್ಕು ದಿನದಿಂದ ಹೊಸದಾಗಿ ಸೋಂಕಿತ ಪ್ರಕರಣಗಳಿಗಿಂತ ಹೆಚ್ಚಾಗಿ ಸೋಂಕು ಮುಕ್ತರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ 1,848 ಮಂದಿ ಹೊಸ ಸೋಂಕಿತರು ಪತ್ತೆಯಾದರೆ 3,083 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಆ.2ರಿಂದ ಪ್ರತಿದಿನ ಪತ್ತೆಯಾಗುತ್ತಿರುವ ಸೋಂಕಿತರಿಗಿಂತ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಬುಧವಾರ 3083 ಮಂದಿ ಗುಣಮುಖರಾಗುವ ಮೂಲಕ ಬೆಂಗಳೂರಿನಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 30,960ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಕ್ವಾರಂಟೈನ್‌ ನಿಯಮ ಉಲ್ಲಂಘನೆ: 770 ಜನರ ವಿರುದ್ಧ ಎಫ್‌ಐಆರ್‌

ಬುಧವಾರ ಪತ್ತೆಯಾದ 1,848 ಹೊಸ ಸೋಂಕಿತರ ಪೈಕಿ 1,192 ಪುರುಷರು, 652 ಮಹಿಳೆಯರು, ನಾಲ್ವರು ಲೈಂಗಿಕ ಅಲ್ಪ ಸಂಖ್ಯಾತರಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 64,881ಕ್ಕೆ ಏರಿಕೆಯಾಗಿದೆ. ಇನ್ನು 32,757 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

29 ಮಂದಿ ಸಾವು:

ನಗರದಲ್ಲಿ ಬುಧವಾರ 29 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈ ಪೈಕಿ 19 ಮಂದಿ ಪುರುಷರು, 10 ಮಹಿಳೆಯರಾಗಿದ್ದಾರೆ. ಇದರಲ್ಲಿ 80 ವರ್ಷದ ಮೇಲ್ಪಟ್ಟವರು ಐದು, 23 ವರ್ಷ ಓರ್ವ ಯುವತಿ ಉಳಿದವರು 40ರಿಂದ 80 ವರ್ಷ ವಯೋಮಿತಿಯವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

25 ಸಾವಿರದತ್ತ ಕಂಟೈನ್ಮೆಂಟ್‌ ವಲಯ:

ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, 24,826 ಕಂಟೈನ್ಮೆಂಟ್‌ ವಲಯ ಈವರೆಗೆ ಸೃಷ್ಟಿಯಾಗಿದೆ. ಈ ಪೈಕಿ 10,924 ಕಂಟೈನ್ಮೆಂಟ್‌ ಪ್ರದೇಶ ಕಂಟೈನ್ಮೆಂಟ್‌ ಮುಕ್ತವಾಗಿವೆ. ಇನ್ನು 13,902 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ತಿಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!