ಬೆಂಗಳೂರು: 166 ಸೈಟಿಂದ ಬಿಡಿಎ ಬೊಕ್ಕಸಕ್ಕೆ 21೦ ಕೋಟಿ

Kannadaprabha News   | Asianet News
Published : Jul 12, 2020, 09:48 AM ISTUpdated : Jul 12, 2020, 11:26 AM IST
ಬೆಂಗಳೂರು: 166 ಸೈಟಿಂದ ಬಿಡಿಎ ಬೊಕ್ಕಸಕ್ಕೆ 21೦ ಕೋಟಿ

ಸಾರಾಂಶ

ಬಿಡಿಎ ಹರಾಜಿಗಿಟ್ಟಿದ್ದ 195 ಮೂಲ ನಿವೇಶನಗಳ ಪೈಕಿ 166 ಹರಾಜು| ಇವುಗಳ ಮಾರಾಟದಿಂದ ಒಟ್ಟು 210.82 ಕೋಟಿ ರು. ಬಿಡಿಎಗೆ ಬರಲಿದೆ| ನಿವೇಶನಗಳನ್ನು ಬಿಡ್‌ ಮಾಡಿದವರು ಮೂರು ದಿನಗಳಲ್ಲಿ ಶೇ.25ರಷ್ಟು ಮುಂಗಡ ಹಣ ಕಟ್ಟಬೇಕಿದ್ದು, 52.70 ಕೋಟಿ ರು. ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ|

ಬೆಂಗಳೂರು(ಜು.12): ಸಂಪನ್ಮೂಲವನ್ನು ಕ್ರೋಢೀಕರಿಸುವ ಸಲುವಾಗಿ ಸರ್ಕಾರದ ಆದೇಶದಂತೆ ತನ್ನ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಹಂತದಲ್ಲೇ 200 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ.

"

ಬಿಡಿಎ ಹರಾಜಿಗಿಟ್ಟಿದ್ದ 195 ಮೂಲೆ ನಿವೇಶನಗಳ ಪೈಕಿ 166 ಹರಾಜಾಗಿದ್ದು, ಇವುಗಳ ಮಾರಾಟದಿಂದ ಒಟ್ಟು 210.82 ಕೋಟಿ ರು. ಬಿಡಿಎಗೆ ಬರಲಿದೆ. 195 ಮೂಲೆ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದ್ದು 2500ಕ್ಕೂ ಹೆಚ್ಚು ಮಂದಿ ಬಿಡ್‌ನಲ್ಲಿ ಪಾಲ್ಗೊಂಡಿದ್ದರು. 195 ನಿವೇಶನಗಳ ಪೈಕಿ 10 ನಿವೇಶನಗಳಿಗೆ ಯಾರೂ ಬಿಡ್‌ ಮಾಡಲಿಲ್ಲ. ಬಿಡಿಎ ನಿಗದಿಪಡಿಸಿದ ದರಕ್ಕಿಂತ ಶೇ.5 ಮೌಲ್ಯ ಹೆಚ್ಚಿಗೆ ಬಾರದ ಹಿನ್ನೆಲೆಯಲ್ಲಿ 19 ನಿವೇಶನಗಳ ಹರಾಜನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ 29 ನಿವೇಶನಗಳ ಹರಾಜು ರದ್ದುಗೊಳಿಸಲಾಗಿತ್ತು.

ಕೊರೋನಾ ಆರ್ಭಟ: ಫೀವರ್‌ ಕ್ಲಿನಿಕ್‌ ಜತೆ ತುರ್ತು ಚಿಕಿತ್ಸಾ ಕ್ಲಿನಿಕ್‌

ನಿವೇಶನಗಳನ್ನು ಬಿಡ್‌ ಮಾಡಿದವರು ಮೂರು ದಿನಗಳಲ್ಲಿ ಶೇ.25ರಷ್ಟು ಮುಂಗಡ ಹಣ ಕಟ್ಟಬೇಕಿದ್ದು, 52.70 ಕೋಟಿ ರು. ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ. ಉಳಿದ ಶೇ.75ರಷ್ಟುಹಣವನ್ನು ಬಿಡಿಎಯಿಂದ ಯಶಸ್ವಿ ಬಿಡ್ಡಿಂಗ್‌ ಪತ್ರ ತಲುಪಿದ 45 ದಿನಗಳ ಒಳಗಾಗಿ ಹಣ ಪಾವತಿ ಮಾಡಬೇಕಿದೆ. ತಾಂತ್ರಿಕ ದೋಷ ಉಂಟಾದ ಕಾರಣ ಈ ಬಾರಿ ಬಿಡ್ಡಿಂಗ್‌ ಅವಧಿಯನ್ನು 3 ದಿನ ವಿಸ್ತರಣೆ ಮಾಡಲಾಗಿತ್ತು. ಬಿಡಿಎ ಮುಂದಿನ ವಾರ ಮತ್ತೆ 300 ಮೂಲೆ ನಿವೇಶನಗಳ ಹರಾಜಿಗೆ ಸಿದ್ಧತೆ ಮಾಡಿಕೊಂಡಿದೆ.

ಇಂಜಿನಿಯರ್‌ಗಳಿಗೆ ನೋಟಿಸ್‌

ಬಿಡಿಎ ಮೊದಲ ಹಂತದಲ್ಲಿ 202 ಮೂಲೆ ನಿವೇಶನಗಳನ್ನು ಇ-ಹರಾಜಿಗೆ ಇಟ್ಟಿತ್ತು. ಆದರೆ ಕೊನೆಯ ಹಂತದಲ್ಲಿ ಏಳು ನಿವೇಶನಗಳು ಬಪರ್‌ ಜೋನ್‌ನಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದು ಬಿಡಿಎ ಗಮನಕ್ಕೆ ಬಂದಿತ್ತು. ಹೀಗಾಗಿ ನೋಟಿಫಿಕೇಷನ್‌ ಬಳಿಕ ಏಳು ನಿವೇಶನಗಳನ್ನು ಹರಾಜಿನಿಂದ ಕೈಬಿಡಲಾಗಿದ್ದು, ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾದ ಇಂಜಿನಿಯರ್‌ಗಳಿಗೆ ಬಿಡಿಎ ಆಯುಕ್ತ ಮಹದೇವ್‌ ನೋಟಿಸ್‌ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ಅವರು, ಸರ್ಕಾರದ ಆದೇಶದಂತೆ ಸಂಪನ್ಮೂಲವನ್ನು ಕ್ರೋಢೀಕರಿಸುವ ಪ್ರಯತ್ನದ ಅಂಗವಾಗಿ ಮೂಲೆ ನಿವೇಶನವನ್ನು ಹರಾಜಿಗೆ ಇರಿಸಲಾಗಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ಸಾಮಾನ್ಯ, ಮಧ್ಯಮ ವರ್ಗದ ಮತ್ತು ಅನಿವಾಸಿ ಕರ್ನಾಟಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ​ ಎಂದು ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌