ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾ​ರಾಷ್ಟ್ರದ ಸಚಿವರು ಬೆಳ​ಗಾ​ವಿ​ಗೆ, ಎಂಇ​ಎ​ಸ್‌ ಜತೆ ಚರ್ಚೆ

Published : Nov 29, 2022, 06:30 AM IST
ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾ​ರಾಷ್ಟ್ರದ ಸಚಿವರು ಬೆಳ​ಗಾ​ವಿ​ಗೆ, ಎಂಇ​ಎ​ಸ್‌ ಜತೆ ಚರ್ಚೆ

ಸಾರಾಂಶ

ಮಧ್ಯ​ವ​ರ್ತಿ ಎಂಇ​ಎಸ್‌ ಆಹ್ವಾನದ ಮೇರೆಗೆ ಆಗ​ಮ​ನ, ಚಂದ್ರ​ಕಾಂತ ಪಾಟೀಲ, ದೇಸಾಯಿ ಕುಂದಾ ನಗ​ರಿ​ಗೆ, ಅಂದು ಮರಾ​ಠಿ​ಗರ ಜತೆ ಹೋರಾ​ಟದ ಬಗ್ಗೆ ಚರ್ಚೆ

ಮುಂಬೈ(ನ.29):  ಕರ್ನಾ​ಟಕ-ಮಹಾ​ರಾಷ್ಟ್ರ ನಡು​ವಿನ ಗಡಿ ವಿವಾದ ತಾರ​ಕಕ್ಕೆ ಏರಿ​ರುವ ನಡು​ವೆಯೇ ಗಡಿ ವಿವಾದ ಕುರಿತ ಮಹಾ​ರಾ​ಷ್ಟ್ರದ ನೋಡಲ್‌ ಸಚಿ​ವ​ರಾದ ಚಂದ್ರ​ಕಾಂತ ಪಾಟೀಲ ಹಾಗೂ ಶಂಭು​ರಾಜ ದೇಸಾಯಿ ಅವರು ಡಿ.3ರಂದು ಬೆಳ​ಗಾವಿಗೆ ಭೇಟಿ ನೀಡು​ವು​ದಾಗಿ ಘೋಷಿ​ಸಿ​ದ್ದಾರೆ. ಭೇಟಿಯ ವೇಳೆ ಅವ​ರು ಬೆಳ​ಗಾ​ವಿ​ಯನ್ನು ಮಹಾ​ರಾ​ಷ್ಟ್ರಕ್ಕೆ ಸೇರಿ​ಸ​ಬೇಕು ಎಂದು ಆಗ್ರ​ಹಿ​ಸು​ತ್ತಿ​ರುವ ಮಧ್ಯ​ವರ್ತಿ ಮಹಾ​ರಾಷ್ಟ್ರ ಏಕೀ​ಕ​ರಣ ಸಮಿತಿ (ಎಂಇ​ಎ​ಸ್‌) ಸದ​ಸ್ಯ​ರನ್ನು ಭೇಟಿ ಮಾಡಿ ಸಮಾ​ಲೋ​ಚನೆ ನಡೆ​ಸ​ಲಿ​ದ್ದಾ​ರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಚಂದ್ರ​ಕಾಂತ ಪಾಟೀಲ, ‘ಮಧ್ಯ​ವರ್ತಿ ಮಹಾ​ರಾಷ್ಟ್ರ ಏಕೀ​ಕ​ರಣ ಸಮಿತಿ ಸದ​ಸ್ಯರು ನಮಗೆ ಬೆಳ​ಗಾ​ವಿಗೆ ಭೇಟಿ ನೀಡು​ವಂತೆ ಪತ್ರ ಬರೆ​ದಿ​ದ್ದರು. ಅದ​ಕ್ಕೆಂದೇ ನಾನು ಹಾಗೂ ಶಂಭು​ರಾಜ ದೇಸಾಯಿ ಅವರು ಡಿ.3ರಂದು ಬೆಳ​ಗಾ​ವಿಗೆ ಭೇಟಿ ನೀಡಿ ಅವರ ಜತೆ ಇಡೀ ದಿನ ಮಾತು​ಕತೆ ನಡೆ​ಸು​ತ್ತೇವೆ. ಅಂದು ಚರ್ಚೆ ನಡೆ​ಸೋಣ. ಮುಂದಿನ ಹೋರಾ​ಟ​ದ ದಾರಿ ಆಗ ಸ್ಪಷ್ಟ​ವಾ​ಗು​ತ್ತ​ದೆ’ ಎಂದು ಟ್ವೀಟ್‌ ಮಾಡಿ​ದ್ದಾ​ರೆ.

BORDER DISPUTE: ಗಡಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ : ಪ್ರಹ್ಲಾದ್‌ ಜೋಶಿ

ಮಧ್ಯ​ವರ್ತಿ ಎಂಇ​ಎ​ಸ್‌​ನ​ವರು ಸೋಮ​ವಾರ ಬೆಳ​ಗ್ಗೆ​ಯಷ್ಟೇ ಸಚಿ​ವ​ದ್ವ​ಯ​ರಿಗೆ ಬೆಳ​ಗಾ​ವಿಗೆ ಆಹ್ವಾ​ನಿಸಿ ಪತ್ರ ಬರೆ​ದಿ​ದ್ದರು. ಇದರ ಬೆನ್ನಲ್ಲೇ ಸಚಿ​ವರು ಭೇಟಿಗೆ ಒಪ್ಪಿಗೆ ಸೂಚಿ​ಸಿ​ದ್ದಾ​ರೆ.

ಗಡಿ ವಿವಾ​ದದ ವಿಚಾ​ರಣೆ ಸುಪ್ರೀಂ ಕೋರ್ಟಲ್ಲಿ ನ.30ರಂದು ನಡೆ​ಯ​ಲಿದೆ. ಕರ್ನಾ​ಟ​ಕದ 865 ಹಳ್ಳಿ​ಗಳು ತನಗೆ ಸೇರಿ​ಬೇಕು ಎಂಬುದು ಮಹಾ​ರಾ​ಷ್ಟ್ರದ ಬೇಡಿಕೆ ಆಗಿದೆ. ಈ ಹೋರಾ​ಟ​ದಲ್ಲಿ ಕಾನೂನು ತಂಡ​ದೊಂದಿಗೆ ಸಮ​ನ್ವಯ ಸಾಧಿ​ಸಲು ಇತ್ತೀ​ಚೆಗೆ ಮಹಾ​ರಾಷ್ಟ್ರ ಸರ್ಕಾರ ಇಬ್ಬರೂ ಸಚಿ​ವ​ರನ್ನು ನೋಡಲ್‌ ಮಂತ್ರಿ​ಗ​ಳಾಗಿ ನೇಮಿ​ಸಿ​ತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ : ಸಪ್ಲೈ ಶೇ.20ರಷ್ಟು ಏರಿಕೆ
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ