ಕರ್ನಾಟಕದಲ್ಲಿ ಮತ್ತೆ 175 ಮಂದಿಗೆ ಜೆಎನ್‌.1 ಕೋವಿಡ್‌ ಸೋಂಕು..!

Published : Jan 13, 2024, 05:25 AM ISTUpdated : Jan 13, 2024, 05:28 AM IST
ಕರ್ನಾಟಕದಲ್ಲಿ ಮತ್ತೆ 175 ಮಂದಿಗೆ ಜೆಎನ್‌.1 ಕೋವಿಡ್‌ ಸೋಂಕು..!

ಸಾರಾಂಶ

ಹೊಸದಾಗಿ ಪರೀಕ್ಷೆ ನಡೆಸಿರುವ 181 ಮಾದರಿಗಳಲ್ಲಿ ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌1 ಉಪತಳಿಯ ವೈರಾಣು ಸೋಂಕು ದೃಢಪಟ್ಟಿದೆ. ತನ್ಮೂಲಕ ಈವರೆಗೆ 374 ಮಂದಿಗೆ ಜೆಎನ್‌.1 ದೃಢಪಟ್ಟಂತಾಗಿದೆ.

ಬೆಂಗಳೂರು(ಜ.13):  ರಾಜ್ಯದಲ್ಲಿ ಕೊರೋನಾ ಜಿನೋಮಿಕ್‌ ಸೀಕ್ವೆನ್ಸ್‌ನ ಮೂರನೇ ಹಂತದ ವರದಿ ಬಂದಿದ್ದು, ಹೊಸದಾಗಿ ಪರೀಕ್ಷೆ ನಡೆಸಿರುವ 181 ಮಾದರಿಗಳಲ್ಲಿ ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌1 ಉಪತಳಿಯ ವೈರಾಣು ಸೋಂಕು ದೃಢಪಟ್ಟಿದೆ. ತನ್ಮೂಲಕ ಈವರೆಗೆ 374 ಮಂದಿಗೆ ಜೆಎನ್‌.1 ದೃಢಪಟ್ಟಂತಾಗಿದೆ.

ಎರಡನೇ ಹಂತದ ಜಿನೋಮಿಕ್‌ ಸೀಕ್ವೆನ್ಸ್‌ (ವಂಶವಾಹಿ ಸಂರಚನೆ ವಿಶ್ಲೇಷಣೆ) ವರದಿ ವೇಳೆಗೆ 262 ಮಾದರಿಗಳ ಪರೀಕ್ಷೆಯಲ್ಲಿ 199 ಜೆಎನ್‌.1 (ಶೇ.76) ಉಪತಳಿಯ ಸೋಂಕು ಎಂದು ಸಾಬೀತಾಗಿತ್ತು. ಇದೀಗ ಶುಕ್ರವಾರ ಹೆಚ್ಚುವರಿ 181 ಮಾದರಿಗಳ ವರದಿ ಬಂದಿದ್ದು, ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌.1 ಸಾಬೀತಾಗಿದೆ.

ಸಸ್ಯಾಹಾರಿಗಳಿಗೆ ಕೋವಿಡ್‌ ಬರುವ ಸಾಧ್ಯತೆ ಶೇ.39ರಷ್ಟು ಕಡಿಮೆ; ಹೊಸ ಅಧ್ಯಯನ

ತನ್ಮೂಲಕ ಈವರೆಗೆ 443 ಮಾದರಿಗಳ ಫಲಿತಾಂಶ ಬಂದಂತಾಗಿದ್ದು, ಈ ಪೈಕಿ 374 (ಶೇ.84) ಜೆಎನ್‌.1 ಮಾದರಿಯದ್ದು ಎಂದು ಸಾಬೀತಾಗಿದೆ. ಉಳಿದಂತೆ ಎಕ್ಸ್‌ಬಿಬಿ 30 (ಶೇ.7) ಹಾಗೂ ಇತರೆ 39 (ಶೇ.9) ಸೋಂಕು ಪತ್ತೆಯಾಗಿದೆ.

ಶುಕ್ರವಾರ 163 ಮಂದಿಗೆ ಸೋಂಕು:

ಇನ್ನು ಶುಕ್ರವಾರ ರಾಜ್ಯದಲ್ಲಿ 163 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 6,396 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.2.45 ಪಾಸಿಟಿವಿಟಿ ದರದಂತೆ 163 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸಕ್ರಿಯ ಸೋಂಕು 814ಕ್ಕೆ ಇಳಿಕೆಯಾಗಿದ್ದು, ಇದರಲ್ಲಿ 60 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 14 ಹಾಗೂ ನಾಲ್ಕು ಮಂದಿ ವೆಂಟಿಲೇರ್‌ನಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಬೆಂಗಳೂರು ನಗರ 50, ಮೈಸೂರು 27, ಹಾಸನ 10, ಬೆಂಗಳೂರು ಗ್ರಾಮಾಂತರ 8, ದಕ್ಷಿಣ ಕನ್ನಡ 7, ಧಾರವಾಡ 6, ಬಳ್ಳಾರಿ, ಚಿತ್ರದುರ್ಗ ತಲಾ 5 ಸೇರಿ 163 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್