ಕಾರವಾರದಲ್ಲಿ ವಿವಾಹಕ್ಕೆ ಬಂದವರು ಹೊರಕ್ಕೆ, ಮಂಡ್ಯದಲ್ಲಿ 15 ಸಾವಿರ ದಂಡ

Published : Apr 23, 2021, 09:56 AM IST
ಕಾರವಾರದಲ್ಲಿ ವಿವಾಹಕ್ಕೆ ಬಂದವರು ಹೊರಕ್ಕೆ, ಮಂಡ್ಯದಲ್ಲಿ 15 ಸಾವಿರ ದಂಡ

ಸಾರಾಂಶ

ವಿವಾಹ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನದ ಮಾಲೀಕರಿಗೆ 15 ಸಾವಿರ ರು. ದಂಡ| ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ನಡೆದ ವಿವಾಹ| ವಿವಾಹದಲ್ಲಿ 50 ಜನರನ್ನು ಹೊರತು ಪಡಿಸಿ ಉಳಿದವರನ್ನು ಹೊರಗೆ ಕಳುಹಿಸಿದ ಅಧಿಕಾರಿಗಳು ಮತ್ತು ಪೊಲೀಸರು| 

ಕಾರವಾರ/ಮಂಡ್ಯ(ಏ.23): ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೆಚ್ಚು ಜನ ಸೇರಿದ್ದ ಹಿನ್ನೆಲೆಯಲ್ಲಿ ಮದುವೆ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮತ್ತು ಪೊಲೀಸರು 50 ಜನರನ್ನು ಹೊರತು ಪಡಿಸಿ ಉಳಿದವರನ್ನು ಹೊರಗೆ ಕಳುಹಿಸಿದ ಘಟನೆ ಕಾರವಾರದಲ್ಲಿ ನಡೆದಿದ್ದರೆ, ಮಂಡ್ಯದಲ್ಲಿ ವಿವಾಹ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನದ ಮಾಲೀಕರಿಗೆ 15 ಸಾವಿರ ರು. ದಂಡ ವಿಧಿಸಲಾಗಿದೆ. 

ಆದರೆ, ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ನಡೆದ ವಿವಾಹದಲ್ಲಿ ಹೆಚ್ಚಿನ ಜನ ಸೇರಿದ್ದರು. ಹೀಗಾಗಿ ಅಧಿಕಾರಿಗಳು 50 ಜನಕ್ಕೆ ಮಾತ್ರ ಅಲ್ಲಿ ಇರಲು ಅವಕಾಶ ನೀಡಿ ಉಳಿದವರನ್ನು ಹೊರಕ್ಕೆ ಕಳುಹಿಸಿದರು. 

ಇಂದು ರಾತ್ರಿಯಿಂದ 57 ತಾಸು ವೀಕೆಂಡ್‌ ಕರ್ಫ್ಯೂ: ಸುಮ್‌ ಸುಮ್ನೆ ತಿರುಗಾಡೋ ಹಾಗಿಲ್ಲ..!

ಇನ್ನು ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀಯೋಗಿ ನಾರಾಯಣ ಸಮುದಾಯ ಭವನದಲ್ಲಿ 200ಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ವಿವಾಹ ನಿಶ್ಚಿತಾರ್ಥ ನಡೆಸಲಾಗುತ್ತಿತ್ತು. ಅಧಿಕಾರಿಗಳು ದಾಳಿ ನಡೆಸಿ ಸಮುದಾಯಭವನದ ಮಾಲೀಕರಿಗೆ 15 ಸಾವಿರ ದಂಡ ವಿಧಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
80ನೇ ಸ್ವಾತಂತ್ರ್ಯ ದಿನ: 72,000 ಸರ್ಕಾರಿ ನೌಕರಿ, ಉಚಿತ ಕೋಡಿಂಗ್, AI ವಿವಿ ಘೋಷಿಸಿದ ಸಿಎಂ ಡಿ.ಕೆ.ಶಿವಕುಮಾರ್!