ಕರ್ನಾಟಕ ಕಾರಾಗೃಹದ ಜೈಲರ್, ವಾರ್ಡರ್ ಹುದ್ದೆಯ ಲಿಖಿತ ಪರೀಕ್ಷೆ ಮುಂದೂಡಿಕೆ

By Web DeskFirst Published May 15, 2019, 9:32 PM IST
Highlights

ಜೈಲರ್, ವಾರ್ಡನ್ ಹುದ್ದೆಯ ಲಿಖಿತ ಪರೀಕ್ಷೆ ಮುಂದೂಡಿಕೆ |  ಮೇ 19ಕ್ಕೆ ನಿಗದಿಯಾಗಿದ್ದ ಜೈಲರ್, ವಾರ್ಡನ್ ಹುದ್ದೆ ಪರೀಕ್ಷೆ ಕಾರಣಾಂತರಗಳಿಂದ ಜೈಲರ್, ವಾರ್ಡನ್ ಹುದ್ದೆ ಪರೀಕ್ಷೆ ಮುಂದೂಡಿಕೆ| ಪರೀಕ್ಷೆ ಮುಂದೂಡಿ ಎಡಿಜಿಪಿ ರಾಘವೇಂದ್ರ ಔರಾದ್ಕರ್ ಆದೇಶ.

ಬೆಂಗಳೂರು,[ಮೇ.15]: ಕರ್ನಾಟಕ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡರ್ ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆಯಾಗಿವೆ.   

ದಿನಾಂಕ 19/5/2019ರಂದು ನಿಗದಿಯಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎಡಿಜಿಪಿ ರಾಘವೇಂದ್ರ ಔರಾದ್ಕರ್ ಇಂದು [ಬುಧವಾರ] ಪ್ರಕಟಣೆ ಮೂಲಕ ಆದೇಶ ಹೊರಡಿಸಿದ್ದಾರೆ.

ಜೈಲರ್, ವಾರ್ಡರ್ ಹುದ್ದೆಗಳಿಗೆ ಕರ್ನಾಟಕ ಕಾರಾಗೃಹ ಇಲಾಖೆ ಅರ್ಜಿ ಆಹ್ವಾನ

ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 662 ಜೈಲರ್ ಮತ್ತು ವಾರ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 9 ,2019 ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದ್ರೆ, ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪರಿಷ್ಕೃತ ಹೊಸ ದಿನಾಂಕವನ್ನು ಕರ್ನಾಟಕ ಕಾರಾಗೃಹ ಇಲಾಖೆ ಪ್ರಕಟಿಸಿಲ್ಲ.ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಎಡಿಜಿಪಿ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಕಚೇರಿಯ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

click me!