
ಸದ್ಯ ಟೀಂ ಇಂಡಿಯಾದ ಬೌಲಿಂಗ್ ಶಕ್ತಿ ಅಂದ್ರೆ ಅದು ಗುಜರಾತ್ ಎಕ್ಸ್'ಪ್ರೆಸ್ ಜಸ್ಪ್ರೀತ್ ಬುಮ್ರಾ. ಈತ ಬೌಲ್ ಹಿಡಿದು ಕ್ರೀಸ್ ಬಳಿ ಬಂದ್ರೆ ಎದುರಾಳಿ ಬ್ಯಾಟ್ಸ್ಮನ್ ತನ್ನ ಕಾಲು ಬೆರಳುಗಳನ್ನ ಮುಟ್ಟಿ ನೋಡಿಕೊಳ್ತಾನೆ. ಯಾಕಂದ್ರೆ ಯಾವ ಕ್ಷಣದಲ್ಲಾದ್ರೂ ಅವನ ಕಾಲಬೆರಳುಗಳು ಮುರಿಯುವ ಚಾನ್ಸಸ್ ಇರುತ್ತೆ. ಅಷ್ಟರ ಮಟ್ಟಿಗೆ ತನ್ನ ಯರ್ಕರ್ ಬಾಲ್ಗಳಿಂದ ವಿಶ್ವ ಕ್ರಿಕೆಟ್ನಲ್ಲಿ ಭಯ ಹುಟ್ಟಿಸಿದ್ದಾನೆ ಜಸ್ಪ್ರೀತ್ ಬುಮ್ರಾ. ಸದ್ಯ ವಿಶ್ವದ ಬೆಸ್ಟ್ ಯಾರ್ಕರ್ ಬೌಲರ್ ಅಂದ್ರೆ ಅದು ಬುಮ್ರಾನೇ.
ನಿಮ್ಮನ್ನ ಬೆಚ್ಚಿಬೀಳಿಸಲಿದೆ ಈತನ ಯಾರ್ಕರ್ ಸೀಕ್ರೇಟ್..!
ಪ್ರತಿಯೊಂದು ಸಾಧನೆಯ ಹಿಂದೆ ಒಬ್ಬ ಗುರು ಇದ್ದೇ ಇರ್ತಾನೆ ಎಂಬ ಮಾತಿದೆ. ಹಾಗೇ ಬುಮ್ರಾ ಯಾರ್ಕರ್ ಬಾಲ್ಗಳ ಹಿಂದೆನೂ ಒಬ್ಬ ಗುರು ಇದ್ದಾನೆ. ಆದ್ರೆ ಅದು ಯಾರು ಅಂತ ತಿಳಿದ್ರೆ ಮಾತ್ರ ನೀವು ಒಂದು ಕ್ಷಣ ದಂಗಾಗ್ತೀರಾ. ಬುಮ್ರಾ ಯಾರ್ಕರ್ ಕಲಿತ್ತಿದ್ದು ಇವರಿಂದಾನಾ ಅಂತ ಅಚ್ಚರಿ ಪಡ್ತೀರಾ. ಕಾರಣ ಬುಮ್ರಾ ಬೌಲಿಂಗ್ ಹಿಂದೆ ಇರುವುದು ಭಾರತದ ಬದ್ಧ ವೈರಿ ಪಾಕಿಸ್ತಾನ.
ಪಾಕಿಗಳಿಂದ ಯಾರ್ಕರ್ ಮಾಡೋದನ್ನ ಕಲಿತ ಬುಮ್ರಾ
ಬುಮ್ರಾ ಈ ಪರಿಯ ಯಾರ್ಕರ್ ಮಾಡೋದನ್ನ ಕಲಿತ್ತಿದ್ದು ಪಾಕಿಸ್ತಾನದ ಮಾಜಿ ಬೌಲರ್ಗಳಿಂದ ಅಂತೆ. ಹೀಗಂತ ಸ್ವತಃ ಬುಮ್ರಾ ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಜಸ್ಪ್ರೀತ್ ಹೆಚ್ಚು ಹೆಚ್ಚು ಪಾಕಿಸ್ತಾನದ ಪಂದ್ಯಗಳನ್ನ ವೀಕ್ಷಿಸುತ್ತಿದ್ದರಂತೆ. ಅದರಲ್ಲೂ ವಾಸಿಂ ಅಕ್ರಂ ಮತ್ತು ವಾಖರ್ ಯೂನಿಸ್ರ ಬೌಲಿಂಗ್ ಅನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದರಂತೆ.
ಚಿಕ್ಕವನಿದ್ದಾಗ ಪಾಕಿಸ್ತಾನದ ಯಾರ್ಕರ್ ಕಿಂಗ್ಸ್ಗಳಾದ ಅಕ್ರಂ, ವಾಖರ್ ಯೂನಿಸ್ ಬೌಲಿಂಗ್ ನೋಡಿ ವಿಕೆಟ್ಗಳನ್ನ ಪಡೀಬೇಕಾದ್ರೆ ಡೆಡ್ಲಿ ಯಾರ್ಕರ್ ಸೂಕ್ತ ಅಸ್ತ್ರ ಎಂದು ನಿರ್ಧರಿಸಿಬಿಟ್ಟಿದ್ರು. ಹೀಗಾಗಿ ಅಂದಿನಿಂದಲೇ ಸಮಯ ಸಿಕ್ಕಾಗಲೆಲ್ಲಾ ತಮ್ಮ ಮನೆಯ ಹಾಲ್ನಲ್ಲೇ ಗೋಡೆಯ ತುದಿಗೆ ಬೌಲ್ ಮಾಡುತ್ತಿದ್ರು.
ಡೆಡ್ಲಿ ಯಾರ್ಕರ್ಗಳಿಗೆ ಪಾಲಿಶ್ ಮಾಡಿದ್ದ ಮಾಲಿಂಗ
ವಿಕೆಟ್ ಪಡೆಯಬೇಕಾದರೆ ಯಾರ್ಕರ್ ಅತ್ಯವಶ್ಯಕ ಎಂದು ಇನ್ನಿಲ್ಲದಂತೆ ಯಾರ್ಕರ್ಗಳನ್ನ ಎಸೆಯುತ್ತಿದ್ದ ಬುಮ್ರಾ, ಬೆಸ್ಟ್ ಆಗಿದ್ದು ಲಂಕಾದ ಲಸಿತ್ ಮಲಿಂಗರಿಂದ. IPLನಲ್ಲಿ ಮುಂಬೈ ಪರ ಆಡುತ್ತಿದ್ದ ವೇಳೆ ಬುಮ್ರಾನ ಬೌಲಿಂಗ್ ನೋಡಿದ್ದ ಯಾರ್ಕರ್ ಲೆಜೆಂಡ್ ಮಾಲಿಂಗ ಆತನ ಬೌಲಿಂಗ್ ಅನ್ನ ಫೈನ್ ಟ್ಯೂನ್ ಮಾಡಿದ್ರು. ಅಷ್ಟೇ ಅಲ್ಲ ವಿಶ್ವವೇ ದಂಗುಬಡಿಸುವಂತಹ ಯಾರ್ಕರ್ ಎಸೆಯಲು ಸಹಕರಿಸಿದ್ರು.
ಇದು ಟೀಂ ಇಂಡಿಯಾದ ಫ್ರಂಟ್ ಲೈನ್ ಬೌಲರ್ ಜಸ್ಪ್ರೀತ್ ಬುಮ್ರಾನ ಯಾರ್ಕರ್ ಸೀಕ್ರೇಟ್. ಚಿಕ್ಕ ವಯಸಿನಿಂದಲೂ ಯಾರ್ಕರ್ಗೆ ಮನಸೋತಿದ್ದ ಬುಮ್ರಾ, ಅದಕ್ಕಾಗಿ ಬದ್ಧ ವೈರಿಗಳನ್ನೇ ಗುರುಗಳನ್ನಾಗಿ ಸ್ವೀಕರಿಸಿ ಏಕಲವ್ಯನ ಹಾಗೆ ಒಬ್ಬಂಟಿಯಾಗಿ ಯಾರ್ಕರ್ ಎಸೆಯೋದನ್ನ ಕಲಿತು ಈಗ ವಿಶ್ವದ ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.