ಚಾಂಪಿ​ಯನ್‌ ಸಿಂಧುಗೆ ತವ​ರಲ್ಲಿ ಭರ್ಜರಿ ಸ್ವಾಗ​ತ!

Published : Aug 28, 2019, 09:55 AM IST
ಚಾಂಪಿ​ಯನ್‌ ಸಿಂಧುಗೆ ತವ​ರಲ್ಲಿ ಭರ್ಜರಿ ಸ್ವಾಗ​ತ!

ಸಾರಾಂಶ

ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ ಪಿವಿ ಸಿಂಧು ತವರಿಗೆ ಮರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಂಧುಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.   ಬಳಿಕ ಪ್ರಧಾನಿ ಮೋದಿ, ಕ್ರೀಡಾ ಸಚಿವ ಕಿರಣ್ ರಿಜಿಜು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ನವ​ದೆ​ಹ​ಲಿ(ಆ.28): ಭಾರ​ತದ ಮೊದಲ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿ​ಯನ್‌ ಪಿ.ವಿ.​ಸಿಂಧುಗೆ ತವರಿ​ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸ್ವಿಜರ್‌ಲೆಂಡ್‌ನಿಂದ ಸೋಮವಾರ ತಡ​ರಾತ್ರಿ ಇಲ್ಲಿನ ಇಂದಿರಾ ಗಾಂಧಿ ಅಂತಾ​ರಾ​ಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿ​ಳಿದ ಸಿಂಧು ಅವ​ರನ್ನು ನೂರಾರು ಅಭಿ​ಮಾ​ನಿ​ಗಳು ಭರ ಮಾಡಿ​ಕೊಂಡರು. ಅವರ ಜತೆ ಕೋಚ್‌ ಪುಲ್ಲೇಲಾ ಗೋಪಿ​ಚಂದ್‌ ಸಹ ಇದ್ದರು.

ಇದನ್ನೂ ಓದಿ: ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

ಸತತ ಪಂದ್ಯಗಳು, ಪ್ರಯಾ​ಣ​ದಿಂದ ದಣಿ​ದಿ​ದ್ದರೂ ಸಿಂಧು ವಿಮಾನ ನಿಲ್ದಾಣದಲ್ಲಿ ಅಭಿ​ಮಾ​ನಿ​ಗಳ ಜತೆ ಸಂಭ್ರ​ಮ​ದಲ್ಲಿ ಭಾಗಿ​ಯಾ​ದರು. ಮಾಧ್ಯ​ಮ​ಗ​ಳೊಂದಿಗೆ ಮಾತ​ನಾ​ಡಿದ ಸಿಂಧು, ‘ನ​ನಗೆ ಬಹಳ ಸಂತೋಷವಾಗಿದೆ. ನನ್ನ ದೇಶದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಈ ಗೆಲು​ವಿ​ಗಾಗಿ ಬಹಳ ದಿನ​ಗ​ಳಿಂದ ಕಾಯು​ತ್ತಿದೆ. ಸ್ವಿಜರ್‌ಲೆಂಡ್‌ನಲ್ಲಿ ಸಂಭ್ರ​ಮಿ​ಸಲು ಹೆಚ್ಚು ಸಮಯ ಸಿಗಲಿಲ್ಲ. ಈಗ ಎಲ್ಲ​ರೊಂದಿಗೆ ಸಂಭ್ರ​ಮಿ​ಸು​ತ್ತೇನೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಮತ್ತಷ್ಟುಶ್ರಮಿ​ಸು​ತ್ತೇ​ನೆ’ ಎಂದರು.

ಇದನ್ನೂ ಓದಿ: ನನ್ನನ್ನು ಪ್ರಶ್ನಿ​ಸಿ​ದ​ವ​ರಿಗೆ ಉತ್ತರ ನೀಡಿ​ದ್ದೇನೆ: ಸಿಂಧು!

ಮಂಗ​ಳ​ವಾರ ಸಿಂಧು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರೆನ್‌ ರಿಜಿಜು ಅವ​ರನ್ನು ಭೇಟಿ ಮಾಡಿ​ದರು. ಸಿಂಧು ಕೊರ​ಳಿಗೆ ವಿಶ್ವ ಚಾಂಪಿ​ಯನ್‌ಶಿಪ್‌ ಪದಕ ಹಾಕಿ, ಮೋದಿ ಅಭಿ​ನಂದಿ​ಸಿ​ದರು. ರಿಜಿಜು ಜತೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿ​ಸಿದ ಸಿಂಧು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವ​ರಿ​ಸಿ​ದರು. ಸಿಂಧು ಜತೆ ಕೋಚ್‌ಗಳಾದ ಗೋಪಿ​ಚಂದ್‌, ಕಿಮ್‌ ಜಿ ಹ್ಯುನ್‌, ಭಾರ​ತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಮುಖ್ಯಸ್ಥ ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ತಂದೆ ಪಿ.ವಿ.​ರ​ಮಣ ಇದ್ದರು.

ಕ್ರೀಡಾ ಸಚಿ​ವರು ಸಿಂಧು​ಗೆ .10 ಲಕ್ಷ ಬಹು​ಮಾನ ನೀಡಿ ಅಭಿ​ನಂದಿ​ಸಿ​ದರು. ಮಂಗ​ಳ​ವಾ​ರ ಸಂಜೆ ಸಿಂಧು ತಮ್ಮ ತವ​ರೂರು ಹೈದ​ರಾ​ಬಾದ್‌ಗೆ ತೆರ​ಳಿ​ದರು. ಅಲ್ಲೂ ಸಹ ಅವ​ರಿಗೆ ಭರ್ಜರಿ ಸ್ವಾಗತ ಸಿಕ್ಕಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!