ಇಂಡೋ-ಪಾಕ್ ಕದನ: ಮಜಾ ಬಂತು ಎಂದ ಸೆಹ್ವಾಗ್...!

Published : Jun 23, 2018, 02:52 PM IST
ಇಂಡೋ-ಪಾಕ್ ಕದನ: ಮಜಾ ಬಂತು ಎಂದ ಸೆಹ್ವಾಗ್...!

ಸಾರಾಂಶ

ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ.

ದುಬೈ[ಜೂ.23]: ಚೊಚ್ಚಲ ಆವೃತ್ತಿಯ ‘ಕಬಡ್ಡಿ ಮಾಸ್ಟರ್ಸ್‌ ದುಬೈ 2018’ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 36-20 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದ ಭಾರತ ತಂಡ ಸುಲಭವಾಗಿ ಗೆಲುವಿನ ನಗೆ ಬೀರಿದೆ.

ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ. ಇನ್ನು ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಎದುರಿಸಲಿದೆ. ಆ ಬಳಿಕ ಮತ್ತೊಮ್ಮೆ ಪಾಕಿಸ್ತಾನವನ್ನು ಜೂನ್ 25ರಂದು ಭಾರತ ತಂಡವು ಎದುರಿಸಲಿದೆ.

ಭಾರತ-ಪಾಕಿಸ್ತಾನ ಕಬಡ್ಡಿ ಪಂದ್ಯವನ್ನು ವೀಕ್ಷಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಕಬಡ್ಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
’ಚೊಚ್ಚಲ ಕಬಡ್ಡಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಮಜಾ ಆ ಗಯಾ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಕಬಡ್ಡಿ ಕರ್ಫ್ಯೂ ಎಂಬ ಹ್ಯಾಷ್’ಟ್ಯಾಗ್ ಅನ್ನೂ ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?