
ಮುಂಬೈ(ಮೇ.24): ಹೀನಾಯ ಪ್ರದರ್ಶನ ನೀಡಿದ ರಾಯಲ್ಸ್ ಚಾಲೆಂಜರ್ಸ್ ಆಪ್ ಬೆಂಗಳೂರು 11ನೇ ಆವೃತ್ತಿಯ ಪ್ಲೇಆಪ್ ಹಂತ ಪ್ರವೇಶಿಸದಿರುವ ಬಗ್ಗೆ ತುಟಿ ಬಿಚ್ಚಿದ್ದಾರೆ. ಟ್ವಿಟರ್'ನಲ್ಲಿ ಪೋಸ್ಟ್ ಮಾಡಿರುವ ಅವರು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.
'ಒಂದು ನೀನು ಗೆಲುವು ಸಾಧಿಸು ಅಥವಾ ಪಾಠ ಕಲಿ' ಎಂಬ ತತ್ತ್ವದಲ್ಲಿ ನಿಜವಾಗಲು ನಂಬಿಕೆಯಿಟ್ಟಿದ್ದೇನೆ. ಈ ಸಲ ನಮ್ಮ ಕಡೆಯಿಂದ ಆದ ತಪ್ಪುಗಳನ್ನು ತದ್ದಿಕೊಂಡು ಮುಂದಿನ ಆವೃತ್ತಿಯಲ್ಲಿ ಖಂಡಿತವಾಗಿ ಟ್ರೋಫಿ ಗೆಲ್ಲಲು ಸಾಧ್ಯವಾದಷ್ಟು ಕಠಿಣ ಪ್ರಯತ್ನ ನಡೆಸುತ್ತೇವೆ' ಎಂದು ತಿಳಿಸಿದ್ದಾರೆ.
ರಾಯಲ್ಸ್ ಚಾಲೆಂಜರ್ಸ್ ಆಪ್ ಬೆಂಗಳೂರು ಈ ಆವೃತ್ತಿಯ 14 ಪಂದ್ಯಗಳಲ್ಲಿ 8 ರಲ್ಲಿ ಸೋತು 6 ರಲ್ಲಿ ಮಾತ್ರ ಗೆಲುವು ಸಾಧಿಸಿ ಪ್ಲೇಆಫ್'ನಿಂದ ನಿರ್ಗಮಿಸಿತ್ತು. ಮೇ.25 ಕ್ಲಾಲಿಫೈಯರ್ 2ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ. ಇವೆರಡು ತಂಡಗಳಲ್ಲಿ ಗೆಲುವು ಸಾಧಿಸಿದ ತಂಡ ಮೇ.27 ರಂದು ಮುಂಬೈ'ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.